ತುಳಸಿ ಗಿಡದ ಬಳಿ ಈ ವಸ್ತುಗಳನ್ನಿಡೋ ತಪ್ಪು ಮಾಡ್ಬೇಡಿ…

First Published Jul 14, 2022, 7:04 PM IST

ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಮಹತ್ವವಿದೆ. ದೈವಿಕ ಶಕ್ತಿಗಳಿಂದ ತುಂಬಿರುವ ತುಳಸಿ ಗಿಡವನ್ನು ಪೂಜಿಸುವ ಮೂಲಕ, ವ್ಯಕ್ತಿಯು ಪ್ರತಿಯೊಂದು ದುಃಖವನ್ನು ತೊಡೆದುಹಾಕುತ್ತಾನೆ ಎಂದು ಶಾಸ್ತ್ರಗಳು ತಿಳಿಸಿವೆ. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಸಹ ತುಳಸಿ ಗಿಡವನ್ನು, ಕಟ್ಟೆ ಸಮೇತ ಮನೆ ಮುಂದೆ ಇಡುತ್ತಾರೆ. ಇದರಿಂದ ಮನೆಗೆ ಉತ್ತಮವಾದುದೇ ನಡೆಯುತ್ತೆ ಎಂದು ನಂಬಲಾಗಿದೆ. ಆದರೆ ತುಳಸಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅವಾಯ್ಡ್ ಮಾಡಬೇಕು. ತುಳಸಿಗೆ ಸಂಬಂಧಿಸಿದ ಯಾವ ನಿಯಮಗಳನ್ನು ಅನುಸರಿಸಬೇಕು ಅನ್ನೋದನ್ನು ತಿಳಿಯಿರಿ. ಇದನ್ನು ತಿಳಿಯುವ ಮೂಲಕ ನೀವು ವಾಸ್ತು ಸಮಸ್ಯೆಯನ್ನು ನಿವಾರಿಸಬಹುದು. 

ಹಿಂದೂ ಧರ್ಮದಲ್ಲಿ ತುಳಸಿಗೆ(Tulsi) ಹೆಚ್ಚಿನ ಮಹತ್ವವಿದೆ. ತುಳಸಿ ಸಸ್ಯವು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜೊತೆಗೆ ಪವಾಡ ಸದೃಶವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯದಲ್ಲಿ ತಾಯಿ ಲಕ್ಷ್ಮಿ ವಾಸವಾಗಿರುತ್ತಾಳೆ. ಅಲ್ಲದೇ ಭಗವಾನ್ ವಿಷ್ಣುವಿಗೂ ಸಹ ತುಳಸಿ ತುಂಬಾ ಪ್ರಿಯವಾದ ವಸ್ತುವಾಗಿದೆ. ಆದ್ದರಿಂದ, ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ತುಳಸಿಗೆ ನೀರನ್ನು ಅರ್ಪಿಸುವುದು ಮತ್ತು ಸಂಜೆ ತುಪ್ಪದ ದೀಪ ಬೆಳಗಿಸುವುದು ಶುಭವೆಂದು ಪರಿಗಣಿಸಲಾಗಿದೆ.

ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ಹೆಚ್ಚಿನ ಮಹತ್ವವಿದೆ. ತುಳಸಿಯನ್ನು ಮನೆಯಲ್ಲಿ ಇಡೋದ್ರಿಂದ ವಾತಾವರಣವು ಪರಿಶುದ್ಧವಾಗುವುದರೊಂದಿಗೆ ಧನಾತ್ಮಕ ಶಕ್ತಿಯ ಹರಿವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸಂಪತ್ತಿನ ಪ್ರಯೋಜನಗಳನ್ನು ತರುತ್ತದೆ. ಆದರೆ ಅನೇಕ ಬಾರಿ ತುಳಸಿಗೆ ಸಂಬಂಧಿಸಿದ ಕೆಲವು ವಾಸ್ತು(Vaastu) ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ, ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ… 
 

Latest Videos


ಈ ವಸ್ತುಗಳನ್ನು ತುಳಸಿ ಸಸ್ಯದ ಬಳಿ ಇಡಬೇಡಿ.
ತುಳಸಿಯ ಸುತ್ತಲೂ ಕಸವನ್ನು(Dust) ಇಡಬೇಡಿ
ತುಳಸಿ ಸಸ್ಯವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಹಿಂದಿನ ದಿನಗಳಲ್ಲಿ ತುಳಸಿಯ ಮಡಕೆಯನ್ನು ತಯಾರಿಸಲಾಗುತ್ತಿತ್ತು, ಮಹಿಳೆಯರು ಪ್ರತಿ ದಿನ ಸಗಣಿ ಅಥವಾ ಮಣ್ಣಿನಿಂದ ಈ ಸ್ಥಳವನ್ನು ಶುದ್ಧ ಮಾಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಅದನ್ನು ಮಾಡಲು ಸಾಧ್ಯವಿಲ್ಲ. ಆದರೆ ತುಳಸಿ ಸಸ್ಯದ ಬಳಿ ಯಾವುದೇ ರೀತಿಯ ಕೊಳೆಯನ್ನು ಇಡದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಿಸಿಕೊಳ್ಳಿ. ತುಳಸಿ ಬಳಿ ಕಸ ಇತ್ಯಾದಿಗಳನ್ನು ಇಡಬೇಡಿ.
 

ತುಳಸಿಯ ಬಳಿ ಪೊರಕೆ(Broom) ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಸಸ್ಯದ ಬಳಿ ಪೊರಕೆ ಎಂದಿಗೂ ಇಡಬಾರದು. ಮನೆಯನ್ನು ಸ್ವಚ್ಛಗೊಳಿಸಲು ಪೊರಕೆ ಬಳಸಲಾಗುತ್ತದೆ.  ಆದ್ದರಿಂದ, ಅದನ್ನು ತುಳಸಿಯ ಬಳಿ ಇಡಬಾರದು. ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ.ಆದುದರಿಂದ ಈ ತಪ್ಪನ್ನು ಯಾವತ್ತೂ ಮಾಡಲೆಬೇಡಿ.

ತುಳಸಿ ಬಳಿ ಶೂಗಳು(Shoe) ಮತ್ತು ಚಪ್ಪಲಿ ಇಡಬೇಡಿ
ಅನೇಕ ಬಾರಿ, ಜನರು ತುಳಸಿ ಗಿಡದ ಬಳಿ ಹೊರಗಿನಿಂದ ಬಂದ ನಂತರ ಬೂಟುಗಳನ್ನು ಇಡುತ್ತಾರೆ, ಅಲ್ಲದೇ ತುಳಸಿ ಹತ್ತಿರ ಚಪ್ಪಲಿ ಬಿಚ್ಚುತ್ತಾರೆ. ಆದರೆ ಅದನ್ನು ಮಾಡಬಾರದು. ಏಕೆಂದರೆ ತುಳಸಿಯನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಕೊಳೆಯನ್ನು ತುಳಸಿ ಬಳಿ ಇಡುವುದು ಕೆಟ್ಟ ಪರಿಣಾಮ ಬೀರುತ್ತೆ.
 

ತುಳಸಿಯ ಬಳಿ ಮುಳ್ಳಿನ ಸಸ್ಯಗಳನ್ನು ಇಡಬೇಡಿ
ವಾಸ್ತುವಿನ ಪ್ರಕಾರ, ಮನೆಯಲ್ಲಿ ಮುಳ್ಳಿನ ಸಸ್ಯಗಳನ್ನು ನೆಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ.  ವಾಸ್ತುವಿನ ಪ್ರಕಾರ, ಗುಲಾಬಿ ಸಸ್ಯವನ್ನು(Rose plant) ಎಂದಿಗೂ ನೆಡಬಾರದು ಅಥವಾ ತುಳಸಿ ಸಸ್ಯದ ಬಳಿ ಇಡಬಾರದು. ಇದು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ, ಇದು ವ್ಯಕ್ತಿಯ ಪ್ರಗತಿಗೆ ಅಡ್ಡಿಪಡಿಸುತ್ತದೆ.

ತುಳಸಿಗೆ ಬಟ್ಟೆಯನ್ನು ಅರ್ಪಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ವಾಸ್ತುವಿನ ಪ್ರಕಾರ, ತುಳಸಿ ಗಿಡಕ್ಕೆ ಕೆಂಪು(Red) ಬಣ್ಣದ ಬಟ್ಟೆಯನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ತಾಯಿ ಲಕ್ಷ್ಮಿಯನ್ನು ಸಂತೋಷಪಡಿಸುತ್ತದೆ. ಆದರೆ ಬಟ್ಟೆ ಹಳೆಯದಾಗಿ, ಕೊಳಕಾದರೆ ಅದರಿಂದ ಸಮಸ್ಯೆ ಉಂಟಾಗುತ್ತದೆ ಎಂದು ನಂಬಲಾಗಿದೆ. 
 

ಲಕ್ಷ್ಮಿಯ ಅನುಗ್ರಹಕ್ಕಾಗಿ
ತುಳಸಿಯೊಂದಿಗೆ ತಾಯಿ ಲಕ್ಷ್ಮಿಯ ಅನುಗ್ರಹವನ್ನು ಪಡೆಯಲು, ತುಳಸಿ ಸಸ್ಯಕ್ಕೆ ನೀರಿನೊಂದಿಗೆ ನಿಯಮಿತವಾಗಿ ಸ್ವಲ್ಪ ಹಾಲನ್ನು(Milk) ಅರ್ಪಿಸಿ. ಇದನ್ನು ಮಾಡುವುದರಿಂದ, ತುಳಸಿ ಯಾವಾಗಲೂ ಹಸಿರಾಗಿರುತ್ತದೆ, ಇದರಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷವಿರುತ್ತದೆ.

click me!