ನಟ ಅಶೋಕ್ ಕೂಡ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, "ಸೀತಾರಾಮ' ಈ ಪ್ರಾಜೆಕ್ಟ್ ಬಗ್ಗೆ ಎಷ್ಟು ಹೇಳಿದ್ರೂ ಸಾಲ್ದು. ನನಗೆ ಕೆಲಸ, ಅನುಭವ, ಜನರ ಪ್ರೀತಿ, ಗೆಳೆಯರು, ಮರೆಯಲಾಗದ ನೆನಪುಗಳನ್ನು ಕೊಟ್ಟು ನನ್ನ ಜೀವನದಲ್ಲಿ ಒಂದು ಹೊಸ ಭರವಸೆ ಮೂಡಿಸಿದ ಪ್ರಾಜೆಕ್ಟ್. ಅಶೋಕನಿಗೆ ನೀವು ಕೊಟ್ಟoಥ ಪ್ರೀತಿ ಅಪಾರ. ಎಂದಿಗೂ ನಾನು ನಿಮ್ಮೆಲ್ಲರಿಗೂ ಚಿರಋಣಿ. ಈ ಪುಟ್ಟ ಕಲಾವಿದನಿಗೆ ಪ್ರೀತಿ ತೋರಿ, ಧೈರ್ಯ ತುಂಬಿ ಇಲ್ಲಿಯವರೆಗೂ ಕರೆ ತಂದ್ದಿದ್ದೀರಿ ಇನ್ನೂ ಮುಂದೆ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು" ಎಂದಿದ್ದಾರೆ.