Punya Basavaraju: ‘ಶ್ರೀರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳು ಪೂರ್ವಾಶ್ರಮ ಪತ್ನಿ ಸರಸ್ವತಿಯಾಗಿ ನಟಿಸಿದ್ದ ನಟಿ ಪುಣ್ಯ ಬಸವರಾಜು ಅವರ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿಯ ಅಂದಕ್ಕೆ ಜನ ಫಿದಾ ಆಗಿದ್ದಾರೆ.
ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಾಘವೇಂದ್ರ ಮಹಾತ್ಮೆ’ ಧಾರವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳು ಪೂರ್ವಾಶ್ರಮದ ಪತ್ನಿ ಸರಸ್ವತಿಯಾಗಿ ಕಾಣಿಸಿಕೊಂಡ ನಟಿ ಪುಣ್ಯ ಬಸವರಾಜು. ಸದ್ಯ ಧಾರಾವಾಹಿಯಲ್ಲಿ ಇವರ ಪಾತ್ರ ಮುಗಿದಿದೆ.
26
ಮುಗ್ಧ ಪಾತ್ರದ ಮೂಲಕ ಗಮನ ಸೆಳೆದ ಸರಸ್ವತಿ
ಪುಣ್ಯ ‘ಸರಸ್ವತಿ’ ಪಾತ್ರದ ಮೂಲಕ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದರು. ಮದುವೆ ಮೊದಲಿನ ಆ ಚುರುಕು ಹುಡುಗಿಯ ಪಾತ್ರ, ಮದುವೆ ನಂತರ ವೆಂಕಟನಾಥನ ಜೀವನದಲ್ಲಿ ಹೊಸ ಅರ್ಥವನ್ನು ಕೊಟ್ಟ ಸರಸ್ವತಿ ಅಮ್ಮನವರ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದರು ಪುಣ್ಯ.
36
ಕೆಲವು ತಿಂಗಳ ಹಿಂದೆ ಕೊನೆಯಾಗಿದ್ದ ಪಾತ್ರ
ಧಾರವಾಹಿಯಲ್ಲಿ ವೆಂಕಟನಾಥರು, ರಾಘವೇಂದ್ರ ಸ್ವಾಮಿಗಳಾಗಿ ಬದಲಾದ ಬಳಿಕ, ಗಂಡನಿಲ್ಲದೇ ಬದುಕು ಕಷ್ಟವಾಗಿ ಸಾವಿನ ಮೊರೆಹೋಗುವ ಮೂಲಕ, ಸರಸ್ವತಿ ಪಾತ್ರವನ್ನು ಮುಗಿಸಲಾಗಿತ್ತು. ಕೊನೆಯ ಭಾವನಾತ್ಮಕ ದೃಶ್ಯಗಳಲ್ಲೂ ಅದ್ಭುತವಾಗಿ ನಟಿಸಿ, ವೀಕ್ಷಕರ ಕಣ್ಣಂಚನ್ನು ಒದ್ದೆ ಮಾಡಿದ್ದರು ಪುಣ್ಯ.
ಇದೀಗ ಪುಣ್ಯ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಂಪು ಬಣ್ಣದ ರಾಜಕುಮಾರಿಯ ಧಿರಿಸಿನಲ್ಲಿ ಪುಣ್ಯ ಗಂಧರ್ವ ಲೋಕದ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ. ಈ ಫೋಟೊವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಕಾಮೆಂಟ್ ಮೂಲಕ ಹೊಗಳಿಕೆಯ ಮಹಾಪೂರವನ್ನೆ ಹರಿಸುತ್ತಿದ್ದಾರೆ.
56
ಅನುಷ್ಕಾ ಶೆಟ್ಟಿಗೆ ಹೋಲಿಸಿದ ಜನ
ಪುಣ್ಯ ಬಸವರಾಜು ಅವರ ಈ ಲುಕ್ ನೋಡಿ ಫ್ಯಾನ್ಸ್, ಬಾಹುಬಲಿ ಸಿನಿಮಾದ ಅನುಷ್ಕಾ ಶೆಟ್ಟಿಗೆ ಹೋಲಿಸಿದ್ದಾರೆ, ಇನ್ನು ಕೆಲವರು ಮದನಮನ ಮೋಹಿನಿ ನೀನ್ಯಾರೆ ಎನ್ನುತ್ತಾ, ರುಕ್ಮಿಣಿ ವಸಂತ್ ಗೂ ಕೂಡ ಹೋಲಿಕೆ ಮಾಡಿದ್ದಾರೆ. ನೀವು ಅಂದದಲ್ಲಿ ಎಲ್ಲರನ್ನೂ ಮೀರಿಸುತ್ತೀರಿ ಎಂದು ಹಾಡಿ ಹೊಗಳಿದ್ದಾರೆ.
66
ಶೀಘ್ರದಲ್ಲಿ ತೆರೆ ಮೇಲೆ ಬನ್ನಿ
ಇನ್ನು ‘ಶ್ರೀರಾಘವೇಂದ್ರ ಮಹಾತ್ಮೆ’ ಬಳಿಕ ನಟಿಯ ಫಾಲೋವರ್ಸ್ ಕೂಡ ಹೆಚ್ಚಾಗಿದ್ದು, ಇದೀಗ ಜನ, ಪುಣ್ಯ ಅವರನ್ನು ಮತ್ತೆ ತೆರೆ ಮೇಲೆ ಒಂದೊಳ್ಳೆ ಪಾತ್ರದ ಮೂಲಕ ಕಾಣಲು ಇಷ್ಟಪಡುತ್ತಿದ್ದಾರೆ. ಶೀಘ್ರದಲ್ಲಿ ತೆರೆ ಮೇಲೆ ಬನ್ನಿ, ನಿಮ್ಮನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಎಂದಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.