RK Chandan: ‘ಭಾಗ್ಯವಂತರು’ ಸೀರಿಯಲ್ ಶೀಘ್ರದಲ್ಲಿ ಉದಯ ವಾಹಿನಿಯಲ್ಲಿ ಶುರುವಾಗಲಿದೆ. ಅಪ್ಪ ಮಗಳ ಭಾಂದವ್ಯದ ಕಥೆ ಇದಾಗಿದೆ. ಇದೀಗ ಈ ಧಾರಾವಾಹಿಗೆ ಹಲವಾರು ವರ್ಷಗಳ ಬಳಿಕ ‘ಮಾಂಗಲ್ಯಂ ತಂತು ನಾನೇನಾ’ ಧಾರಾವಾಹಿ ನಟ ಚಂದನ್, ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.
ಉದಯ ಟಿವಿಯಲ್ಲಿ ಶೀಘ್ರದಲ್ಲಿ ಆರಂಭವಾಗಲಿರುವ ಧಾರಾವಾಹಿ ‘ಭಾಗ್ಯವಂತರು’. ಮಗಳನ್ನು ಚೆನ್ನಾಗಿ ಓದಿಸಿ, ಉನ್ನತ ಸ್ಥಾನಕ್ಕೆ ಏರಿಸಬೇಕೆಂಬ ಹಂಬಲ ಹೊಂದಿದ ತಂದೆ ಹಾಗೂ ತಂದೆಯ ಕನಸನ್ನು ನನಸಾಗಿಸಲು ಸಾಧನೆಯ ಮೆಟ್ಟಿಲೇರುವ ಮಗಳ ಕಥೆ ಇದಾಗಿದೆ. ಇದೀಗ ಈ ಧಾರಾವಾಹಿಯಲ್ಲಿ ನಾಯಕ ಎಂಟ್ರಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
25
ಹಲವು ವರ್ಷಗಳ ಬಳಿಕ ಎಂಟ್ರಿ ಕೊಟ್ಟ ಚಂದನ್
‘ಭಾಗ್ಯವಂತರು’ ಧಾರಾವಾಹಿಯಲ್ಲಿ ತನ್ವಿ ರಾವ್ ಹಾಗೂ ಸುಚೇಂದ್ರ ಪ್ರಸಾದ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ನಾಯಕನಾಗಿ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದ್ದ ನಟ ಆರ್ ಕೆ ಚಂದನ್ ಎಂಟ್ರಿ ಕೊಟ್ಟಿದ್ದಾರೆ. ಗೌತಮ್ ಪಾತ್ರದಲ್ಲಿ ಚಂದನ್ ನಟಿಸುತ್ತಿದ್ದಾರೆ.
35
ಮಾಂಗಲ್ಯಂ ತಂತು ನಾನೇನ ನಟ
ಕೆಲ ವರ್ಷಗಳ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್ ‘ಮಾಂಗಲ್ಯಂ ತಂತು ನಾನೇನ’ ಈ ಸೀರಿಯಲ್ ಜೋಡಿಯಾದ ತೇಜಸ್ವಿ -ಶ್ರಾವಣಿ ಭಾರಿ ಜನಪ್ರಿಯತೆ ಪಡೆದಿದ್ದರು. ಇಬ್ಬರ ಮುದ್ದಾದ ಜೋಡಿಗೆ ಜನ ಫಿದಾ ಆಗಿದ್ದರು. ಅದಾದ ಬಳಿಕ ಆರ್ ಕೆ ಚಂದನ್ ಮತ್ತೆ ಸೀರಿಯಲ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಇನ್ನು ಚಂದನ್ ಕಲರ್ಸ್ ಕನ್ನಡದ ‘ಶ್ರೀಗೌರಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ‘ಕ್ವಾಟ್ಲೆ ಕಿಚನ್’ ನಲ್ಲಿ ಸ್ಪರ್ಧಿಯಾಗಿದ್ದರು. ಇವರನ್ನು ಮತ್ತೆ ತೆರೆಯ ಮೇಲೆ ಕಾಣಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ಆ ಆಸೆ ಈಡೇರಿದೆ.
55
ಸಿನಿಮಾಗಳಲ್ಲಿ ಚಂದನ್
ಚಂದನ್ ‘ಮಾಂಗಲ್ಯಂ ತಂತು ನಾನೇನ ಸೀರಿಯಲ್’ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ‘ಬಿಂಗೋ’, ‘ಕಟ್ಟಾರ’, ಮೊದಲಾದ ಸಿನಿಮಾಗಳಲ್ಲಿ ಚಂದನ್ ಬಣ್ಣ ಹಚ್ಚಿದ್ದರು. ಇದೀಗ ‘ಭಾಗ್ಯವಂತರು’ ಧಾರಾವಾಹಿಯಲ್ಲಿ ಕಾಲೇಜ್ ಸ್ಟೂಡೆಂಟ್ ಗೌತಮ್ ಆಗಿ ನಟಿಸುತ್ತಿದ್ದಾರೆ. ಅಪ್ಪನ ಶಿಸ್ತಿನ ಮಗಳು ಜನನಿ ಮತ್ತು ಗೌತಮ್ ನಡುಗೆ ಹೇಗೆ ಪ್ರೀತಿಯಾಗುತ್ತೆ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.