Karna Serial: ಸಂಜಯ್​ ಕುತಂತ್ರಕ್ಕೆ ಬಲಿಯಾಗಿ ಹೋದಳಾ ನಿತ್ಯಾ? ಅಯ್ಯೋ ಇದೇನಾಗೋಯ್ತು?

Published : Dec 26, 2025, 01:29 PM IST

ಕರ್ಣ ಸೀರಿಯಲ್​ನಲ್ಲಿ ನಿತ್ಯಾಳ ಗರ್ಭದ ಸತ್ಯ ವಿಲನ್‌ಗಳಿಗೆ ತಿಳಿದುಹೋಗಿದೆ. ಮದುವೆ ಸಂಭ್ರಮದ ನಡುವೆಯೇ, ಅವರು ನಿತ್ಯಾಳಿಗೆ ವಿಷ ಬೆರೆಸಿದ ಜ್ಯೂಸ್ ನೀಡಿ ಕೋಣೆಯಲ್ಲಿ ಕೂಡಿಹಾಕುವ ಮೂಲಕ ಭೀಕರ ಸಂಚು ರೂಪಿಸಿದ್ದಾರೆ. ಈ ಕುತಂತ್ರದಿಂದ ನಿತ್ಯಾ ತನ್ನ ಮಗುವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾಳೆ.

PREV
15
ಭಾರಿ ಅನಾಹುತ

ಕರ್ಣ ಸೀರಿಯಲ್​ನಲ್ಲಿ (Karna Serial) ತೇಜಸ್​ ಆಗಮನ ಆಗುತ್ತಿದ್ದಂತೆಯೇ ಇನ್ನೆಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ನಿಧಿ ಮತ್ತು ಕರ್ಣ ಒಂದಾಗುತ್ತಾರೆ, ನಿತ್ಯಾಳ ಮದುವೆ ತೇಜಸ್​ ಜೊತೆ ಆಗುತ್ತದೆ ಎಂದುಕೊಳ್ಳುವಷ್ಟರಲ್ಲಿಯೇ ಭಾರಿ ಅನಾಹುತ ಆಗಿಹೋಗಿದೆ!

25
ಒಡಲ ಸತ್ಯ

ಅತ್ತ ಕರ್ಣ ಮತ್ತು ನಿಧಿ ಸೇರಿ ನಿತ್ಯಾ ಮತ್ತು ತೇಜಸ್​ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅದಾಗಲೇ ನಿತ್ಯಾಳ ಒಡಲಿನ ಸತ್ಯ ವಿಲನ್​ ರಮೇಶ್​, ಸಂಜಯ್​ ಎಲ್ಲರಿಗೂ ತಿಳಿದುಬಿಟ್ಟಿದೆ. ಇಷ್ಟು ತಿಳಿಯುತ್ತಿದ್ದಂತೆಯೇ ಅವರು ಕುತಂತ್ರ ಹೆಣೆದಿದ್ದಾರೆ.

35
ಜ್ಯೂಸ್​ನಲ್ಲಿ ಮಿಕ್ಸ್​

ನಿತ್ಯಾಳ ಕೋಣೆಯಲ್ಲಿ ಇರುವ ಜ್ಯೂಸ್​ಗೆ ಏನೋ ಮಿಕ್ಸ್​ ಮಾಡಿ ಕೊಟ್ಟಿದ್ದಾರೆ. ಅದರ ಅರಿವಿಲ್ಲದೇ ನಿತ್ಯಾ ಅದನ್ನು ಕುಡಿದು ಬಿಟ್ಟಿದ್ದಾಳೆ.

45
ಬಾಗಿಲು ಲಾಕ್​

ಅತ್ತ ನಿತ್ಯಾ ಇರುವ ಕೋಣೆಯ ಬಾಗಿಲನ್ನು ಲಾಕ್​ ಮಾಡಿಕೊಂಡು ಹೋಗಿದ್ದಾನೆ ಸಂಜಯ್​. ನಿತ್ಯಾಳಿಗೆ ಸಂಕಟವಾಗಿದೆ, ಬಿದ್ದು ಹೊರಳಾಡುತ್ತಿದ್ದಾಳೆ. ಆದರೆ ಬಾಗಿಲು ಹಾಕಿರುವುದರಿಂದ ಅವಳಿಗೆ ಏನೂ ಮಾಡಲು ಆಗುತ್ತಿಲ್ಲ.

55
ನಿಧಿ ಗಾಬರಿ

ಅತ್ಯ ನಿಧಿ, ಅಕ್ಕನಿಗೆ ಕಾಲ್​ ಮಾಡಿದರೆ ಅವಳು ರಿಸೀವ್​ ಮಾಡದ ಬಗ್ಗೆ ಗಾಬರಿಯಾಗಿದ್ದಾಳೆ. ನಿಧಿ ಮಗುವನ್ನು ಕಳೆದುಕೊಳ್ತಾಳಾ? ವಿಲನ್​ಗಳ ಕುತಂತ್ರಕ್ಕೆ ಬಲಿಯಾಗ್ತಾಳಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories