Amruthadhaare: ಗೌತಮ್​ನನ್ನು ಹೀರೋ ಮಾಡೋ ಭರದಲ್ಲಿ ಎಡವಟ್ಟಾಗೋಯ್ತು! ಕಮಿಷನರ್​ಗೆ ಅಧಿಕಾರ?

Published : Oct 02, 2025, 02:20 PM IST

ಗೌತಮ್ ಮತ್ತು ಭೂಮಿಕಾ ಒಂದಾಗುವ ನಿರೀಕ್ಷೆ ಹುಸಿಯಾಗಿದೆ. ಎಂಎಲ್​ಎಯಿಂದಾದ ತೊಂದರೆಯಿಂದಾಗಿ ಭೂಮಿಕಾ ಬೆಂಗಳೂರಿಗೆ ತೆರಳಿದ್ದಾಳೆ. ಈ ಮಧ್ಯೆ, ಕಮಿಷನರ್​ಗೆ ಎಂಎಲ್​ಎಯನ್ನು ತೆಗೆದುಹಾಕುವ ಅಧಿಕಾರವಿದೆ ಎಂದು ತೋರಿಸಿದ್ದಕ್ಕೆ ಸೀರಿಯಲ್ ಟ್ರೋಲ್ ಆಗುತ್ತಿದೆ.

PREV
16
ಮತ್ತೊಂದು ತಿರುವಿನಲ್ಲಿ ಅಮೃತಧಾರೆ

ಅಮೃತಧಾರೆ (Amruthadhaare) ಸೀರಿಯಲ್​ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಭೂಮಿಕಾಳನ್ನು ಐದು ವರ್ಷ ಹುಡುಕಿ ಹುಡುಕಿ ಕೊನೆಗೂ ಗೌತಮ್​ಗೆ ಭೂಮಿಕಾ ಸಿಕ್ಕಿದ್ದಳು. ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಅಂದುಕೊಳ್ಳಲಾಗಿತ್ತು. ಭೂಮಿಕಾ, ಗೌತಮ್​ ಮೇಲೆ ಕೋಪ ಮಾಡಿಕೊಂಡಿದ್ದರೂ, ಆಕೆ ಕೋಪ ತಣಿಸಿಕೊಂಡು ಮತ್ತೆ ಗೌತಮ್​ ಬಳಿ ಹೋಗುತ್ತಾಳೆ ಎನ್ನುವ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಅಪ್ಪ-ಮಗ ಕೂಡ ಒಂದಾಗಿದ್ದರು. ಆದರೆ ಇದೀಗ ಮತ್ತೆ ಎಲ್ಲರೂ ದೂರ ದೂರ!

26
ಒಂದಾಗೋ ಹೊತ್ತಲ್ಲಿ ಮನೆ ಬದಲು

ಟೀಚರ್​ ಭೂಮಿಕಾ ತನ್ನ ಮಗನಿಗೆ ಬುದ್ಧಿ ಹೇಳಿದಳು ಎನ್ನುವ ಕಾರಣಕ್ಕೆ ಎಂಎಲ್​ಎ, ಆಕೆಯ ಮಗ ಆಕಾಶ್​​ನನ್ನು ಕಿಡ್​ನ್ಯಾಪ್​ ಮಾಡಿಸಿದ್ದ. ಆದರೆ ಕೊನೆಗೆ ಗೌತಮ್​ಗೆ ವಿಷಯ ತಿಳಿದು ರೌಡಿಗಳ ಜೊತೆ ಹೊಡೆದಾಡಿ ಆಕಾಶ್​ನನ್ನು ಬಿಡಿಸಿಕೊಂಡು ಬಂದಿದ್ದ. ಇದು ಭೂಮಿಕಾಗೆ ತಿಳಿದು, ಗೌತಮ್​ ಮೇಲೆ ಪ್ರೀತಿ ಹುಟ್ಟುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ರೌಡಿಗಳು ಭೂಮಿಕಾ ಮನೆಗೆ ಬಂದು ತೊಂದರೆ ಕೊಟ್ಟಿದ್ದರಿಂದ ಅವಳು ಮನೆಯನ್ನೇ ಬಿಟ್ಟು ಹೋಗಿಬಿಟ್ಟಿದ್ದಾಳೆ.

36
ಬೆಂಗಳೂರು ಸೇರಿದ ಭೂಮಿಕಾ

ಮತ್ತೆ ಬೆಂಗಳೂರು ಸೇರಿದ್ದಾಳೆ. ಅಲ್ಲಿ ಅವಳಿಗೆ ಹೆಡ್​ಮಿಸ್​ ಪೋಸ್ಟ್​ ಸಿಕ್ಕಿದೆ. ಆದರೆ ಅದೇ ಇನ್ನೊಂದೆಡೆ, ಗೌತಮ್​ ಎಂಎಲ್​ಎಗೆ ಬುದ್ಧಿ ಕಲಿಸುವ ಪಣ ತೊಟ್ಟಿದ್ದಾನೆ. ನಾನು MLA ಎನ್ನುವ ಅಹಂನಲ್ಲಿ ಗೌತಮ್​ ಮೇಲೆ ರೇಗಿದ್ದ ಆತ. ಕಮಿಷನರ್​ಗೆ ಕಾಲ್​ ಮಾಡಿ ನಿನಗೆ ಗತಿ ಕಾಣಿಸ್ತೇನೆ ಎಂದ ಎಂಎಲ್​ಎ.

46
ಕಮಿಷನರ್​ಗೆ ಪವರ್​ ಕೊಟ್ಟೋರು ಯಾರು?

ಆದರೆ ಗೌತಮ್​ ತಾನೇ ಖುದ್ದು ಕಮಿಷನರ್​ಗೆ ಕಾಲ್​ ಮಾಡಿ ತಾನು ಗೌತಮ್​ ದಿವಾನ್​ ಮಾತನಾಡುವುದು ಎಂದು ಹೇಳಿದಾಗ ಕಮಿಷನರ್​ ಎಂಎಲ್​ಎಗೆ ಆವಾಜ್​ ಹಾಕಿ, ನಿನ್ನನ್ನು ಎಂಎಲ್​ಎ ಪೋಸ್ಟ್​ನಿಂದ ಕಿತ್ತು ಹಾಕಿದ್ದೇನೆ. ನಾಳೆನೇ ಬಂದು ರಿಸೈನ್ ಮಾಡು ಎನ್ನುತ್ತಾರೆ. ಆದರೆ ಇದು ನೋಡಲು ಚೆನ್ನಾಗಿದೆ. ಆದರೆ ಎಂಎಲ್​ಎ ಅನ್ನು ಪೋಸ್ಟ್​ನಿಂದ ಕಿತ್ತು ಹಾಕಲು ಕಮಿಷನರ್​ಗೆ ಅಧಿಕಾರ ಇದ್ಯಾ? ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

56
ಸೀರಿಯಲ್​ನಲ್ಲಿ ಎಡವಟ್ಟು?

ಗೌತಮ್​ನನ್ನು ಹೀರೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ನಿರ್ದೇಶಕರು ಎನ್ನುತ್ತಿದ್ದಾರೆ ನೆಟ್ಟಿಗರು. ಕಾನೂನಿನ ಪ್ರಕಾರ ಎಂಎಲ್​ಎ ಮೇಲೆ ಕ್ರಮ ಜರುಗಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ ಇಲ್ಲಿ ಕಮಿಷನರ್​ಗೆ ಅಧಿಕಾರ ಕೊಟ್ಟವರು ಯಾರು? ಗೌತಮ್​ನನ್ನು ಹೀರೋ ಮಾಡಿದ್ದು ಸರಿಯೇ, ಆದರೆ ಈ ಎಡವಟ್ಟು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

66
ಚ್ಯೂಯಿಂಗ್​ ಗಮ್​ನಂತೆ ಸಾಗತ್ತಾ ಸೀರಿಯಲ್​?

ಒಟ್ಟಿನಲ್ಲಿ, ಇದೊಂದು ಸೀರಿಯಲ್​ ಅಷ್ಟೆ. ಸೀರಿಯಲ್​ನಲ್ಲಿ ಏನು ಬೇಕಾದ್ರೂ ನಡೆಯುತ್ತೆ ಎಂದು ಕೆಲವರು ಹೇಳಿದ್ರೆ, ಅದು ನಿಜ. ಆದರೆ ಇಂಥ ಎಡವಟ್ಟು ಮಾಡಬಾರದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇನ್ನು ಸೀರಿಯಲ್​ ಕಥೆಗೆ ಬರೋದಾದ್ರೆ ಇನ್ನು ಚ್ಯೂಯಿಂಗ್​ ಗಮ್​ನಂತೆ ಅಮೃತಧಾರೆ ಎಳೆಯುತ್ತಿರುವುದು ಯಾಕೋ ವೀಕ್ಷಕರಿಗೆ ಬೇಸರ ತರಿಸುವಂತಿದೆ. ಭೂಮಿಕಾಳದ್ದು ಅತಿಯಾಯ್ತು ಎಂದು ಹೇಳುತ್ತಿದ್ದಾರೆ. ಇಬ್ಬರೂ ಒಂದಾಗಿ ಶಕುಂತಲಾ, ಜೈದೇವ್​ಗೆ ಬುದ್ಧಿ ಕಲಿಸ್ತಾರೆ ಎಂದುಕೊಂಡ್ರೆ ಮತ್ತೆ ಮನೆ ಚೇಂಜ್​ ಮಾಡಿದ್ದಾಳೆ ಅವಳು. ಇನ್ನೆಷ್ಟು ವರ್ಷ ಹುಡುಕಬೇಕೋ ಗೌತಮ್​ ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories