Amruthadhaare: ಗೌತಮ್​ನನ್ನು ಹೀರೋ ಮಾಡೋ ಭರದಲ್ಲಿ ಎಡವಟ್ಟಾಗೋಯ್ತು! ಕಮಿಷನರ್​ಗೆ ಅಧಿಕಾರ?

Published : Oct 02, 2025, 02:20 PM IST

ಗೌತಮ್ ಮತ್ತು ಭೂಮಿಕಾ ಒಂದಾಗುವ ನಿರೀಕ್ಷೆ ಹುಸಿಯಾಗಿದೆ. ಎಂಎಲ್​ಎಯಿಂದಾದ ತೊಂದರೆಯಿಂದಾಗಿ ಭೂಮಿಕಾ ಬೆಂಗಳೂರಿಗೆ ತೆರಳಿದ್ದಾಳೆ. ಈ ಮಧ್ಯೆ, ಕಮಿಷನರ್​ಗೆ ಎಂಎಲ್​ಎಯನ್ನು ತೆಗೆದುಹಾಕುವ ಅಧಿಕಾರವಿದೆ ಎಂದು ತೋರಿಸಿದ್ದಕ್ಕೆ ಸೀರಿಯಲ್ ಟ್ರೋಲ್ ಆಗುತ್ತಿದೆ.

PREV
16
ಮತ್ತೊಂದು ತಿರುವಿನಲ್ಲಿ ಅಮೃತಧಾರೆ

ಅಮೃತಧಾರೆ (Amruthadhaare) ಸೀರಿಯಲ್​ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಭೂಮಿಕಾಳನ್ನು ಐದು ವರ್ಷ ಹುಡುಕಿ ಹುಡುಕಿ ಕೊನೆಗೂ ಗೌತಮ್​ಗೆ ಭೂಮಿಕಾ ಸಿಕ್ಕಿದ್ದಳು. ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಅಂದುಕೊಳ್ಳಲಾಗಿತ್ತು. ಭೂಮಿಕಾ, ಗೌತಮ್​ ಮೇಲೆ ಕೋಪ ಮಾಡಿಕೊಂಡಿದ್ದರೂ, ಆಕೆ ಕೋಪ ತಣಿಸಿಕೊಂಡು ಮತ್ತೆ ಗೌತಮ್​ ಬಳಿ ಹೋಗುತ್ತಾಳೆ ಎನ್ನುವ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಅಪ್ಪ-ಮಗ ಕೂಡ ಒಂದಾಗಿದ್ದರು. ಆದರೆ ಇದೀಗ ಮತ್ತೆ ಎಲ್ಲರೂ ದೂರ ದೂರ!

26
ಒಂದಾಗೋ ಹೊತ್ತಲ್ಲಿ ಮನೆ ಬದಲು

ಟೀಚರ್​ ಭೂಮಿಕಾ ತನ್ನ ಮಗನಿಗೆ ಬುದ್ಧಿ ಹೇಳಿದಳು ಎನ್ನುವ ಕಾರಣಕ್ಕೆ ಎಂಎಲ್​ಎ, ಆಕೆಯ ಮಗ ಆಕಾಶ್​​ನನ್ನು ಕಿಡ್​ನ್ಯಾಪ್​ ಮಾಡಿಸಿದ್ದ. ಆದರೆ ಕೊನೆಗೆ ಗೌತಮ್​ಗೆ ವಿಷಯ ತಿಳಿದು ರೌಡಿಗಳ ಜೊತೆ ಹೊಡೆದಾಡಿ ಆಕಾಶ್​ನನ್ನು ಬಿಡಿಸಿಕೊಂಡು ಬಂದಿದ್ದ. ಇದು ಭೂಮಿಕಾಗೆ ತಿಳಿದು, ಗೌತಮ್​ ಮೇಲೆ ಪ್ರೀತಿ ಹುಟ್ಟುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ರೌಡಿಗಳು ಭೂಮಿಕಾ ಮನೆಗೆ ಬಂದು ತೊಂದರೆ ಕೊಟ್ಟಿದ್ದರಿಂದ ಅವಳು ಮನೆಯನ್ನೇ ಬಿಟ್ಟು ಹೋಗಿಬಿಟ್ಟಿದ್ದಾಳೆ.

36
ಬೆಂಗಳೂರು ಸೇರಿದ ಭೂಮಿಕಾ

ಮತ್ತೆ ಬೆಂಗಳೂರು ಸೇರಿದ್ದಾಳೆ. ಅಲ್ಲಿ ಅವಳಿಗೆ ಹೆಡ್​ಮಿಸ್​ ಪೋಸ್ಟ್​ ಸಿಕ್ಕಿದೆ. ಆದರೆ ಅದೇ ಇನ್ನೊಂದೆಡೆ, ಗೌತಮ್​ ಎಂಎಲ್​ಎಗೆ ಬುದ್ಧಿ ಕಲಿಸುವ ಪಣ ತೊಟ್ಟಿದ್ದಾನೆ. ನಾನು MLA ಎನ್ನುವ ಅಹಂನಲ್ಲಿ ಗೌತಮ್​ ಮೇಲೆ ರೇಗಿದ್ದ ಆತ. ಕಮಿಷನರ್​ಗೆ ಕಾಲ್​ ಮಾಡಿ ನಿನಗೆ ಗತಿ ಕಾಣಿಸ್ತೇನೆ ಎಂದ ಎಂಎಲ್​ಎ.

46
ಕಮಿಷನರ್​ಗೆ ಪವರ್​ ಕೊಟ್ಟೋರು ಯಾರು?

ಆದರೆ ಗೌತಮ್​ ತಾನೇ ಖುದ್ದು ಕಮಿಷನರ್​ಗೆ ಕಾಲ್​ ಮಾಡಿ ತಾನು ಗೌತಮ್​ ದಿವಾನ್​ ಮಾತನಾಡುವುದು ಎಂದು ಹೇಳಿದಾಗ ಕಮಿಷನರ್​ ಎಂಎಲ್​ಎಗೆ ಆವಾಜ್​ ಹಾಕಿ, ನಿನ್ನನ್ನು ಎಂಎಲ್​ಎ ಪೋಸ್ಟ್​ನಿಂದ ಕಿತ್ತು ಹಾಕಿದ್ದೇನೆ. ನಾಳೆನೇ ಬಂದು ರಿಸೈನ್ ಮಾಡು ಎನ್ನುತ್ತಾರೆ. ಆದರೆ ಇದು ನೋಡಲು ಚೆನ್ನಾಗಿದೆ. ಆದರೆ ಎಂಎಲ್​ಎ ಅನ್ನು ಪೋಸ್ಟ್​ನಿಂದ ಕಿತ್ತು ಹಾಕಲು ಕಮಿಷನರ್​ಗೆ ಅಧಿಕಾರ ಇದ್ಯಾ? ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

56
ಸೀರಿಯಲ್​ನಲ್ಲಿ ಎಡವಟ್ಟು?

ಗೌತಮ್​ನನ್ನು ಹೀರೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ನಿರ್ದೇಶಕರು ಎನ್ನುತ್ತಿದ್ದಾರೆ ನೆಟ್ಟಿಗರು. ಕಾನೂನಿನ ಪ್ರಕಾರ ಎಂಎಲ್​ಎ ಮೇಲೆ ಕ್ರಮ ಜರುಗಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ ಇಲ್ಲಿ ಕಮಿಷನರ್​ಗೆ ಅಧಿಕಾರ ಕೊಟ್ಟವರು ಯಾರು? ಗೌತಮ್​ನನ್ನು ಹೀರೋ ಮಾಡಿದ್ದು ಸರಿಯೇ, ಆದರೆ ಈ ಎಡವಟ್ಟು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

66
ಚ್ಯೂಯಿಂಗ್​ ಗಮ್​ನಂತೆ ಸಾಗತ್ತಾ ಸೀರಿಯಲ್​?

ಒಟ್ಟಿನಲ್ಲಿ, ಇದೊಂದು ಸೀರಿಯಲ್​ ಅಷ್ಟೆ. ಸೀರಿಯಲ್​ನಲ್ಲಿ ಏನು ಬೇಕಾದ್ರೂ ನಡೆಯುತ್ತೆ ಎಂದು ಕೆಲವರು ಹೇಳಿದ್ರೆ, ಅದು ನಿಜ. ಆದರೆ ಇಂಥ ಎಡವಟ್ಟು ಮಾಡಬಾರದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇನ್ನು ಸೀರಿಯಲ್​ ಕಥೆಗೆ ಬರೋದಾದ್ರೆ ಇನ್ನು ಚ್ಯೂಯಿಂಗ್​ ಗಮ್​ನಂತೆ ಅಮೃತಧಾರೆ ಎಳೆಯುತ್ತಿರುವುದು ಯಾಕೋ ವೀಕ್ಷಕರಿಗೆ ಬೇಸರ ತರಿಸುವಂತಿದೆ. ಭೂಮಿಕಾಳದ್ದು ಅತಿಯಾಯ್ತು ಎಂದು ಹೇಳುತ್ತಿದ್ದಾರೆ. ಇಬ್ಬರೂ ಒಂದಾಗಿ ಶಕುಂತಲಾ, ಜೈದೇವ್​ಗೆ ಬುದ್ಧಿ ಕಲಿಸ್ತಾರೆ ಎಂದುಕೊಂಡ್ರೆ ಮತ್ತೆ ಮನೆ ಚೇಂಜ್​ ಮಾಡಿದ್ದಾಳೆ ಅವಳು. ಇನ್ನೆಷ್ಟು ವರ್ಷ ಹುಡುಕಬೇಕೋ ಗೌತಮ್​ ಎನ್ನುತ್ತಿದ್ದಾರೆ.

Read more Photos on
click me!

Recommended Stories