Published : Mar 23, 2025, 02:12 PM ISTUpdated : Mar 23, 2025, 02:13 PM IST
ಕನ್ನಡ ಬಿಗ್ ಬಾಸ್ ಸ್ಪರ್ಧಿಗಳಾದ ನಮ್ರತಾ ಗೌಡ, ಪವಿ ಪೂವಪ್ಪ, ಅನುಪಮಾ ಗೌಡ, ಜಯಶ್ರೀ ಆರಾಧ್ಯ ಮತ್ತು ನಂದಿನಿ ಅವರ ಬ್ರೇಕಪ್ ಕಥೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರೀತಿಯಲ್ಲಿನ ವೈಫಲ್ಯಗಳು ಮತ್ತು ಸಂಬಂಧಗಳಲ್ಲಿನ ಸವಾಲುಗಳ ಬಗ್ಗೆ ಅವರ ಅನುಭವಗಳನ್ನು ಹಂಚಿಕೊಳ್ಳಲಾಗಿದೆ.
ನಮ್ರತಾ ಗೌಡ:
ಕನ್ನಡ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಗಳಾಗಿರುವ ನಮ್ರತಾ ಗೌಡ, ಬಿಗ್ಬಾಸ್ ಸೀಸನ್-10ರಲ್ಲಿ ಭಾರೀ ಜನಪ್ರಿಯತೆ ಗಳಿಸಿದರು. ಬಿಗ್ಬಾಸ್ ಮನೆಯಲ್ಲಿರುವಾಗ ತಾವು ಪ್ರೀತಿಯಲ್ಲಿ ಬಿದ್ದು, ಬ್ರೇಕಪ್ ಆಗಿದ್ದ ಬಗ್ಗೆ ಮಾತನಾಡಿದ್ದರು. ನಾನು ಕಾಲೇಜಿನಲ್ಲಿ ಓದುವಾಗ ಒಬ್ಬ ಹುಡುಗನನ್ನು ಲವ್ ಮಾಡಿದ್ದು, ಈ ವಿಚಾರ ತುಂಬಾ ಫೇಮಸ್ ಆಗೋಗಿತ್ತು. ನಾನು ಈ ವಿಚಾರವನ್ನು ಅಮ್ಮ-ಅಪ್ಪನಿಗೂ ಹೇಳಿದ್ದೆ. ಆದರೆ, ಆಗ ನನಗೆ ಮೈಂಡ್ ಮೆಚ್ಯೂರಿಟಿ ಇಲ್ಲದ ಕಾರಣ ಕಮಿಟ್ಮೆಂಟ್ ಇರಲಿಲ್ಲ. ಜೊತೆಗೆ, ರಿಲೇಶನ್ಶಿಪ್ ಏನು ಅಂತ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಲವ್ ಮಾಡುವುದು ಸರಿಯಾದುದಲ್ಲ ಎಂದು ನಮ್ರತಾ ಹೇಳಿದ್ದರು.
ಪಿಯು ಆದ್ಮೇಲೆ ಕಲಾವಿದೆಯಾಗಿ ವೃತ್ತಿ ಆರಂಭಿಸಿದೆ. ಆಗ ನನಗೆ ಬಾಯ್ಫ್ರೆಂಡ್ಗೆ ಸಮಯ ಕೊಡೋಕೆ ಆಗಲಿಲ್ಲ. ಇದರಿಂದ ಇಬ್ಬರ ನಡುವೆ ವೈಮನಸ್ಸು ಬಂದು, ಹೇಗೆ ಸಂಬಂಧ ಉಳಿಸಿಕೊಳ್ಳಬೇಕು ಎಂಬುದು ಇಬ್ಬರಿಗೂ ಗೊತ್ತಾಗದೇ ಬ್ರೇಕಪ್ ಮಾಡಿಕೊಂಡೆವು. ನಾನು ಪ್ರೀತಿ ಉಳಿಸಿಕೊಳ್ಳಲು ತುಂಬಾ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರೀತಿ ಉಳಿಸಿಕೊಳ್ಳಲು ಎಷ್ಟೆಲ್ಲಾ ಪ್ರಯತ್ನ ಮಾಡಿದರೂ, ಆ ಕಡೆಯಿಂದ ಸರಿಯಾಗಿ ಸ್ಪಂದನೆ ಸಿಗದ ಕಾರಣ ನಾನೂ ಒಂದು ದಿನ ಆ.., ಸಂಬಂಧ ಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.
25
ಪವಿ ಪೂವಪ್ಪ:
ಬಿಗ್ ಬಾಸ್ ಸೀಸನ್-10ರ ಮತ್ತೊಬ್ಬ ಸ್ಪರ್ಧಿ ಪವಿ ಪೂವಪ್ಪ ಕೂಡ ತಮ್ಮ ಬಾಯ್ಫ್ರೆಂಡ್ನಿಂದ ಇದೀಗ ಬ್ರೇಕಪ್ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದ ಪವಿ ಪೂವಪ್ಪ ಅವರು ಮಾಡೆಲಿಂಗ್ನಲ್ಲಿಯೂ ಮಿಂಚುತ್ತಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ತನ್ನ ಬಾಯ್ಫ್ರೆಂಡ್ ವಿದೇಶದಲ್ಲಿದ್ದಾನೆ ಎಂದು ಪವಿ ಪೂವಪ್ಪ ಲವ್ ಬಗ್ಗೆ ಬಿಚ್ಚಿಟ್ಟಿದ್ದರು. ಜೊತೆಗೆ, ಶೀಘ್ರದಲ್ಲೇ ಮದುವೆಯಾಗುವುದಾಗಿಯೂ ತಿಳಿಸಿದ್ದರು. ಬಿಗ್ ಬಾಸ್ ಮುಗಿಸಿ ಹೊರಬಂದ ಬಳಿಕ ಕೆಲವು ದಿನ ಲವರ್ ಜೊತೆಗೆ ಚೆನ್ನಾಗಿಯೇ ಇದ್ದ ಪವಿ ಅವರು 5 ವರ್ಷದ ಬಳಿಕ ನಾವಿಬ್ಬರೂ ದೂರವಾಗಿದ್ದೇವೆ ಎಂದು ಹೇಳಿದ್ದಾರೆ. ನಾನು ಅವರನ್ನು ಮದುವೆ ಮಾಡಿಕೊಳ್ಳಲು ನಾಯಿಯಿಂದ ದೂರ ಇರಬೇಕೆಂದು ಹೇಳಿದ್ದಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.
35
ಅನುಪಮಾ ಗೌಡ:
ಕನ್ನಡ ಕಿರುತೆರೆಗೆ ಅಕ್ಕ ಧಾರಾವಾಹಿಯಲ್ಲಿ ಬಣ್ಣ ಹಚ್ಚಿಕೊಂಡು ನಟನೆಗೆ ಬಂದ ಅನುಪಮಾ ಗೌಡ, ನಂತರ ನಿರೂಪಣೆಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದರು. ಆದರೆ, ಇತ್ತೀಚೆಗೆ ಅವರು ಆರ್.ಜೆ. ರಾಜೇಶ್ ಅವರ ಯೂಟೂಬ್ ಸಂದರ್ಶನ ನೀಡಿದ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನದ ವಿಚಾರವನ್ನೂ ತೆರೆದಿಟ್ಟಿದ್ದಾರೆ. ಆಗ ತಮ್ಮ ಪ್ರೀತಿ-ಪ್ರೇಮ, ಕಿರುತೆರೆ ಮತ್ತು ಸಿನಿಮಾ ಜೀವನ ಹಾಗೂ ಬ್ರೇಕಪ್ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ಒಬ್ಬ ನಟನನ್ನು ಪ್ರೀತಿ ಮಾಡುತ್ತಿದ್ದು, ಆತನಿಲ್ಲದೇ ಮುಂದಿನ ಜೀವನ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬಂತಾಗಿದ್ದೆ. ಆದರೆ, ಆತ ಇದ್ದಕ್ಕಿದ್ದಂತೆ ದೂರವಾದ. ಇದರಿಂದ ನಾನು ಖಿನ್ನತೆಗೆ ಒಳಗಾಗಿ ನೋವು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದಲ್ಲಿ ಮಿಂಚಿದ ಜಯಶ್ರೀ ಆರಾಧ್ಯ ಅವರು ಮತ್ತೆ ಬೇರೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ, ಹಿರಿಯ ನಟಿ ಮಾರಿ ಮುತ್ತು ಅವರ ಮೊಮ್ಮಗಳು ಎಂಬ ಸ್ಟಾರ್ಡಮ್ ಕೂಡ ಅವರಿಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜಯಶ್ರೀ ಅವರು ಬಿಗ್ ಬಾಸ್ ಒಟಿಟಿ ಸೀಸನ್ನಲ್ಲಿ ಸ್ಪರ್ಧಿಯಾಗಿದ್ದರು. ಒಂದು ಸಿನಿಮಾದ ನಂತರ ಎಲ್ಲಿಯೂ ಕಾಣಿಸಿಕೊಳ್ಳದೆ ಕುಟುಂಬದ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದರೆ, ಜಯಶ್ರೀ ಅವರು ಸ್ಟೀವನ್ ಎಂಬುವವರನ್ನು ಪ್ರೀತಿ ಮಾಡುತ್ತಿದ್ದು, ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಇವರು ಮದುವೆ ಆಗುವುದಕ್ಕೂ ಮುನ್ನ ಕಿರುತೆರೆಯಲ್ಲಿ ನಡೆಯುವ 'ರಾಜಾ ರಾಣಿ' ರಿಯಾಲಿಟಿ ಶೋಗೆ ಜೋಡಿಯಾಗಿ ಬಂದಿದ್ದರು. ಇನ್ನೇನು ಮದುವೆ ಆಗುತ್ತಾರೆ ಎಂದುಕೊಂಡಿದ್ದ ಜನರ ನಿರೀಕ್ಷೆ ಹುಸಿ ಮಾಡಿ, ಬ್ರೇಕಪ್ ಮಾಡಿಕೊಂಡಿದ್ದಾರೆ.
55
ನಂದಿನಿ:
ಕನ್ನಡ ಬಿಗ್ಬಾಸ್ ಒಟಿಟಿ ಸೀಸನ್-1ರಲ್ಲಿ ಭಾಗವಹಿಸಿದ್ದ ನಂದಿನಿ (ನಂದು) ಹಾಗೂ ಇದೇ ಸೀಸನ್ನ ಸಹ ಸ್ಪರ್ಧಿ ಜಶ್ವಂತ್ ಬೋಪಣ್ಣ ಇಬ್ಬರೂ ಪ್ರೇಮಿಗಳೆಂದು ರಾಜ್ಯದ ಜನತೆ ಮುಂದೆ ಹೇಳಿಕೊಂಡಿದ್ದರು. ಆದರೆ, ಬಿಗ್ಬಾಸ್ ಕನ್ನಡ ಒಟಿಟಿಗೂ ಮುನ್ನ ಹಿಂದಿಯಲ್ಲಿ ನಡೆಯುವ ಮತ್ತೊಂದು ರಿಯಾಲಿಟಿ ಶೋ ರೋಡೀಸ್ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. ಆಗ ಇವರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಇದನ್ನು ಬಿಗ್ಬಾಸ್ ಮನೆಯಲ್ಲಿದ್ದಾಗ ಜಗತ್ತಿಗೆತಿಳಿಯುವಂತೆ ಮಾಡಿದ್ದರು. ಆದರೆ, ಬಿಗ್ ಬಾಸ್ ಮನೆಯಿಮದ ಹೊರಬಂದ ಕೆಲವೇ ದಿನಗಳಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.