Published : May 18, 2025, 05:54 PM ISTUpdated : May 19, 2025, 10:32 AM IST
ಬ್ರಹ್ಮಗಂಟು ಧಾರಾವಾಹಿ ನಟಿ ಪ್ರೀತಿ ಶ್ರೀನಿವಾಸ್ ಅವರ ಏಕೈಕ ಪುತ್ರ ಹೃದಯ್ ಶರ್ಮಾ ಅವರಿಗೆ ಬ್ರಹ್ಮೋಪದೇಶ ಮಾಡಲಾಗಿದೆ. ಬ್ರಹ್ಮೋಪದೇಶಕ್ಕೆ ಉಪನಯನ ಅಂತಲೂ ಕರೆಯಲಾಗುತ್ತದೆ. ಮುಂಜಿ ಅಂತಲೂ ಹೇಳುತ್ತಾರೆ.
ಗುರುಬಲ ಚೆನ್ನಾಗಿತ್ತು ಅಂತ ಈಗ ಉಪನಯನ ಮಾಡಿದೆವು. ಚೆನ್ನಾಗಿ ಉಪದೇಶ ಮಾಡಲಾಗಿದೆ. ಸಾಕಷ್ಟು ಹಿರಿಯರು ಬಂದು ಅವನಿಗೆ ಆಶೀರ್ವದಿಸಿದ್ದರು ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
510
“ನನಗೆ ಮಗನ ಉಪನಯನ ಮಾಡಬೇಕು ಅಂತ ತುಂಬ ಆಸೆ ಇತ್ತು. ಬೆಂಗಳೂರಿನಲ್ಲಿ ಕಲ್ಯಾಣಮಂಟಪದಲ್ಲಿಯೇ ಗ್ರ್ಯಾಂಡ್ಆಗಿ ಮಾಡಿದೆವು” ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
610
“ತಾಯಿಯಾಗಿ ಮಗನಿಗೆ ಒಳ್ಳೆಯದು ಮಾಡಬೇಕು ಎನ್ನೋ ಆಸೆ ಇತ್ತು. ಎಲ್ಲರೂ ಇಷ್ಟು ಬೇಗ ಯಾಕೆ ಬ್ರಹ್ಮೋಪದೇಶ ಮಾಡಿದ್ರಿ ಅಂತ ಕೇಳಿದ್ರು” ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
710
“ಈಗ ಅವನಿಗೆ ಉಪನಯನ ಮಾಡಿದರೆ ಚೆನ್ನಾಗಿರತ್ತೆ ಅಂತ ಹೇಳಿದ್ದಕ್ಕೆ, ಈಗ ಎಲ್ಲವೂ ಕೂಡಿಬಂದಿದ್ದಕ್ಕೆ ಈಗ ಉಪನಯನ ಮಾಡಿದೆವು” ಎಂದು ಪ್ರೀತಿ ಶ್ರೀನಿವಾಸ್ ಹೇಳಿದ್ದಾರೆ.
810
ಕನ್ನಡ ನಟಿ ಪ್ರೀತಿ ಶ್ರೀನಿವಾಸ್ ಅವರು ಈಗ ಟ್ರೆಡಿಷನಲ್ ಆಗಿ ರೆಡಿಯಾಗಿದ್ದಾರೆ. ಅದ್ದೂರಿ ಆಭರಣಗಳನನು ಕೂಡ ಧರಿಸಿದ್ದರು.
910
ಪ್ರೀತಿ ಶ್ರೀನಿವಾಸ್ ಅವರ ಪತಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಕರ ಹುಡುಗನನ್ನೇ ಪ್ರೀತಿ ಶ್ರೀನಿವಾಸ್ ಅವರು ಮದುವೆಯಾಗಿದ್ದರು.
1010
ಪ್ರೀತಿ ಶ್ರೀನಿವಾಸ್ ಅವರು ಮಗನಿಗೆ ಶಾಸ್ತ್ರೋಕ್ತವಾಗಿ ಉಪನಯನ ಮಾಡಿದ್ದಾರೆ. ಕಾರ್ಯಕ್ರಮ ಚೆನ್ನಾಗಿ ಬಂದಿದ್ದಕ್ಕೆ ಅವರಿಗೆ ತುಂಬ ಖುಷಿ ಇದೆಯಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.