BBK 12: ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ: ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

Published : Jan 13, 2026, 02:42 PM IST

ಬಿಗ್​ಬಾಸ್​​ 12ರಲ್ಲಿ ಗಿಲ್ಲಿ ನಟನ ಬದಲು ಅಶ್ವಿನಿ ಗೌಡ ಮತ್ತು ಧ್ರುವಂತ್​ಗೆ ಸೀಸನ್‌ ಚಪ್ಪಾಳೆ ನೀಡಿದ ಸುದೀಪ್​ ನಿರ್ಧಾರಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಅಶ್ವಿನಿಯನ್ನು ಗೆಲ್ಲಿಸುವ ತಂತ್ರ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ   ನಟ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

PREV
16
ಚಪ್ಪಾಳೆ ಗಲಾಟೆ

ಬಿಗ್​ಬಾಸ್​​ 12ರ ವಿನ್ನರ್​ ಗಿಲ್ಲಿ ನಟನೇ ಆಗಬೇಕು ಎನ್ನುವ ಕೂಗು ಜೋರಾಗಿ ಕೇಳಿಬರುತ್ತಿದೆ. ಗಿಲ್ಲಿ ನಟನನ್ನು ಬಿಟ್ಟು ಬೇರೆ ಯಾರಿಗೇ ಈ ಹಂತದಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕರೆ ಅದನ್ನು ಅವರ ಅಭಿಮಾನಿಗಳು ಸಹಿಸುವುದಿಲ್ಲ. ಅದೇ ರೀತಿ ಮೊನ್ನೆ ಬಿಗ್​ಬಾಸ್​​ನಲ್ಲಿ ಸುದೀಪ್​ ಅವರು ವಾರದ ಮಾತ್ರವಲ್ಲದೇ ಹಾಗೂ ಸೀಸನ್‌ ಚಪ್ಪಾಳೆಯನ್ನು ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ನೀಡಿರುವುದಕ್ಕೆ ಭಾರಿ ಟೀಕೆಗಳು ಕೇಳಿಬರುತ್ತಿವೆ.

26
ಅಸಮಾಧಾನದ ಹೊಗೆ

ಇದಕ್ಕಾಗಿಯೇ ಸೋಷಿಯಲ್​ ಮೀಡಿಯಾದಲ್ಲಿ ಸುದೀಪ್​ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ. ಅಶ್ವಿನಿ ಗೌಡ (Ashwini Gowda) ಅವರನ್ನು ಗೆಲ್ಲಿಸುವ ಉದ್ದೇಶದಿಂದಲೇ ಹೀಗೆಲ್ಲಾ ಕಿತಾಪತಿ ಮಾಡಲಾಗುತ್ತಿದೆ ಎನ್ನುವುದು ಕೆಲವರ ಅಭಿಪ್ರಾಯ. ಇಡೀ ಸೀಸನ್‌ನಲ್ಲಿ ಆಟ, ಶಿಸ್ತು ಮತ್ತು ಮನರಂಜನೆಯನ್ನು ಸಮತೋಲನವಾಗಿ ನಡೆಸಿದವರು ಗಿಲ್ಲಿ ನಟ. ಆದರೆ ಸುದೀಪ್​ ಮೋಸ ಮಾಡಿದ್ದಾರೆ ಎನ್ನುವುದು ಆರೋಪ.

36
ವಿನಯ್​ ಗೌಡ ಏನಂದರು?

ಇದೀಗ ಈ ಬಗ್ಗೆ ಬಿಗ್​ಬಾಸ್​ 10ರ ಸ್ಪರ್ಧಿ, ನಟ ವಿನಯ್​ ಗೌಡ ಅವರು ಮಾತನಾಡಿದ್ದಾರೆ. ಬಿಗ್​ಬಾಸ್​ 12 ಶುರುವಾದಾಗ ಒಬ್ಬರು ವಾಯ್ಸ್​ ರೇಸ್​ ಮಾಡಿದ್ದರು. ಅದನ್ನು ರೈಸ್​ ಮಾಡಿದ್ದು ಅಶ್ವಿನಿ ಮೇಡಂ. ಅವರು ಮಾಡಿರಲಿಲ್ಲ ಎಂದರೆ ಇದು ಆಗುತ್ತಿರಲಿಲ್ಲ ಎಂದಿದ್ದಾರೆ.

46
ಎಲ್ಲಾ ಕಡೆ ಇದ್ದಾರೆ

ಹಾಗೆಂದ ಮಾತ್ರಕ್ಕೆ ಅವರು ಕಳಪೆ, ಏನೂ ಮಾಡ್ತಿಲ್ಲ ಎನ್ನೋದು ತಪ್ಪು. ಎಲ್ಲರೂ ಅವರವರ ಆಟವನ್ನು ಆಡುತ್ತಿದ್ದಾರೆ. ಗೆಲ್ಲಲೇಬಾರದು ಎಂದು ಹೇಳ್ತಿರೋದು ಬೇರೊಬ್ಬರ ಮತ್ತೊಬ್ಬರ ಫ್ಯಾನ್ಸ್​ ಅಲ್ವಾ? ಅಷ್ಟಕ್ಕೂ ಫ್ಯಾನ್ಸ್​ ಹೇಳೋದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಬರೀ ಬಿಗ್​ಬಾಸ್​ ಮಾತ್ರವಲ್ಲ, ಸಿನಿಮಾ, ಸೀರಿಯಲ್​ಗಳಲ್ಲಿಯೂ ಇದು ಇದದ್ದೇ ಎಂದಿದ್ದಾರೆ.

56
ಪಿಆರ್​ಗಳು ಕೆಟ್ಟದ್ದಾಗಿ ಮಾಡ್ತಿದ್ದಾರೆ

ಕೆಲವು ಪಿಆರ್​ಗಳು ಕೆಟ್ಟದ್ದಾಗಿ ಮಾಡ್ತಿದ್ದಾರೆ. ಬಿಗ್​ಬಾಸ್​​ ಗೆಲ್ಲಲು, ಮನೆಯಲ್ಲಿ ಇರುವವರಿಗೆ ಆಟವಾಡಲು ಬಿಟ್ಟುಬಿಡಬೇಕು. ಇಲ್ಲಿ ಪ್ರಚಾರ ಮಾಡಿ ಗೆಲ್ಲಿಸೋದು, ಸೋಲಿಸೋದು ಸರಿಯಲ್ಲ. ಗೇಮ್​ ಪ್ರಕಾರ ಏನ್​ ನಡೀತಾ ಇದೆ, ಹೇಗೆ ಆಡ್ತಾ ಇದ್ದಾರೆ ಪ್ರತಿಯೊಬ್ಬರೂ ನೋಡ್ತಾ ಇದ್ದಾರೆ. ಜರ್ನಿಯಲ್ಲಿ ಹೇಗೆ, ಯಾರು ಬಂದಿದ್ದಾರೆ ಎಂದು ಎಲ್ಲರೂ ನೋಡ್ತಿದ್ದಾರೆ ಎಂದು ವಿನಯ್​ ಗೌಡ ಹೇಳಿದ್ದಾರೆ.

66
ಬೂಸ್ಟ್​ ಸಿಗ್ತಾ ಇರಲಿಲ್ಲ

ಅಷ್ಟಕ್ಕೂ ಅಶ್ವಿನಿ ಮೇಡಂ ಅವರು ಇಲ್ಲದಿದ್ದರೆ ಅಷ್ಟೊಂದು ಬೂಸ್ಟ್​ ಸಿಗುತ್ತಿರಲಿಲ್ಲ. ಗಿಲ್ಲಿ ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗೂ ಒಬ್ಬರು ಆಪನೆಂಟ್​ ಬೇಕಲ್ಲ. ಸೋ ಎಲ್ಲರೂ ಚೆನ್ನಾಗಿ ಆಡ್ತಿದ್ದಾರೆ. ಹೀಗೆ ಹೇಳೋದು ಸರಿಯಲ್ಲ ಎಂದಿದ್ದಾರೆ ವಿನಯ್​ ಗೌಡ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories