Bigg Boss ಟ್ರೋಫಿ ಗೆದ್ದೆ, ಆದರೆ ಈಗ ಭಯ ಶುರುವಾಗಿದೆ: ಮನಸ್ಸು ಬಿಚ್ಚಿ ಮಾತನಾಡಿದ ಗಿಲ್ಲಿ ನಟ

Published : Jan 23, 2026, 10:32 AM IST

Bigg Boss Kannada Season 12 Winner Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ವಿಜೇತ ಗಿಲ್ಲಿ ನಟ ಅವರು ಮಾಧ್ಯಮದ ಮುಂದೆ ಬಂದು, ಬಿಗ್‌ ಬಾಸ್‌ ಜರ್ನಿ ಬಗ್ಗೆ ಮಾತನಾಡಿದ್ದಾರೆ, ಅಷ್ಟೇ ಅಲ್ಲದೆ ಈಗ ಇರುವ ಭಯವನ್ನು ಕೂಡ ಹೊರಹಾಕಿದ್ದಾರೆ. 

PREV
15
ಮಾತಾಡೋಕೆ ಆಗಲಿಲ್ಲ

“ಐದು ಶೋಗಳನ್ನು ಮಾಡಿದರೂ ಕೂಡ ಊರಿನಲ್ಲಿ ಈಗ ಇದ್ದಷ್ಟು ಸತ್ಕಾರ ಇರಲಿಲ್ಲ, ನಾನು ಕೂಡ ಬ್ಯುಸಿ ಇದ್ದೆ, ಹೀಗಾಗಿ ಯಾವುದು ಕೂಡ ಕೂಡಿ ಬಂದಿರಲಿಲ್ಲ. ಈಗ ಊರಿನಲ್ಲಿ ಜನರನ್ನು ನೋಡಿ ಮಾತನಾಡೋಕೆ ಆಗುತ್ತಿಲ್ಲ. ಮೈಕ್‌ ಕೊಟ್ಟರೂ ಕೂಡ ಖುಷಿಗೆ ಮಾತು ಬಂದಿರಲಿಲ್ಲ. ಕರ್ನಾಟಕದ ಎಲ್ಲ ಭಾಗಗಳಲ್ಲಿ ಜನರು ಅಲ್ಲಿಗೆ ಬಂದಿದ್ದರು” ಎಂದು ಗಿಲ್ಲಿ ನಟ ಹೇಳಿದ್ದಾರೆ.

25
ಕನಸು ಕಾಣೋ ಯೋಗ್ಯತೆ ಇಲ್ಲ

“ಜನರ ಪ್ರೀತಿ ಇಷ್ಟೆಲ್ಲ ಸಿಕ್ಕಿರೋದು ನೋಡಿ ಖುಷಿ ಆಗಿದೆ. ನನಗೆ ಇದನ್ನೆಲ್ಲ ಕನಸು ಕೂಡ ಕಾಣುವ ಯೋಗ್ಯತೆ ಇರಲಿಲ್ಲ, ನನ್ನ ಜಾಗದಲ್ಲಿ ಇದ್ದವರಿಗೆ ನನ್ನ ಪರಿಸ್ಥಿತಿ ಗೊತ್ತಾಗಿರುತ್ತದೆ” ಎಂದು ಹೇಳಿದ್ದಾರೆ.

35
ಎಲ್ಲ ದೇವರ ಹತ್ರ ಬೇಡಿಕೊಂಡೆ

“ಕಿಚ್ಚ ಸುದೀಪ್‌ ಅವರು ವಿನ್ನರ್‌ಗೆ ಇಷ್ಟು ವೋಟ್‌ ಬಂದಿದೆ ಎಂದಾಗ, ನನಗೆ ಆ ಮತ ಬಂದಿರಲಿ ಅಂತ ಮಳವಳ್ಳಿಯ ಎಲ್ಲ ದೇವರ ಬಳಿ ಕೇಳಿಕೊಂಡೆ, ಅಂದು ರಾತ್ರಿ ಕೂಡ ನಾನು ನಿದ್ದೆ ಮಾಡಿರಲಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ.

45
ಅಲ್ಲೇ ಕಳೆದುಹೋದೆ

ಕಪ್‌ ಗೆದ್ದು ಕೆಳಗಡೆ ಇಳಿದಕೂಡಲೇ ನನಗೆ ಹೊರಗಡೆ ಜನರು ಕಟೌಟ್‌ ಹಾಕಿದ ವಿಡಿಯೋ ತೋರಿಸಿದ್ದರು, ಅಲ್ಲೇ ನಾನು ಕಳೆದುಹೋದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.

55
ಈಗ ಇರುವ ಭಯ ಏನು?

“ಈಗ ಇಷ್ಟು ಜನರು ಪ್ರೀತಿ ಕೊಟ್ಟಿದ್ದಾರೆ, ಹೀಗಾಗಿ ತುಂಬ ಮುತುವರ್ಜಿಯಿಂದ ಹೆಜ್ಜೆ ಇಡಬೇಕು. ಸ್ವಲ್ಪವೂ ಕೂಡ ತಪ್ಪು ಆಗಬಾರದು ಎಂದು ಭಯ ಇದೆ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories