ಹಳೇ ಸೀಸನ್‌ ಸ್ಪರ್ಧಿಗಳಿಗೆ ಒಂದು ನ್ಯಾಯ? ಈಗ ಇನ್ನೊಂದು ನ್ಯಾಯವೇ Bigg Boss? ವಿಡಿಯೋ ವೈರಲ್

Published : Dec 27, 2025, 10:40 AM IST

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾವ್ಯ ಶೈವ ಅವರ ಮನೆಯವರು ಹೊರಗಡೆ ವಿಚಾರವನ್ನು ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬೇಗ ಮನೆಯಿಂದ ಹೊರಗಡೆ ಕಳಿಸಲಾಗಿತ್ತು, ಆದರೆ ಹಳೇ ಸೀಸನ್‌ನಲ್ಲಿ ಮಾಡಿದ್ದೇನು? 

PREV
16
ತ್ರಿವಿಕ್ರಮ್‌ಗೆ ತಾಯಿ ವಾರ್ನಿಂಗ್

‌ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ತ್ರಿವಿಕ್ರಮ್‌ ಅವರ ತಾಯಿ, “ಭವ್ಯಾ ಗೌಡ ಜೊತೆಗಿರಬೇಡ” ಎಂದು ಹೇಳಿದ್ದರು. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ಅವರು ಅಣ್ಣ-ತಮ್ಮ ಎನ್ನೋ ಥರ ಇದ್ದರು. ಇವರಿಬ್ಬರು ಲವ್‌ ಮಾಡುತ್ತಿದ್ದಾರೆ, ಮದುವೆ ಆದರೆ ಚೆಂದ ಎನ್ನೋ ಥರ ಒಂದಿಷ್ಟು ಜನರು ಹೇಳಿದ್ದುಂಟು. ನಾವಿಬ್ಬರೂ ಫ್ರೆಂಡ್ಸ್‌ ಎಂದು ತ್ರಿವಿಕ್ರಮ್‌, ಭವ್ಯಾ ಹೇಳಿದ್ದರು.

26
ಎಚ್ಚರಿಕೆ ಕೊಟ್ಟಿದ್ದ ಗೌತಮಿ ಪತಿ

ಗೌತಮಿ ಜಾಧವ್‌ ಹಾಗೂ ಮಂಜು ಸ್ನೇಹದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಗೌತಮಿ ಹೇಳಿದಂತೆ ಮಂಜು ಕೇಳುತ್ತಾರೆ, ಗೌತಮಿ ಮಾತಿಗೆ ಮಾತ್ರ ಮಂಜು ಬೆಲೆ ಕೊಡ್ತಾರೆ, ಗೌತಮಿ ಅಭಿಪ್ರಾಯ ಮಾತ್ರ ಮ್ಯಾಟರ್‌ ಆಗತ್ತೆ ಎನ್ನೋ ಥರ ಆಗಿತ್ತು. ಆಗ ಬಿಗ್‌ ಬಾಸ್‌ ಮನೆಯೊಳಗಡೆ ಬಂದಿದ್ದ ಅಭಿಷೇಕ್‌ ಅವರು ಗೌತಮಿ ಜಾಧವ್‌ಗೆ, “ಬೀ ಕೇರ್‌ಫುಲ್, ನಿನ್ನ ಆಟ ನೀನು ಆಡು, ಎಲ್ಲರನ್ನು ನಂಬೋಕೆ ಹೋಗಬೇಡ, ಇದು ಟಾಸ್ಕ್” ಎಂದು‌ ಬುದ್ಧಿ ಹೇಳಿದ್ದರು.

36
ಮಂಜುಗೆ ಬುದ್ಧಿವಾದ

ಗೌತಮಿ ಜಾಧವ್‌ ಹಾಗೂ ಮಂಜು ಸ್ನೇಹದ ಬಗ್ಗೆ ದೊಡ್ಡ ಚರ್ಚೆ ಆಗುತ್ತಲಿತ್ತು. ಮಂಜು ತನ್ನ ಆಟವನ್ನು ಆಡದೆ,‌ ಗೌತಮಿ ಹೇಳಿದಂತೆ ಕೇಳುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆಗ ಮನೆಯೊಳಗಡೆ ಬಂದಿದ್ದ ಮಂಜು ಅವರ ಸಹೋದರಿ, “ಫ್ರೆಂಡ್‌ಶಿಪ್‌ ಬ್ರೇಕ್‌ ಮಾಡು, ಆ ಸ್ನೇಹ ಬೇಡ” ಎಂದು ಹೇಳಿದ್ದರು.

46
ಇದು ನ್ಯಾಯವೇ?

ಮನೆಯವರ ಅಭಿಪ್ರಾಯ ಗೊತ್ತಾದಮೇಲೆ ಸ್ಪರ್ಧಿಗಳು ಬದಲಾಗ್ತಾರಾ? ನೋಡೋಣ ಎಂದು ಕಿಚ್ಚ ಸುದೀಪ್‌ ಅವರು ವೀಕೆಂಡ್‌ ಎಪಿಸೋಡ್‌ನಲ್ಲಿ ಹೇಳಿದ್ದುಂಟು. ಆದರೆ ಈ ಬಾರಿ ಕಾವ್ಯ ಶೈವ ಅವರ ತಮ್ಮ ಕಾರ್ತಿಕ್‌ ಅವರು, “ಗಿಲ್ಲಿ ನಟನ ಸ್ನೇಹ ಹೊರಗಡೆ ಹೇಗೆ ಕಾಣಸ್ತಿದೆ? ಗಿಲ್ಲಿ ನಟನನ್ನು ಯಾಕೆ ನಾಮಿನೇಟ್‌ ಮಾಡಿರೋದು? ಗಿಲ್ಲಿ ನಟನ ವಿರುದ್ಧ ಹೋಗಿದ್ದು ಯಾಕೆ? ಯಾರು ಸೋಶಿಯಲ್‌ ಮೀಡಿಯಾವನ್ನು ಹ್ಯಾಂಡಲ್‌ ಮಾಡುತ್ತಿದ್ದಾರೆ?” ಈ ಬಗ್ಗೆ ಮಾತನಾಡಿದ್ದರು.

56
ಕಾವ್ಯ ಶೈವ ಕುಟುಂಬಕ್ಕೆ ಎಚ್ಚರಿಕೆ

ಬಿಗ್‌ ಬಾಸ್‌ ವಾರ್ನ್‌ ಮಾಡಿದರೂ ಕೂಡ ಕಾವ್ಯ ಶೈವ ಅವರು ಹೊರಗಡೆ ಜನರಿಗೆ ಹೇಗೆ ಕಾಣಸ್ತಿದೆ ಎಂದು ಮಾತನಾಡಿದ್ದರು. ಆಮೇಲೆ ಬಿಗ್‌ ಬಾಸ್‌ ವಾರ್ನ್‌ ಮಾಡಿ, ಕಾರ್ತಿಕ್‌, ಸಾವಿತ್ರಿ ಅವರು ಹೊರಗಡೆ ಬನ್ನಿ ಎಂದು ಹೇಳಿದ್ದರು.

66
ಕರಗದ ಬಿಗ್‌ ಬಾಸ್

ನಾವು ಹೊರಗಡೆಯ ವಿಚಾರವನ್ನು ಮಾತನಾಡಿಲ್ಲ, ನನ್ನ ಆಟದ ಮೇಲೆ ಪರಿಣಾಮ ಬೀರುವ ಮಾತನಾಡಿಲ್ಲ ಎಂದು ಕಾವ್ಯ ಶೈವ ಅವರು ಕ್ಷಮೆ ಕೇಳಿದ್ದರು. ಆದರೂ ಅವರ ಮನೆಯವರನ್ನು ಬಿಗ್‌ ಬಾಸ್‌ ಕಳಿಸಿಲ್ಲ. ಈಗ ಹಳೇ ಸೀಸನ್ ಸ್ಪರ್ಧಿಗಳ ಮನೆಯವರು‌ ಮಾತನಾಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದು, ಅವರಿಗೊಂದು ನ್ಯಾಯ? ಇವರಿಗೊಂದು ನ್ಯಾಯವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories