ಲವ್​ ಅಜ್ಜಿಯ ಮಾಸ್ಟರ್​ ಪ್ಲ್ಯಾನ್​ನಿಂದ ರೋಚಕ ಟ್ವಿಸ್ಟ್​​: Amruthadhaare Serial ಯಾವಾಗ ಮುಗಿಯತ್ತೆ?

Published : Dec 14, 2025, 04:57 PM IST

'ಅಮೃತಧಾರೆ' ಧಾರಾವಾಹಿಯಲ್ಲಿ ಲವ್ ಅಜ್ಜಿಯ ಮರುಪ್ರವೇಶವಾಗಿದ್ದು, ದೂರವಾಗಿರುವ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಸಾಯುವ ನಾಟಕವಾಡಿದ್ದಾಳೆ. ಅಜ್ಜಿಯ ಕೊನೆಯಾಸೆಯಂತೆ ಇಬ್ಬರೂ ಆಶ್ರಮಕ್ಕೆ ಬರಲಿದ್ದು, ಈ ಪ್ಲ್ಯಾನ್ ಯಶಸ್ವಿಯಾಗುವುದೇ ಎಂದು ಕಾದುನೋಡಬೇಕಿದೆ.

PREV
18
ಲವ್​ ಅಜ್ಜಿ ಎಂಟ್ರಿ

ಅಮೃತಧಾರೆ ಸೀರಿಯಲ್​ (Amruthadhaare)ನಲ್ಲಿ ಲವ್​ ಅಜ್ಜಿಯ ಎಂಟ್ರಿ ಆಗಿದೆ. ಹಾವು -ಮುಂಗುಸಿಯಂತಿದ್ದ ಗೌತಮ್​ ಮತ್ತು ಭೂಮಿಕಾ ನಡುವೆ ಪ್ರೀತಿಯನ್ನು ಚಿಗುರಿಸಿದ್ದ ಇದೇ ಲವ್​ ಗುರು ಅಜ್ಜಿ, ಇದೀಗ ಮತ್ತೆ ಇಬ್ಬರನ್ನೂ ಒಂದು ಮಾಡಲು ಮಾಸ್ಟರ್​ ಪ್ಲ್ಯಾನ್​ ಹಾಕಿದ್ದಾಳೆ.

28
ದೂರ ದೂರ...

ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್​ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್​ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್​ ಜೊತೆ ಬರಲು ರೆಡಿನೇ ಇಲ್ಲ. ಗೌತಮ್​ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ. ಈಗ ಆ ಭಯ ದೂರವಾಗಿದೆ.

38
ಆಸ್ತಿ ಕಬಳಿಕೆ

ಅದೇ ಇನ್ನೊಂದೆಡೆ, ಅಜ್ಜಿಯ ಎಲ್ಲಾ ಆಸ್ತಿಗಳನ್ನು ಕಬಳಿಸಿ ಜೈದೇವ್​ ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾನೆ. ಅಜ್ಜಿಯ ಕಷಾಯದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಹೆಬ್ಬೆರಳು ಅಚ್ಚು ಹಾಕಿಸಿಕೊಂಡು ಆಸ್ತಿ ಲಪಟಾಯಿಸಿದ್ದಾನೆ.

48
ಆನಂದ್​ಗೆ ವಿಷ್ಯ

ಈ ವಿಷ್ಯ ಮಾವ ಲಕ್ಷ್ಮೀಕಾಂತನಿಂದ ಆನಂದ್​ಗೆ ಗೊತ್ತಾಗಿದೆ. ಅಜ್ಜಿಯನ್ನು ಹುಡುಕಿ ಭಾಗ್ಯಮ್ಮ ಮತ್ತು ಆನಂದ್​ ವೃದ್ಧಾಶ್ರಮಕ್ಕೆ ಹೋಗಿದ್ದಾರೆ. ಅಜ್ಜಿ ಅಂದ್ರೆ ಸುಮ್ಮನೇ ಅಲ್ಲ. ಈ ಮೊದಲೂ ಇವರಿಬ್ಬರನ್ನು ಒಂದು ಮಾಡಿದ್ದು ಇದೇ ಅಜ್ಜಿ. ಈಗಲೂ ಒಂದು ಮಾಡುವ ಪಣ ತೊಟ್ಟಿದ್ದಾಳೆ.

58
ಸಾಯುವ ನಾಟಕ

ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್​ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್​ಗೆ ಹೇಳಿದ್ದಾಳೆ. ಆ ಪ್ಲ್ಯಾನ್​​ನಂತೆ ಭಾಗ್ಯಮ್ಮ ಭೂಮಿಕಾ ಮನೆಗೆ ಬಂದು ಅಜ್ಜಿ ಈಗಲೋ ಆಗಲೋ ಎನ್ನುತ್ತಿದ್ದಾರೆ. ಬೇಗ ಗೌತಮ್​ನನ್ನು ಕರೆದುಕೊಂಡು ಬಾ ಎಂದಿದ್ದಾಳೆ.

68
ಗೌತಮ್​ಗೆ ವಿಷ್ಯ

ಅದೇ ಇನ್ನೊಂದೆಡೆ, ಆನಂದ್​ ಗೌತಮ್​ಗೆ ಕಾಲ್​ ಮಾಡಿ ವಿಷಯ ತಿಳಿಸಿದ್ದಾನೆ. ಅಜ್ಜಿಯ ಕೊನೆಯ ಆಸೆ ಈಡೇರಿಸಬೇಕು ಎಂದರೆ ಅತ್ತಿಗೆಯನ್ನು ಕರೆದುಕೊಂಡು ಆಶ್ರಮಕ್ಕೆ ಬಾ ಎಂದಿದ್ದಾನೆ. ಮೊದಲಿಗೆ ಇದನ್ನು ಗೌತಮ್​ ನಂಬದಿದ್ದರೂ ಕೊನೆಗೆ ನಂಬಿದ್ದಾನೆ.

78
ಇಬ್ಬರೂ ಬರಲೇಬೇಕು

ಇದೀಗ ಗೌತಮ್​ ಮತ್ತು ಭೂಮಿಕಾ ಅಜ್ಜಿಯನ್ನು ನೋಡಲು ಬರಲೇಬೇಕು. ನಾಟಕದಲ್ಲಿ ಎಕ್ಸ್​ಪರ್ಟ್​ ಅಜ್ಜಿ ಇಬ್ಬರನ್ನೂ ಒಂದು ಮಾಡೋದಂತೂ ಗ್ಯಾರೆಂಟಿ. ಹೀಗಾದರೆ ಅಲ್ಲಿಗೆ ದೊಡ್ಡ ಸ್ಟೋರಿ ಮುಗಿದಂತೆ.

88
ಜೈದೇವ್​ಗೆ ಬುದ್ಧಿ ಕಲಿಸೋದು

ಇನ್ನೇನಿದ್ದರೂ ಜೈದೇವ ಮತ್ತು ಶಕುಂತಲಾಗೆ ಬುದ್ಧಿ ಕಲಿಸೋದು ಮಾತ್ರ ಬಾಕಿ ಇರೋದು. ಅದಕ್ಕೂ ಈ ಅಜ್ಜಿ ಬಳಿ ಪ್ಲ್ಯಾನ್​​ ಇದ್ದೇ ಇದೆ. ಎಲ್ಲರೂ ಒಂದಾಗಿ ಅದನ್ನೂ ಮಾಡಿದರೆ ಅಲ್ಲಿಗೆ ಸೀರಿಯಲ್​ ಅತಿ ಶೀಘ್ರದಲ್ಲಿ ಮುಗಿಯುವ ಸೂಚನೆ ಕಾಣಿಸುತ್ತಿದೆ.

Read more Photos on
click me!

Recommended Stories