ಬೇರೆ ವಾಹಿನಿಯಲ್ಲಿ ನಟಿಸೋದಕ್ಕಾಗಿ ಎರಡೆರಡು ಸೀರಿಯಲ್’ಗಳಲ್ಲಿ ಪ್ರಾಣತ್ಯಾಗ ಮಾಡಿದ್ರ ಈ ನಟ!

Published : Feb 08, 2026, 03:33 PM IST

Hanumanthe Gowda: ಜೀ ಕನ್ನಡ ಬಿಟ್ಟಾಯ್ತು, ಈಗ ಕಲರ್ಸ್ ಕನ್ನಡ. ಬೇರೆ ವಾಹಿನಿಯಲ್ಲಿ ಅಪ್ಪ ಆಗಿ ನಟಿಸುವುದಕ್ಕಾಗಿಯೇ ಎರಡೆರಡು ಸಲ ಪ್ರಾಣ ತ್ಯಾಗ ಮಾಡಿದ್ರು ಈ ನಟ. ಹಿಂದೆ ಅಮೃತಧಾರೆ, ಈಗ ಭಾರ್ಗವಿ LLB. ಹಾಗಿದ್ರೆ ಮುಂದಿನ ಸೀರಿಯಲ್ ಯಾವುದು?

PREV
16
ಹನುಮಂತೇ ಗೌಡ

ಹನುಮಂತೇ ಗೌಡ ಎನ್ನುವ ಹೆಸರನ್ನು ಕೇಳಿದ್ರೆ ಹೆಚ್ಚಿನ ಜನಕ್ಕೆ ಗೊತ್ತಾಗಲ್ಲ, ಆದರೆ ಇವರು ನಟಿಸಿದತಹ ಪಾತ್ರಗಳು, ಅದು ಟಿವಿಯೇ ಆಗಿರಲಿ ಅಥವಾ ಸಿನಿಮಾವೇ ಆಗಿರಲಿ, ಎಲ್ಲಾ ಪಾತ್ರಗಳು, ಅವರ ಡೈಲಾಗ್ ಡೆಲಿವರಿ ಎಲ್ಲವೂ ಅದ್ಭುತ, ಆದರೆ ಇವರು ಈಗ ಎಲ್ಲಾ ಧಾರಾವಾಹಿಗಳಲ್ಲೂ ಸಾಯುತ್ತಿದ್ದಾರಲ್ಲ ಯಾಕೆ?

26
ಬೇರೆ ಧಾರಾವಾಹಿಗಾಗಿ ಪ್ರಾಣತ್ಯಾಗ

ಅಂದ ಹಾಗೆ ಹನುಮಂತೇ ಗೌಡ ಅಂದ್ರೆ, ‘ಭಾರ್ಗವಿ LLB’ ಧಾರಾವಾಹಿಯಲ್ಲಿ ಭಾರ್ಗವಿಯ ತಂದೆಯ ಪಾತ್ರದಲ್ಲಿ ನಟಿಸುತ್ತಿರುವ ನಟ. ಇವರು ಈ ಹಿಂದೆ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿಯ ತಂದೆಯಾಗಿಯೂ ನಟಿಸಿದ್ದರು. ಎರಡೂ ಧಾರಾವಾಹಿಗಳಲ್ಲೂ ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಪಾತ್ರಗಳ ಮೂಲಕ ಜನರಿಗೆ ಇಷ್ಟವಾಗಿದ್ದರು.

36
ಅಮೃತಧಾರೆಯ ವಿಲನ್

ಜೀ ಕನ್ನಡದಲ್ಲಿ ಅಮೃತಧಾರೆ ಧಾರಾವಾಹಿಯಲ್ಲಿ ವಿಲನ್ ಆಗಿ, ಗೌತಮ್ ದಿವಾನ್ ಜೀವನವನ್ನು ಹಾಳು ಮಾಡಲು ಬಂದು, ಕೊನೆಗೆ ತನ್ನ ಮಗಳು ಮಲ್ಲಿ ಜೀವನವನ್ನೇ ಕೈಯಾರೆ ಹಾಳು ಮಾಡಿಕೊಂಡರು. ಈ ಧಾರಾವಾಹಿಯಲ್ಲಿ ಕೊನೆಗೆ ಒಳ್ಳೆಯವರಾಗಿ ಬದಲಾಗಿ, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವಾಗಲೇ ತಾನೇ ಶೂಟ್ ಮಾಡಿಕೊಂಡು ಜೀವನವನ್ನು ಕೊನೆ ಮಾಡಿದರು. ಅಲ್ಲಿಂದ ಕಲರ್ಸ್ ಕನ್ನಡಕ್ಕೆ ಹಾರಿದರು.

46
ಭಾರ್ಗವಿ LLB ಯಲ್ಲಿ ನಟನೆ

ಜೀ ಕನ್ನಡದಲ್ಲಿ ಸತ್ತು ಕಲರ್ಸ್ ಕನ್ನಡಕ್ಕೆ ಹಾರಿದ ಹನುಮಂತೇ ಗೌಡ, ಅಲ್ಲಿ ಭಾರ್ಗವಿಯ ತಂದೆ ರವೀಂದ್ರ ಭಟ್ಕಳ್ ಪಾತ್ರದಲ್ಲಿ ನಟಿಸಿದರು. ತನ್ನ ಅಪ್ಪನಿಗೆ ಮೋಸ ಮಾಡಿ, ಅವರು ಲಾಯರ್ ಕೋಟ್ ಹಾಕದಂತೆ ಮಾಡಿದ ಜೆಪಿ ಪಾಟೀಲ್ ವಿರುದ್ಧ ಎದ್ದು ನಿಂತು, ಮತ್ತೆ ಅಪ್ಪ ಲಾಯರ್ ಆಗುವಂತೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದ ಭಾರ್ಗವಿ, ಅದರಲ್ಲಿ ಗೆದ್ದು ಅಪ್ಪ ಮತ್ತೆ ಕಪ್ಪು ಕೋಟ್ ಧರಿಸಿ ಕೋರ್ಟ್ ಮೆಟ್ಟಿಲೇರುವಂತೆ ಮಾಡುತ್ತಾಳೆ. ಆದರೆ ಕೊನೆಗೆ ಇಲ್ಲೂ ಸಾವು.

56
ಕಲರ್ಸ್ ಕನ್ನಡಲ್ಲೂ ಸಾವು

ಇದೀಗ ಕೋರ್ಟ್ ನಲ್ಲಿ ಜೆ,ಪಿ ಪಾಟೇಲ್ ವಿರುದ್ಧ ಗೆದ್ದ ಭಾರ್ಗವಿ ತಂದೆ ರವೀಂದ್ರ ಭಟ್ಕಳ್, ಯಾರೂ ಊಹಿಸಿರದ ಹೊತ್ತಿನಲ್ಲೆ ಸಾವನ್ನಪ್ಪಿದ್ದಾರೆ. ಆಕ್ಸಿಡೆಂಟ್ ನಲ್ಲಿ ಸಾವಾಗಿದೆ. ಆದರೆ ಈ ಸಾವು ಕೂಡ ಹನುಮಂತೇ ಗೌಡರು ಬೇರೆ ಸೀರಿಯಲ್ ಗೆ ಹಾರುವ ಮುನ್ಸೂಚನೆ ಎನ್ನುತ್ತಿದ್ದಾರೆ ವೀಕ್ಷಕರು. ಅವರು ಸದ್ಯದಲ್ಲೇ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿಯಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದಕ್ಕಾಗಿ ಈ ಧಾರಾವಾಹಿಯಲ್ಲಿ ಪ್ರಾಣತ್ಯಾಗ ಮಾಡಿದ್ರ ಹನುಮಂತೇ ಗೌಡರು.

66
ಹನುಮಂತೆ ಗೌಡರ ಕರಿಯರ್

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದ ಹನುಮಂತೇ ಗೌಡರು, ಕೃಷಿ ಕುಟುಂಬದ ಹಿನ್ನಲೆಯಿಂದ ಬಂದು, ಬೆಂಗಳೂರಿನಲ್ಲಿ ಪದವಿ ಪಡೆಯುವಾಗ ನಾಟಕರಂಗದ ಸಂಪರ್ಕಕ್ಕೆ ಬಂದರು. 1999 ರಲ್ಲಿ `ಚಿತ್ತಾರದ ಬದುಕು' ಎಂಬ ಸೀರಿಯಲ್ ನಿಂದ ಕಿರುತೆರೆ ಪ್ರವೇಶಿಸಿದರು. `ಮುಕ್ತ ಮುಕ್ತ' ಧಾರಾವಾಹಿಯಿಂದ ಜನಪ್ರಿಯತೆ ಪಡೆದರು. 2003 ರಲ್ಲಿ ತೆರೆಕಂಡ `ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ಖಳನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟು, ಅಲ್ಲಿಂದ ಇಲ್ಲಿವರೆಗೆ ಹಲವಾರು ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories