ವಿಮಾನ ನಿಲ್ದಾಣದ ನಿರ್ವಹಣಾಧಿಕಾರಿ BIAL, ಕೆಲವೊಂದು ವಿಮಾನಗಳು ರದ್ದಾಗಿವೆ ಎಂದು ಹೇಳಿದ್ದು, ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ವಿಮಾನಯಾನ ಸಂಸ್ಥೆಗಳ Twitter/X ಪುಟಗಳಲ್ಲಿ ಪರಿಶೀಲಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಭದ್ರತಾ ಕ್ರಮಗಳೆಡೆಗೆ ಹೆಚ್ಚಿನ ಕಾಳಜಿ
ಭದ್ರತಾ ಕ್ರಮಗಳ ಭಾಗವಾಗಿ, ಭಾರತದಲ್ಲಿನ 25 ಪ್ರಮುಖ ವಿಮಾನ ನಿಲ್ದಾಣಗಳನ್ನು ಮೇ 9ರ ರಾತ್ರಿ 11:59 ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಲ್ಲಿ ಚಂಡೀಗಢ, ಶ್ರೀನಗರ, ಅಮೃತಸರ, ಶಿಮ್ಲಾ, ಜಮ್ಮು, ಲೆಹ್, ರಾಜ್ಕೋಟ್ ಮುಂತಾದವು ಸೇರಿವೆ.