ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿರುವ ಕನ್ನಡಿಗ ಕಿಶೋರ್, ಪ್ರತಿಯೊಂದು ಪಾತ್ರವನ್ನು ಕೂಡ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಶೋರ್ ಈಗ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಈದ್ಗೆ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರ ಸಿಕಂದರ್ನಲ್ಲಿ , ನಟ ಸಲ್ಮಾನ್ ಖಾನ್ ವಿರುದ್ಧ ವಿಲನ್ ಪಾತ್ರದಲ್ಲಿ ಕಿಶೋರ್ ಮಿಂಚಿದ್ದು ಇದು ಅವರ ಬಾಲಿವುಡ್ ನ ಮೊದಲ ಸಿನೆಮಾವಾಗಿದೆ.
ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮತ್ತು ಸತ್ಯರಾಜ್ ಖಳನಾಯಕನಾಗಿದ್ದಾರೆ. ಕಿಶೋರ್ ಇನ್ಸ್ಪೆಕ್ಟರ್ ಪ್ರಕಾಶ್ ಪಾತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಖಳನಾಯಕ, ಮುಖ್ಯ ನಾಯಕ ಅಥವಾ ಪ್ರಮುಖ ಪಾತ್ರದಲ್ಲಿ ಹೀಗೆ ವಿವಿಧ ಯಾವುದೇ ಪಾತ್ರ ಕೊಟ್ಟರೂ ನಟಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಕಿಶೋರ್ ಸಿಕಂದರ್ ನಲ್ಲಿ ಸಿಕ್ಕಿರುವ ಅವಕಾಶಕ್ಕೆ ಉತ್ಸುಕರಾಗಿದ್ದಾರೆ ಮತ್ತು ಕೃತಜ್ಞರಾಗಿದ್ದಾರೆ. "ಇದು ಒಂದು ಸಣ್ಣ ಪಾತ್ರ ಮತ್ತು ನನಗೆ ಸಲ್ಮಾನ್ ಮತ್ತು ಸತ್ಯರಾಜ್ ಅವರೊಂದಿಗೆ ಪರದೆಯ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಆದರೆ ಇಷ್ಟು ದೊಡ್ಡ ಕ್ಯಾನ್ವಾಸ್ನಲ್ಲಿ ಕೆಲಸ ಮಾಡುವುದು ಒಳ್ಳೆಯ ಅನುಭವವಾಗಿತ್ತು" ಎಂದಿದ್ದಾರೆ.
Sikandar Review: ʼಮುರುಗದಾಸ್ ಮೋಸ ಮಾಡಿದ್ರುʼ-ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಿನಿಮಾ ಬಗ್ಗೆ ಎಂಥ ಮಾತು?
ಸಿಕಂದರ್ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದರೂ, ಕಿಶೋರ್ ಬಳಿ ಒಂದೆರಡು ಹಿಂದಿ ಸಿನೆಮಾಗಳಿದ್ದು ಶೂಟಿಂಗ್ ನಡೆಯುತ್ತಿದೆ. ನಾನು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ ಮತ್ತು ನನ್ನ ಬಳಿ ರೆಡ್ ಕಾಲರ್ ಎಂಬ ಇನ್ನೊಂದು ಚಿತ್ರವೂ ಇದೆ. ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ. ಹಿಂದಿ ಸಿನಿಮಾವನ್ನು ಅಪ್ಪಿಕೊಳ್ಳುತ್ತಿರುವ ಕಿಶೋರ್, ಭಾರತೀಯ ಭಾಷೆಗಳಾದ್ಯಂತ ತಮ್ಮ ಪ್ರಯಾಣವು ಶ್ರೀಮಂತವಾಗಿದೆ ಎಂದರು ಜೊತೆಗೆ ನಾನು ಇನ್ನೂ ಮರಾಠಿ ಸಿನಿಮಾಕ್ಕೆ ಕಾಲಿಟ್ಟಿಲ್ಲ ಎಂದರು.
ನಾನು ಎಲ್ಲೇ ಇದ್ದರೂ, ನನಗಾಗಿ ಆರಾಮದಾಯಕ ಸ್ಥಳವನ್ನು ಸೃಷ್ಟಿಸಿಕೊಳ್ಳುತ್ತೇನೆ. ಮುರುಗದಾಸ್ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರ ಉಪಸ್ಥಿತಿಯೇ ಸೆಟ್ನಲ್ಲಿ ಅವರ ನಿರಾಳತೆಗೆ ಕಾರಣ ಎಂದು ಹೇಳುತ್ತಾರೆ. ಈ ಚಿತ್ರದಲ್ಲಿ ಕರ್ನಾಟಕದ ಕೆಲವು ಜನರು ಕೆಲಸ ಮಾಡುತ್ತಿದ್ದರು. ನನಗೆ ಸೆಟ್ ನಲ್ಲಿ ಆರಾಮವಿತ್ತು. ರಶ್ಮಿಕಾ ಕೂಡ ನನಗೆ ಪರಿಚಿತರಾಗಿದ್ದರು. ಸೆಟ್ ನಲ್ಲಿ ಬಹಳ ವಿಷ್ಯಗಳ ಬಗ್ಗೆ ಚರ್ಚಿಸಿದ್ದೇವೆ.
ಬಾಕ್ಸಾಫೀಸ್ನಲ್ಲಿ ಕನ್ನಡ ನಟಿಯರ ಫೈಟ್! ರಶ್ಮಿಕಾಗೆ ಶ್ರೀಲೀಲಾ ಸವಾಲ್, ಯಾರು ಮಾಡ್ತಾರೆ ಕಮಾಲ್?
'ಸಿಕಂದರ್' ಚಿತ್ರದಲ್ಲಿ ಭ್ರಷ್ಟ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಪಾತ್ರವನ್ನು ಕಿಶೋರ್ ನಿರ್ವಹಿಸಿದ್ದಾರೆ.ಕಿಶೋರ್ 2004 ರಲ್ಲಿ 'ಕ್ರಾಂತಿ' ಚಿತ್ರದ ಮೂಲಕ ಕನ್ನಡ ಸಿನಿಮಾಗೆ ಪಾದಾರ್ಪಣೆ ಮಾಡಿದರು. ಈ ವಾರದಲ್ಲಿ ಕಿಶೋರ್ ಅವರ 2 ಸಿನಿಮಾಗಳು ಬಿಡುಗಡೆಯಾಗಿವೆ. 'ಸಿಕಂದರ್' ಸಿನಿಮಾ ಸುಮಾರು 200 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ.