Chanakya Niti in Kannada: ಆಚಾರ್ಯ ಚಾಣಕ್ಯರು ಮಾನವನ ಜೀವನ, ಸಂಬಂಧಗಳು ಮತ್ತು ಸಮಾಜದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅವರು ಹೇಳಿದ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ಅಂದಹಾಗೆ ಪುರುಷರು ಪರಸ್ತ್ರೀಯರತ್ತ ಆಕರ್ಷಿತರಾಗಲು ಇರುವ ಪ್ರಮುಖ ಕಾರಣಗಳನ್ನು ಚಾಣಕ್ಯರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ.
ಸುಖಿ ದಾಂಪತ್ಯಕ್ಕೆ ನಂಬಿಕೆ ಮತ್ತು ಪ್ರೀತಿ ಅಡಿಪಾಯ. ಆದರೆ ಕೆಲವು ಸಂದರ್ಭಗಳಲ್ಲಿ ಪುರುಷರ ಮನಸ್ಸು ಹಳಿತಪ್ಪುವುದುಂಟು. ಇದಕ್ಕೆ ಕೇವಲ ದೈಹಿಕ ಆಕರ್ಷಣೆ ಮಾತ್ರವಲ್ಲದೆ, ಮಾನಸಿಕ ಮತ್ತು ಸಾಮಾಜಿಕ ಕಾರಣಗಳೂ ಇರುತ್ತವೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಆ ಪ್ರಮುಖ ಕಾರಣಗಳನ್ನು ಈ ಕೆಳಗಿನಂತೆ ವಿವರಿಸಬಹುದು.
26
ಸೌಂದರ್ಯ ಮತ್ತು ಆಕರ್ಷಣೆ
ಪುರುಷರು ಸುಂದರವಾದ ಸ್ತ್ರೀಯನ್ನು ಕಂಡಾಗ ಅವರ ಆಲೋಚನಾ ಲಹರಿ ಬದಲಾಗುತ್ತದೆ. ಚಾಣಕ್ಯರ ಪ್ರಕಾರ, ಸ್ತ್ರೀಯರ ಸೌಂದರ್ಯದ ಬಗ್ಗೆ ಯೋಚಿಸುವುದು ಪುರುಷರಿಗೆ ಒಂದು ರೀತಿಯ ಎಮೋಷನ್ (ಭಾವನೆ) ಇದ್ದಂತೆ. ಈ ಆಕರ್ಷಣೆಯು ವಿವಾಹಿತ ಪುರುಷರು ಕೂಡ ಪರಸ್ತ್ರೀಯರೊಂದಿಗೆ ಮಾತನಾಡಲು ಪ್ರೇರೇಪಿಸುತ್ತದೆ.
36
ದಾಂಪತ್ಯದಲ್ಲಿ ಏಕತಾನತೆ
ಮದುವೆಯಾದ ಕೆಲವು ವರ್ಷಗಳ ನಂತರ ಜೀವನದಲ್ಲಿ ಹೊಸತನವಿಲ್ಲದೆ ಬೋರ್ ಎನಿಸಬಹುದು. ಅಂತಹ ಸಮಯದಲ್ಲಿ ಮನಸ್ಸನ್ನು ಬದಲಾಯಿಸಿಕೊಳ್ಳಲು ಕೆಲವರು ಪರಸ್ತ್ರೀಯರ ಒಡನಾಟ ಬಯಸುತ್ತಾರೆ. ಇಂತಹವರು ಕುಟುಂಬಕ್ಕಿಂತ ಹೊರಗಿನವರಿಗೆ ಹೆಚ್ಚು ಬೆಲೆ ನೀಡಲು ಶುರುಮಾಡುತ್ತಾರೆ.
ಕೆಲವು ಪುರುಷರು ಪ್ರತಿದಿನವೂ ಜೀವನದಲ್ಲಿ ಹೊಸತನವನ್ನು ಬಯಸುತ್ತಾರೆ. ಪತ್ನಿಯ ಜೊತೆಗಿರುವುದಕ್ಕಿಂತ ಹೊಸಬರೊಂದಿಗೆ ಸಮಯ ಕಳೆಯುವುದು ಅವರಿಗೆ ಹೆಚ್ಚಿನ ಸಂತೋಷ ನೀಡುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ.
56
ಸೇಡಿನ ಮನೋಭಾವ
ಒಂದು ವೇಳೆ ಪತ್ನಿ ಬೇರೆ ಪುರುಷರೊಂದಿಗೆ ಹೆಚ್ಚು ಆತ್ಮೀಯವಾಗಿ ಮಾತನಾಡುತ್ತಿದ್ದರೆ, ಅದು ಪತಿಗೆ ಇಷ್ಟವಾಗದಿರಬಹುದು. ಪತ್ನಿಯನ್ನು ತಿದ್ದಲು ಅಥವಾ ಅವಳಿಗೆ ಪಾಠ ಕಲಿಸಲು ಪತಿಯೂ ಕೂಡ ಪರಸ್ತ್ರೀಯರೊಂದಿಗೆ ಸ್ನೇಹ ಬೆಳೆಸಲು ಮುಂದಾಗುತ್ತಾನೆ.
66
ನಿರೀಕ್ಷೆಗಳು ಹುಸಿಯಾಗುವುದು
ಜೀವನ ಸಂಗಾತಿಯ ಆಲೋಚನೆಗಳು ಅಥವಾ ವರ್ತನೆಗಳು ಪುರುಷನ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದಾಗ ಮನಸ್ಸಿನಲ್ಲಿ ಅಸಮಾಧಾನ ಮೂಡುತ್ತದೆ. ಮನೆಯಲ್ಲಿ ನೆಮ್ಮದಿ ಸಿಗದಿದ್ದಾಗ, ಆ ನೆಮ್ಮದಿಯನ್ನು ಹುಡುಕುತ್ತಾ ಪುರುಷರ ಮನಸ್ಸು ಬೇರೆ ಮಹಿಳೆಯರತ್ತ ವಾಲುವುದುಂಟು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.