ಸುಧಾಮೂರ್ತಿ ತುಂಬಾ ಜನರ ಆದರ್ಶ. ಅವರ ಸರಳತೆ, ಪಟಾ ಪಟಾ ಅರಳು ಹುರಿದಂತೆ ಆಡುವ ಮುತ್ತಿನಂಥಾ ಮಾತುಗಳು, ಅವರ ಸೇವಾ ಮನೋಭಾವ, ಅವರಿರುವ ರೀತಿ ಬಹಳಷ್ಟು ಜನರಿಗೆ ಮಾದರಿಯಾಗಿವೆ. ಕೋಟಿ ಕೋಟಿ ಇದ್ದರೂ ಅನವಶ್ಯಕ ಖರ್ಚು ಮಾಡುವವರಲ್ಲ. ಐಶಾರಾಮಿತನ ಪ್ರದರ್ಶಿಸುವವರಲ್ಲ. ಹಣವಿದೆಯೆಂದು ಮೌಲ್ಯಗಳನ್ನು ಗಾಳಿಗೆ ತೂರುವುದಿಲ್ಲ.