ನಿಮ್ಮ ಸಣ್ಣ ಅಭಿಪ್ರಾಯ ಈ 6 ಸ್ಥಳಗಳಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ಈ ಸ್ಥಳಗಳಲ್ಲಿ ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ ಎಂದು ಚಾಣಾಕ್ಯ ಹೇಳಿದ್ದಾನೆ. ಅಷ್ಟಕ್ಕೂ ಯಾವ 6 ಸ್ಥಳ, ಏನಿದು?
ಚಾಣಾಕ್ಯ ನೀತಿಗಳು, ಮಾತುಗಳು ಹಲವರಿಗೆ ದಾರಿದೀಪವಾಗಿದೆ. ಇದೀಗ ಚಾಣಾಕ್ಯ ನೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಸಮಯ, ಸಂದರ್ಭ ಮುಖ್ಯ. ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದು ಉತ್ತಮ ಎಂದು ಚಾಣಾಕ್ಯ ಹೇಳಿದ್ದಾರೆ. ಅದರಲ್ಲೂ 6 ಸ್ಥಳಗಳಲ್ಲಿ ಸಣ್ಣದಾಗಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ ಮೌನವಾಗಿರುವುದು ಉತ್ತಮ. ಕಾರಣ ಇಲ್ಲಿ ಸಣ್ಣ ಅಭಿಪ್ರಾಯಗಳು ಅತೀ ದೊಡ್ಡ ಸಮಸ್ಯೆಗಾ ಕಾರಣಾಗಲಿದೆ ಎಂದು ಚಾಣಾಕ್ಯ ಹೇಳಿದ್ದಾನೆ.
25
ಮಧ್ಯಪ್ರವೇಶಿಸಿ ಅಭಿಪ್ರಾಯ ಹೇಳಬೇಡಿ
ಚಾಣಾಕ್ಯ ನೀತಿ ಪ್ರಕಾರ ಇಬ್ಬರು ಜಗಳವಾಡುತ್ತಿರುವಾಗ ಅವರ ಮಧ್ಯಪ್ರವೇಶಿಸಿ ನೀವು ಅಭಿಪ್ರಾಯ ವ್ಯಕ್ತಪಡಿಸುವುದು ಉತ್ತಮವಲ್ಲ. ಯಾವುದೇ ಪಕ್ಷವನ್ನು ಬೆಂಬಲಿಸುವುದು, ಅಥವಾ ಅಭಿಪ್ರಾಯ ಹೇಳಿದರೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಹಲವು ಬಾರಿ ಎರಡೂ ಪಕ್ಷಗಳು ನಿಮ್ಮ ವಿರುದ್ಧವೇ ತಿರುಗುಬೀಳಬಹುದು ಎಂದು ಚಾಣಾಕ್ಯ ಹೇಳಿದ್ದಾನೆ.
35
ಎರಡು ಸಂದರ್ಭದಲ್ಲಿ ನೀವು ಎಚ್ಚರವಿರಬೇಕು
ಜ್ಞಾನ ಕೊರತೆ: ವಿಷಗಳು ಗೊತ್ತಿಲ್ಲದಿದ್ದಾಗ, ಜ್ಞಾನದ ಕೊರತೆಯಿದ್ದಾಗ, ಸಂಪೂರ್ಣ ಮಾಹಿತಿ ಇಲ್ಲದಿಗ್ಗಾಗ, ಮಾತನಾಡಲು ಹೋಗಬಾರದು. ಅರ್ಧ ಮಾಹಿತಿಯೊಂದಿಗೆ ಮಾತನಾಡುವುದು ಸಮಸ್ಯೆ ಹೆಚ್ಚಿಸುತ್ತದೆ. ಪ್ರತಿಷ್ಠೆಗೂ ಸಮಸ್ಯೆಯಾಗಲಿದೆ.
ಕುಟುಂಬ ಗಲಾಟೆ : ಕುಟುಂಬ, ದೂರದ ಸಂಬಂಧಿಕರು ನಡುವಿನ ವಿವಾದಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಕುಟುಂಬದ ಜಗಳದ ನಡುವೆ ಅಭಿಪ್ರಾಯ ಹೇಳುವುದರಿಂದ ಸಂಬಂಧ ಹಾಳಾಗಲಿದೆ.ಶತ್ರುಗಳು ಹೆಚ್ಚಾಗಲಿದ್ದಾರೆ.
ಇತರ ವ್ಯಕ್ತಿಗಳ ವೈಯುಕ್ತಿಕ ವಿಚಾರದಲ್ಲಿ ಅನಗತ್ಯ ಮೂಗುತೂರಿಸಬಾರದು. ನಿಮ್ಮ ಸಲಹೆಯಿಂದ ಅವರ ಸಮಸ್ಯೆ ಬಗೆಹರಿಯದಿದ್ದರೆ, ಅಥವಾ ನಿಮ್ಮ ಸಲಹೆಯಿಂದ ಅವರ ಸಮಸ್ಯೆ ಹೆಚ್ಚಾದರೆ ಸಂಬಂಧ ಹಾಳಾಗಲಿದೆ. ನಿಮ್ಮ ಸಲಹೆ ಕೇಳದೇ ಇದ್ದಾಗ,ಅನಗತ್ಯವಾಗಿ ನೀವು ಸಲಹೆ ನೀಡಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದಕ್ಕಿಂತ ಮೌನವಾಗಿರುವುದು ಉತ್ತಮ ಎಂದು ಚಾಣಾಕ್ಯ ತನ್ನ ನೀತಿಯಲ್ಲಿ ಹೇಳಿದ್ದಾನೆ.
55
ಅಹಂಕಾರಿಗಳ ಮುಂದೆ
ಯಾವ ಸ್ಥಳದಲ್ಲಿ ನಿಮ್ಮ ಮಾತು ಕೇಳಲು ಬಯಸುವುದಿಲ್ಲವೋ ಅಲ್ಲಿ ಮಾತನಾಡಬಾರದು. ಅಹಂಕಾರಿಗಳ ಮುಂದೆ ಸಮಯ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಅಹಂಕಾರಿಗಳು ಅವರದ್ದೇ ವಾದ ಮುಂದಿಡುತ್ತಾರೆ. ಅವರ ಮುಂದೆ ನೀವು ಏನೇ ಹೇಳಿದರೂ ವ್ಯರ್ಥ. ಅವರು ನಿಮ್ಮ ಮಾತು ಕೇಳುವುದಿಲ್ಲ, ನಿಮ್ಮ ಮಾತಿಗೆ ಗೌರವವೂ ನೀಡುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.