Published : Oct 18, 2020, 05:11 PM ISTUpdated : Oct 18, 2020, 05:28 PM IST
ಜನರು ಹೆಚ್ಚಾಗಿ ಕೊತ್ತಂಬರಿ ಸೊಪ್ಪನ್ನು ಪಲ್ಯಗಳು, ಸಲಾಡ್ಗಳಲ್ಲಿ ಬಳಸುತ್ತಾರೆ. ಇದರ ಚಟ್ನಿ ಇದ್ದರೆ ಪಕೋಡ, ವಡೆಯಂತಹ ಕರಿದ ಪದಾರ್ಥಗಳ ರುಚಿ ದ್ವಿಗುಣಗೊಳ್ಳುತ್ತದೆ. ಕೊತ್ತಂಬರಿ ಸೊಪ್ಪು ಚಳಿಗಾಲದಲ್ಲಿ ರೋಗಗಳನ್ನು ಗುಣಪಡಿಸಲು ಮತ್ತು ಅನೇಕ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಕೆಲಸ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಇದು ಸಾಕಷ್ಟು ವಿಟಮಿನ್ ಎ ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ಗಳನ್ನು ಹೊಂದಿದೆ. ವಿಟಮಿನ್ ಎ ಮತ್ತು ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.
ಹಸಿರು ಕೊತ್ತಂಬರಿ ಸೊಫ್ಫು ಅಡುಗೆಯ ರುಚಿ ಹೆಚ್ಚುವುದು ಮಾತ್ರವಲ್ಲದೆ ಇತರ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿರುವ ಪೌಷ್ಟಿಕ ಅಂಶಗಳು ನಮ್ಮನ್ನು ಹೇಗೆ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ .
ಹಸಿರು ಕೊತ್ತಂಬರಿ ಸೊಫ್ಫು ಅಡುಗೆಯ ರುಚಿ ಹೆಚ್ಚುವುದು ಮಾತ್ರವಲ್ಲದೆ ಇತರ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿರುವ ಪೌಷ್ಟಿಕ ಅಂಶಗಳು ನಮ್ಮನ್ನು ಹೇಗೆ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ .
210
ನೀವು ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಕೊತ್ತಂಬರಿ ಸೊಪ್ಪು ತಿನ್ನಿರಿ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ನೀವು ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಕೊತ್ತಂಬರಿ ಸೊಪ್ಪು ತಿನ್ನಿರಿ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
310
ಮಜ್ಜಿಗೆಯೊಂದಿಗೆ ಬೆರೆಸಿದ ಕೊತ್ತಂಬರಿಯ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ಗೆ ಪರಿಹಾರ ಸಿಗುತ್ತದೆ. ಇದರ ಸೇವನೆಯು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ.
ಮಜ್ಜಿಗೆಯೊಂದಿಗೆ ಬೆರೆಸಿದ ಕೊತ್ತಂಬರಿಯ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ಗೆ ಪರಿಹಾರ ಸಿಗುತ್ತದೆ. ಇದರ ಸೇವನೆಯು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ.
410
ಚಳಿಗಾಲದಲ್ಲಿ ಆಹಾರದ ಪ್ರಮಾಣ ಹೆಚ್ಚಾದಾಗ ಅತಿಸಾರದ ಸಮಸ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ, ಕೊತ್ತಂಬರಿ ಚಟ್ನಿ ಮತ್ತು ಸಲಾಡ್ ಹೊಟ್ಟೆಗೆ ಪರಿಹಾರ ನೀಡುತ್ತದೆ.
ಚಳಿಗಾಲದಲ್ಲಿ ಆಹಾರದ ಪ್ರಮಾಣ ಹೆಚ್ಚಾದಾಗ ಅತಿಸಾರದ ಸಮಸ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ, ಕೊತ್ತಂಬರಿ ಚಟ್ನಿ ಮತ್ತು ಸಲಾಡ್ ಹೊಟ್ಟೆಗೆ ಪರಿಹಾರ ನೀಡುತ್ತದೆ.
510
ಇದು ಎ ಮತ್ತು ಸಿ ಜೀವಸತ್ವಗಳ ಮುಖ್ಯ ಮೂಲವಾಗಿದೆ. ಇವು ನಮ್ಮ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸುತ್ತವೆ. ಇದರ ನಿಯಮಿತ ಸೇವನೆಯು ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ.
ಇದು ಎ ಮತ್ತು ಸಿ ಜೀವಸತ್ವಗಳ ಮುಖ್ಯ ಮೂಲವಾಗಿದೆ. ಇವು ನಮ್ಮ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸುತ್ತವೆ. ಇದರ ನಿಯಮಿತ ಸೇವನೆಯು ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ.
610
ಕೊತ್ತಂಬರಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಸಂಧಿವಾತ ರೋಗಿಗಳಿಗೆ ಪ್ರಯೋಜನ ಸಿಗುತ್ತದೆ. ಸಂಧಿವಾತ ಇರುವವರು ಒಣ ಕೊತ್ತಂಬರಿ ಪುಡಿಯನ್ನು ನಿರಂತರವಾಗಿ ಬಳಸಬೇಕು.
ಕೊತ್ತಂಬರಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಸಂಧಿವಾತ ರೋಗಿಗಳಿಗೆ ಪ್ರಯೋಜನ ಸಿಗುತ್ತದೆ. ಸಂಧಿವಾತ ಇರುವವರು ಒಣ ಕೊತ್ತಂಬರಿ ಪುಡಿಯನ್ನು ನಿರಂತರವಾಗಿ ಬಳಸಬೇಕು.
710
ಕೊತ್ತಂಬರಿಯಲ್ಲಿರುವ ಅಂಶಗಳು ದೇಹದಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಅದನ್ನು ನಿಯಂತ್ರಣದಲ್ಲಿಡುತ್ತದೆ. ಸಂಶೋಧನೆಯ ಪ್ರಕಾರ, ಯಾರಾದರೂ ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಕೊತ್ತಂಬರಿ ಬೀಜವನ್ನು ಕುದಿಸಿದ ನೀರನ್ನು ಕುಡಿಯಬೇಕು.
ಕೊತ್ತಂಬರಿಯಲ್ಲಿರುವ ಅಂಶಗಳು ದೇಹದಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಅದನ್ನು ನಿಯಂತ್ರಣದಲ್ಲಿಡುತ್ತದೆ. ಸಂಶೋಧನೆಯ ಪ್ರಕಾರ, ಯಾರಾದರೂ ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಕೊತ್ತಂಬರಿ ಬೀಜವನ್ನು ಕುದಿಸಿದ ನೀರನ್ನು ಕುಡಿಯಬೇಕು.
810
ಮಧುಮೇಹ ರೋಗಿಗಳಿಗೆ ಕೊತ್ತಂಬರಿ ತುಂಬಾ ಪ್ರಯೋಜನಕಾರಿ. ಇದು ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಮಧುಮೇಹ ರೋಗಿಗಳಿಗೆ ಕೊತ್ತಂಬರಿ ತುಂಬಾ ಪ್ರಯೋಜನಕಾರಿ. ಇದು ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
910
ತೂಕ ಹೆಚ್ಚುತ್ತಿದ್ದರೆ ಕೊತ್ತಂಬರಿ ಬೀಜವನ್ನು ಬಳಸಿ. ಮೂರು ಚಮಚ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾದಾಗ, ಅದನ್ನು ಫಿಲ್ಟರ್ ಮಾಡಿ ಮತ್ತು ಈ ನೀರನ್ನು ಪ್ರತಿದಿನ ಎರಡು ಬಾರಿ ಕುಡಿಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ತೂಕದಲ್ಲಿ ವ್ಯತ್ಯಾಸವನ್ನು ನೀವು ನೋಡುತ್ತೀರಿ.
ತೂಕ ಹೆಚ್ಚುತ್ತಿದ್ದರೆ ಕೊತ್ತಂಬರಿ ಬೀಜವನ್ನು ಬಳಸಿ. ಮೂರು ಚಮಚ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾದಾಗ, ಅದನ್ನು ಫಿಲ್ಟರ್ ಮಾಡಿ ಮತ್ತು ಈ ನೀರನ್ನು ಪ್ರತಿದಿನ ಎರಡು ಬಾರಿ ಕುಡಿಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ತೂಕದಲ್ಲಿ ವ್ಯತ್ಯಾಸವನ್ನು ನೀವು ನೋಡುತ್ತೀರಿ.
1010
ಕಣ್ಣು ನೋವು ಕಾಣಿಸಿಕೊಂಡರೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕಣ್ಣಿಗೆ ಹಾಕಿ. ಇದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
ಕಣ್ಣು ನೋವು ಕಾಣಿಸಿಕೊಂಡರೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕಣ್ಣಿಗೆ ಹಾಕಿ. ಇದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.