ಕೊತ್ತಂಬರಿ ಸೊಪ್ಪಿನಿಂದಲೂ ಫಿಟ್ನೆಸ್ ಕಾಪಾಡಬಹುದು. ಹೇಗೆ..? ಇಲ್ಲಿ ನೋಡಿ

First Published Oct 18, 2020, 5:11 PM IST

ಜನರು ಹೆಚ್ಚಾಗಿ ಕೊತ್ತಂಬರಿ ಸೊಪ್ಪನ್ನು ಪಲ್ಯಗಳು, ಸಲಾಡ್ಗಳಲ್ಲಿ ಬಳಸುತ್ತಾರೆ. ಇದರ  ಚಟ್ನಿ ಇದ್ದರೆ ಪಕೋಡ, ವಡೆಯಂತಹ ಕರಿದ ಪದಾರ್ಥಗಳ ರುಚಿ ದ್ವಿಗುಣಗೊಳ್ಳುತ್ತದೆ. ಕೊತ್ತಂಬರಿ ಸೊಪ್ಪು ಚಳಿಗಾಲದಲ್ಲಿ ರೋಗಗಳನ್ನು ಗುಣಪಡಿಸಲು ಮತ್ತು ಅನೇಕ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಕೆಲಸ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಇದು ಸಾಕಷ್ಟು ವಿಟಮಿನ್ ಎ ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ಗಳನ್ನು ಹೊಂದಿದೆ. ವಿಟಮಿನ್ ಎ ಮತ್ತು ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. 

ಹಸಿರು ಕೊತ್ತಂಬರಿ ಸೊಫ್ಫು ಅಡುಗೆಯ ರುಚಿ ಹೆಚ್ಚುವುದು ಮಾತ್ರವಲ್ಲದೆ ಇತರ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿರುವ ಪೌಷ್ಟಿಕ ಅಂಶಗಳು ನಮ್ಮನ್ನು ಹೇಗೆ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ .
undefined
ನೀವು ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಕೊತ್ತಂಬರಿ ಸೊಪ್ಪು ತಿನ್ನಿರಿ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
undefined
ಮಜ್ಜಿಗೆಯೊಂದಿಗೆ ಬೆರೆಸಿದ ಕೊತ್ತಂಬರಿಯ ತಾಜಾ ಎಲೆಗಳನ್ನು ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ಗೆ ಪರಿಹಾರ ಸಿಗುತ್ತದೆ. ಇದರ ಸೇವನೆಯು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ.
undefined
ಚಳಿಗಾಲದಲ್ಲಿ ಆಹಾರದ ಪ್ರಮಾಣ ಹೆಚ್ಚಾದಾಗ ಅತಿಸಾರದ ಸಮಸ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ, ಕೊತ್ತಂಬರಿ ಚಟ್ನಿ ಮತ್ತು ಸಲಾಡ್ ಹೊಟ್ಟೆಗೆ ಪರಿಹಾರ ನೀಡುತ್ತದೆ.
undefined
ಇದು ಎ ಮತ್ತು ಸಿ ಜೀವಸತ್ವಗಳ ಮುಖ್ಯ ಮೂಲವಾಗಿದೆ. ಇವು ನಮ್ಮ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸುತ್ತವೆ. ಇದರ ನಿಯಮಿತ ಸೇವನೆಯು ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ.
undefined
ಕೊತ್ತಂಬರಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಸಂಧಿವಾತ ರೋಗಿಗಳಿಗೆ ಪ್ರಯೋಜನ ಸಿಗುತ್ತದೆ. ಸಂಧಿವಾತ ಇರುವವರು ಒಣ ಕೊತ್ತಂಬರಿ ಪುಡಿಯನ್ನು ನಿರಂತರವಾಗಿ ಬಳಸಬೇಕು.
undefined
ಕೊತ್ತಂಬರಿಯಲ್ಲಿರುವ ಅಂಶಗಳು ದೇಹದಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಅದನ್ನು ನಿಯಂತ್ರಣದಲ್ಲಿಡುತ್ತದೆ. ಸಂಶೋಧನೆಯ ಪ್ರಕಾರ, ಯಾರಾದರೂ ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಕೊತ್ತಂಬರಿ ಬೀಜವನ್ನು ಕುದಿಸಿದ ನೀರನ್ನು ಕುಡಿಯಬೇಕು.
undefined
ಮಧುಮೇಹ ರೋಗಿಗಳಿಗೆ ಕೊತ್ತಂಬರಿ ತುಂಬಾ ಪ್ರಯೋಜನಕಾರಿ. ಇದು ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
undefined
ತೂಕ ಹೆಚ್ಚುತ್ತಿದ್ದರೆ ಕೊತ್ತಂಬರಿ ಬೀಜವನ್ನು ಬಳಸಿ. ಮೂರು ಚಮಚ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾದಾಗ, ಅದನ್ನು ಫಿಲ್ಟರ್ ಮಾಡಿ ಮತ್ತು ಈ ನೀರನ್ನು ಪ್ರತಿದಿನ ಎರಡು ಬಾರಿ ಕುಡಿಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ತೂಕದಲ್ಲಿ ವ್ಯತ್ಯಾಸವನ್ನು ನೀವು ನೋಡುತ್ತೀರಿ.
undefined
ಕಣ್ಣು ನೋವು ಕಾಣಿಸಿಕೊಂಡರೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕಣ್ಣಿಗೆ ಹಾಕಿ. ಇದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
undefined
click me!