ಈ ದಶ ಸೂತ್ರಗಳು ಹೃದಯಾಘಾತದ ಅಪಾಯವನ್ನು ದೂರ ಮಾಡುತ್ತೆ

First Published Sep 7, 2021, 7:17 PM IST

ಕೊರೋನಾ ವಿಶ್ವದಾದ್ಯಂತ ಜನರನ್ನು ಇನ್ನೂ ಕಾಡುತ್ತಿದೆ. ಇದರಿಂದ ಹೆಚ್ಚಿನ ಜನ ಮನೆಯಲ್ಲಿ ಇರುವಂತಾಯಿತು, ಸರಿಯಾದ ವ್ಯಾಯಮ ಇಲ್ಲದೆಯೋ ಅಥವಾ ಹೆಚ್ಚು ಒತ್ತಡದಿಂದಲೋ ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕಣ್ಣ ಮುಂದೆ ಎಷ್ಟೋ ಜನ, ಅದರಲ್ಲೂ ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ. ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾದಂತೆ, ಆಯುರ್ವೇದ ತಜ್ಞರು ರೋಗಗಳನ್ನು ದೂರವಿಡಲು ಸಲಹೆಗಳನ್ನು ಸೂಚಿಸಿದ್ದಾರೆ.

ತಜ್ಞರು ಉತ್ತಮ ಆರೋಗ್ಯಕ್ಕಾಗಿ ನೀಡಿದ ಸಲಹೆಗಳನ್ನು ತಪ್ಪದೆ ಪಾಲಿಸಿ... 
ಸೂರ್ಯೋದಯಕ್ಕೆ ಮುನ್ನ ಎದ್ದೇಳಿ : 
ಸೂರ್ಯೋದಯಕ್ಕೆ ಎರಡು ಗಂಟೆಗಳ ಮೊದಲು ಎದ್ದೇಳಬೇಕು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ಬೇಗನೆ ಎದ್ದೇಳುವುದು ಹೈಡ್ರೇಟ್ ಆಗಿರಲು ಮತ್ತು ಆಮ್ಲಜನಕವನ್ನು ಹೊಂದಲು ಉತ್ತಮ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಉತ್ತಮ ಆರೋಗ್ಯ ಪಡೆಯಲು ಸಹಾಯವಾಗುತ್ತದೆ. 

ಎದ್ದ ತಕ್ಷಣ ನೀರನ್ನು ಕುಡಿಯುವುದು
ಬೆಳಗ್ಗೆ ಎದ್ದ ನಂತರ ಎರಡು ಲೋಟ ಬೆಚ್ಚಗಿನ ನೀರು ಕುಡಿಯಲು ಆಯುರ್ವೇದ ತಜ್ಞರುಸೂಚಿಸುತ್ತಾರೆ. ಇದರಿಂದ ದೇಹದಲ್ಲಿ ವಿಷವು ದೇಹದಿಂದ ಹೊರ ಹೋಗಲು ಸಾಧ್ಯವಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ದೇಹವು ಹೈಡ್ರೇಟ್ ಆಗಲು ಸಹಾಯ ಮಾಡುತ್ತದೆ. 

ಯೋಗ ಮತ್ತು ಧ್ಯಾನ ಅಭ್ಯಾಸ  
ಎಂಡಾರ್ಫಿನ್ ಗಳು ಮತ್ತು ಸೆರೊಟೋನಿನ್-ಮನಸ್ಥಿತಿಯನ್ನು ಉತ್ತೇಜಿಸುವ ಮತ್ತು ಒತ್ತಡ ಕಡಿಮೆ ಮಾಡುವ ಹಾರ್ಮೋನುಗಳ ಉತ್ಪತ್ತಿಯಾಗಲು ಪ್ರತಿದಿನ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ. ದೀರ್ಘಕಾಲದ ಒತ್ತಡ ಮತ್ತು ಖಿನ್ನತೆಯು ಹೃದ್ರೋಗಗಳಿಗೆ ಪ್ರಮುಖ ಕಾರಣ. ಇವುಗಳಿಂದ ಹೊರಬರಲು ಯೋಗ ಸಹಾಯ ಮಾಡುತ್ತೆ. 

ಸನ್ ಬಾತ್
ಪೂರ್ಣ ದೇಹದ ತೈಲ ಮಸಾಜ್ ನಂತರ ಸೂರ್ಯಸ್ನಾನವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ದುಗ್ಧರಸ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ, ರಕ್ತವನ್ನು ನಿರ್ವಿಷಗೊಳಿಸುತ್ತದೆ, ದೇಹದಲ್ಲಿ ಶುಷ್ಕತೆಯನ್ನು ತೆಗೆದುಹಾಕುತ್ತದೆ ಮತ್ತು ಕೀಲು ಬಿಗಿತವನ್ನು ಕಡಿಮೆ ಮಾಡುತ್ತದೆ.

ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ 
ಬೆಳಿಗ್ಗೆ 7.00 ರೊಳಗೆ ಉಪಾಹಾರ ಸೇವಿಸಿ. ಮಧ್ಯಾಹ್ನ 12-12.30 ರೊಳಗೆ ಊಟ ಮಾಡಿ. ಊಟದ ನಡುವೆ 4-5 ಗಂಟೆಗಳ ಅಂತರ ಇರಿಸಿ, ಇದು ಜೀರ್ಣಕ್ರಿಯೆಗೆ ಸಾಕಾಗುತ್ತದೆ. ಇದರ ಜೊತೆಗೆ ಸಾಕಷ್ಟು ನೀರು ಕುಡಿಯಬೇಕು ಮತ್ತು ಊಟದ ನಡುವೆ ನಟ್ಸ್ ತಿನ್ನಬಹುದು. ಉತ್ತಮ ನಿದ್ರೆಗಾಗಿ ಮಲಗುವ ಕನಿಷ್ಠ 2 ಗಂಟೆಗಳ ಮೊದಲು ರಾತ್ರಿಯೂಟವನ್ನು ಮುಗಿಸಬೇಕು. 2 ಗಂಟೆಗಳು ಜೀರ್ಣಕ್ರಿಯೆಗೆ ಸಹಕಾರಿ.
 

ಮಧ್ಯಾಹ್ನದ ನಿದ್ರೆ ಮಾಡಬೇಡಿ 
ಮಧ್ಯಾಹ್ನದ ನಿದ್ರೆ ಮಾಡದಿರಲು ಪ್ರಯತ್ನಿಸಿ , ಈ ಅಭ್ಯಾಸವನ್ನು ಬಿಟ್ಟರೆ ಉತ್ತಮ. ಮಧ್ಯಾಹ್ನದ ನಿದ್ರೆಯು ಆಯಾಸ ಮತ್ತು ಆಲಸ್ಯವನ್ನು ಹೆಚ್ಚಿಸಬಹುದು ಮತ್ತು  ನಿದ್ರೆಯ ಚಕ್ರವನ್ನು ತಡೆಯಬಹುದು. ವೃದ್ಧರು ಬಯಸಿದರೆ ಯೋಗನಿದ್ರೆ ಮಾಡಬಹುದು.

ಅರಿಶಿನ ಹಾಲು 
ಮಲಗುವ ಮೊದಲು ಅರಿಶಿನ ಬೆರೆಸಿದ ಬೆಚ್ಚಗಿನ ಹಾಲನ್ನು ಸೇವಿಸಿ.  ಅರಿಶಿನವು ಸೋಂಕುಗಳನ್ನು ತಡೆಗಟ್ಟುವ ಅತ್ಯುತ್ತಮ ಔಷಧಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಅರಿಸಿನ ಬೆರೆಸಿದ ಹಾಲು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ಚೆನ್ನಾಗಿ ನಿದ್ರೆ ಬರಲು ಸಹಾಯ ಮಾಡುತ್ತದೆ. 
 

ಬೇಸಿಗೆ ಮತ್ತು ಚಳಿಗಾಲದಲ್ಲಿ ಏನು ಮಾಡಬೇಕು?
ಬೇಸಿಗೆಯ ಸಮಯದಲ್ಲಿ, ಭಾರಿ ತಾಲೀಮುಗಳನ್ನು ತಪ್ಪಿಸಿ ಮತ್ತು ಬದಲಿಗೆ ಯೋಗ ಮತ್ತು ಪ್ರಾಣಾಯಾಮಗಳು ಅಥವಾ ಸೌಮ್ಯ ರೀತಿಯ ವ್ಯಾಯಾಮ ಮಾಡಿ. ಏಕೆಂದರೆ ಪರಿಸರದಲ್ಲಿನ ಶಾಖ ನಿಮ್ಮ ಶಕ್ತಿಯನ್ನು ಸೆಳೆಯುತ್ತದೆ. ಚಳಿಗಾಲ ಮತ್ತು ಇತರ ಋತುಗಳಲ್ಲಿ, ಹಾರ್ಡ್ ಕೋರ್ ತಾಲೀಮುಗಳನ್ನು ಮಾಡಬಹುದು.

ಧ್ಯಾನ
ಸದಾ ಕ್ರಿಯಾಶೀಲರಾಗಿರಲು ಬಯಸಿದರೆ ಧ್ಯಾನ ಅತ್ಯಗತ್ಯ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಒಬ್ಬರಿಗೆ ಶಾಂತ ಮನಸ್ಸು ಬೇಕು,  ಹೆಚ್ಚಿನ ಸ್ಪಷ್ಟತೆ, ತೀಕ್ಷ್ಣವಾದ ಅವಲೋಕನ ಮತ್ತು ಸರಿಯಾದ ಅಭಿವ್ಯಕ್ತಿಯನ್ನು ಹೊಂದಿರಬೇಕು. ಧ್ಯಾನದಿಂದ ಮೂರನ್ನೂ ಸುಲಭವಾಗಿ ಸಾಧಿಸಬಹುದು. 

ತಾಜಾ ಆಹಾರವನ್ನು ಸೇವಿಸಿ
ಆಯುರ್ವೇದ ತಜ್ಞರು ಹೊಸದಾಗಿ ಬೇಯಿಸಿದ ಅಂದರೆ ತಾಜಾ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಲು ಹೇಳುತ್ತಾರೆ. ತಾಜಾ ಆಹಾರ ಸೇವನೆಯಿಂದ, ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಉತ್ತಮ ಚೈತನ್ಯ ಉಂಟಾಗುತ್ತದೆ. ಪ್ರಿಸರ್ವೇಟಿವ್ ಆಹಾರಗಳು ದೇಹಕ್ಕೆ ಹಾನಿಕಾರಕವಾಗಿವೆ. 

click me!