ಖಿನ್ನತೆ ನಿವಾರಿಸುವ ಕೇಸರಿ, ದುಬಾರಿ ಮಸಾಲೆಯಿಂದ ಆರೋಗ್ಯಕ್ಕಿದೆ ಹಲವು ಲಾಭ

Published : Jul 23, 2023, 10:48 AM IST

ಕೇಸರಿ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಆದರೆ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಕಾರಿಯಾಗಿದೆ. ಕೇಸರಿ ಸೇವನೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

PREV
18
ಖಿನ್ನತೆ ನಿವಾರಿಸುವ ಕೇಸರಿ, ದುಬಾರಿ ಮಸಾಲೆಯಿಂದ ಆರೋಗ್ಯಕ್ಕಿದೆ ಹಲವು ಲಾಭ

ಆರ್ಯುವೇದದ ಪ್ರಕಾರ, ಗಿಡಮೂಲಿಕೆಗಳು, ಮಸಾಲೆಗಳು ಅತ್ಯುತ್ತಮ ಔಷಧಿಗಳಾಗಿವೆ. ಎಲ್ಲಾ ಗಿಡಮೂಲಿಕೆಗಳು, ಮಸಾಲೆಗಳು ಒಂದಲ್ಲಾ ಒಂದು ರೀತಿಯ ಆರೋಗ್ಯ ಪ್ರಯೋಜನವನ್ನು ಹೊಂದಿರುತ್ತವೆ. ಅದರಲ್ಲೊಂದು ಕೇಸರಿ. ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿರುವ ಕೇಸರಿ ಸೇವನೆಯಿಂದ ಆರೋಗ್ಯಕ್ಕಾಗೋ ಪ್ರಯೋಜನವೇನು ತಿಳಿಯೋಣ.

28

ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ
ಕೇಸರಿಯು ಕ್ರೋಸಿನ್ ಎಂಬ ಗಾಢವಾದ ಕಿತ್ತಳೆ, ನೀರಿನಲ್ಲಿ ಕರಗುವ ಕ್ಯಾರೋಟಿನ್‌ನ್ನು ಹೊಂದಿರುತ್ತದೆ. ಕ್ರೋಸಿನ್ ವಿವಿಧ ರೀತಿಯ ಮಾನವ ಕ್ಯಾನ್ಸರ್ ಕೋಶಗಳು, ಲ್ಯುಕೇಮಿಯಾ, ಅಂಡಾಶಯದ ಕಾರ್ಸಿನೋಮ, ಕೊಲೊನ್ ಅಡೆನೊಕಾರ್ಸಿನೋಮ ಮತ್ತು ಮೃದು ಅಂಗಾಂಶದ ಸಾರ್ಕೋಮಾದಲ್ಲಿ ಅಪೊಪ್ಟೋಸಿಸ್‌ನ್ನು ಪ್ರಚೋದಿಸುತ್ತದೆ ಎಂದು ಕಂಡುಬಂದಿದೆ. ಕೇಸರಿ ಸಾರವನ್ನು ಅಧ್ಯಯನ ಮಾಡುತ್ತಿರುವ ಮೆಕ್ಸಿಕೋದ ಸಂಶೋಧಕರು ಕೇಸರಿ ಮತ್ತು ಅದರ ಸಕ್ರಿಯ ಘಟಕಗಳು ಮಾನವನ ಮಾರಣಾಂತಿಕ ಕೋಶಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ ಎಂದು ಕಂಡುಹಿಡಿದಿದ್ದಾ

38

ನೆನಪಿನ ಶಕ್ತಿ
ಇತ್ತೀಚಿನ ಅಧ್ಯಯನಗಳು ಕೇಸರಿ, ನಿರ್ದಿಷ್ಟವಾಗಿ ಅದರ ಕ್ರೋಸಿನ್, ವಯಸ್ಸಿಗೆ ಸಂಬಂಧಿಸಿದ ಮಾನಸಿಕ ದುರ್ಬಲತೆಯ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ ಎಂದು ತೋರಿಸಿವೆ. ಜಪಾನ್‌ನಲ್ಲಿ, ಕೇಸರಿಯನ್ನು ಪಾರ್ಕಿನ್ಸನ್ ಕಾಯಿಲೆ, ಜ್ಞಾಪಕ ಶಕ್ತಿ ನಷ್ಟ ಮತ್ತು ಉರಿಯೂತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

48

ಎನರ್ಜಿಟಿಕ್ ಆಗಿರಿಸುತ್ತದೆ
ಕಡಿಮೆ ಕಾಮಾಸಕ್ತಿಯಲ್ಲಿ ಕೇಸರಿ ಲೈಂಗಿಕ ಪ್ರಚೋದಕವಾಗಿ ಸಹಾಯ ಮಾಡುತ್ತದೆ. ಮಲಗುವ ಸಮಯದಲ್ಲಿ ಒಂದು ಲೋಟ ಹಾಲಿನಲ್ಲಿ ಒಂದು ಚಿಟಿಕೆ ಪ್ರಮಾಣದಲ್ಲಿ ಸೇವಿಸಬಹುದು.

58

ಕೂದಲಿನ ಬೆಳವಣಿಗೆಗೆ ಉತ್ತಮ
ಕೇಸರಿ ಮತ್ತು ಹಾಲಿನಲ್ಲಿ ಬೆರೆಸಿದ ಕೇಸರಿಯು ಕೂದಲಿನ ಬೆಳವಣಿಗೆಯನ್ನು ಪ್ರಚೋದಿಸಲು ಪರಿಣಾಮಕಾರಿಯಾಗಿದೆ.

68

ರೋಗ ನಿರೋಧಕ ಶಕ್ತಿಗೆ ಒಳ್ಳೆಯದು
ಕೇಸರಿ, ಕ್ಯಾರೊಟಿನಾಯ್ಡ್ಗಳಿಂದ ಸಮೃದ್ಧವಾಗಿದೆ. ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಕೇಸರಿಯು ರಿಬೋಫ್ಲೇವಿನ್ ಮತ್ತು ವಿಟಮಿನ್ ಬಿ ಯ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಇದು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

78

ಖಿನ್ನತೆ ನಿವಾರಿಸುತ್ತದೆ
ಈ ಮಸಾಲೆಯು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದು ಖಿನ್ನತೆ ನಿವಾರಕವಾಗಿ ಕಾರ್ಯನಿರ್ವಹಿಸಲು ಸೂಕ್ತವೆಂದು ಪರಿಗಣಿಸಲಾಗಿದೆ. ಕೇಸರಿ ಏಕೆ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತೀರ್ಮಾನಿಸಿದ ವಿವಿಧ ಅಧ್ಯಯನಗಳಿವೆ.
 

88

ಶೀತದ ವಿರುದ್ಧ ರಕ್ಷಣೆ
ಕೇಸರಿಯು ಉತ್ತೇಜಕ ಟಾನಿಕ್ ಮತ್ತು ಶೀತ ಮತ್ತು ಜ್ವರಕ್ಕೆ ಚಿಕಿತ್ಸೆ ನೀಡಲು ಬಹಳ ಪರಿಣಾಮಕಾರಿಯಾಗಿದೆ; ಕುಂಕುಮವನ್ನು ಹಾಲಿನಲ್ಲಿ ಬೆರೆಸಿ ಹಣೆಯ ಮೇಲೆ ಹಚ್ಚಿದರೆ ಶೀತ ಶಮನವಾಗುತ್ತದೆ.

Read more Photos on
click me!

Recommended Stories