ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದ ನಟಿ:
ಶ್ರೀಲೀಲಾ ಅವರು ಮಹೇಶ್ ಪರವಾಗಿ ಮಾತನಾಡುತ್ತಾ, "ಮಹೇಶ್ ತುಂಬಾ ಒಳ್ಳೆಯ ವ್ಯಕ್ತಿ. ನಾವು ಹಲವು ದೃಶ್ಯಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ಸತ್ಯ ತಿಳಿಯದೆ ಯಾರೂ ಕೂಡ ಸುಳ್ಳು ಕಥೆಗಳನ್ನು ಕಟ್ಟಿ ಹಬ್ಬಿಸಬಾರದು. ಚಿತ್ರರಂಗದಲ್ಲಿ ಇಂತಹ ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಸಹಜ, ಆದರೆ ಅದನ್ನು ದೊಡ್ಡದು ಮಾಡುವುದು ಸರಿಯಲ್ಲ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ಕ್ಯಾಮೆರಾ ಕಣ್ಣಿಗೆ ಒಂದ ರೀತಿ ಕಂಡ ಸನ್ನಿವೇಶದ ಹಿಂದೆ ಬೇರೆಯದೇ ಕಥೆಯಿತ್ತು ಎಂಬುದು ಈಗ ಬಹಿರಂಗವಾಗಿದೆ. ಶ್ರೀಲೀಲಾ ನೀಡಿದ ಈ ಸ್ಪಷ್ಟನೆಯಿಂದ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಶ್ರೀಲೀಲಾ ಕೈಯಲ್ಲಿ ಹಲವು ದೊಡ್ಡ ಸಿನಿಮಾಗಳಿದ್ದು, ಅವರು ತಮ್ಮ ವೃತ್ತಿಜೀವನದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.