OTT ಪ್ಲಾಟ್ಫಾರ್ಮ್ಗಳು ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್ಗಳಿಗೆ ದೊಡ್ಡ ವೇದಿಕೆಯಾಗಿವೆ. ಪ್ರತಿವಾರ ಹತ್ತಾರು ಸಿನಿಮಾಗಳು, ಸಿರೀಸ್ಗಳು ಬಿಡುಗಡೆಯಾದರೂ ಕೆಲವೇ ಕೆಲವು ಕಂಟೆಂಟ್ಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ.
ದೇಶವನ್ನೇ ಬೆಚ್ಚಿಬೀಳಿಸಿದ್ದ ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಿಸಿರುವ ಈ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್ಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖ್ಯಾತ ನಟಿ ಸೋನಾಲಿ ಬೇಂದ್ರೆ ಹಾಗೂ ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿರೀಸ್ ಜೂನ್ 12, 2026ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿ ಹಲವು ದಿನಗಳಾದರೂ ಇದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಮೊದಲ ಎಪಿಸೋಡ್ನಿಂದ ಕೊನೆಯ ಎಪಿಸೋಡ್ವರೆಗೂ ಪ್ರೇಕ್ಷಕರಿಗೆ ಗೂಸ್ಬಂಪ್ಸ್ ನೀಡುವಂತಿದೆ.
25
ಜಾಗತಿಕ ಟ್ರೆಂಡಿಂಗ್ನಲ್ಲಿ ನಂಬರ್ 1
ಈ ಸಿರೀಸ್ನ ವಿಶೇಷತೆ ಎಂದರೆ ಇದು ಸಂಪೂರ್ಣ ಕಾಲ್ಪನಿಕ ಕಥೆಯಲ್ಲ. ದೇಶವನ್ನು ಬೆಚ್ಚಿಬೀಳಿಸಿದ್ದ ನೈಜ ಅಪರಾಧ ಪ್ರಕರಣವೊಂದನ್ನು ಆಧರಿಸಿ ಈ ಕಥೆಯನ್ನು ಕಟ್ಟಿಕೊಡಲಾಗಿದೆ. IMDbಯಲ್ಲಿ 10ಕ್ಕೆ 7.8 ರೇಟಿಂಗ್ ಪಡೆದುಕೊಂಡಿರುವ ಈ ಎಂಟು ಎಪಿಸೋಡ್ಗಳ ಸಿರೀಸ್ ಹೆಸರು 'ರಾಖ್'. ವರದಿಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಭಾರತದಿಂದ ಬಂದ ಅತ್ಯಂತ ಯಶಸ್ವಿ ಒರಿಜಿನಲ್ ಸಿರೀಸ್ಗಳಲ್ಲಿ ಇದೂ ಒಂದಾಗಿದೆ. ಬರೋಬ್ಬರಿ 23 ದೇಶಗಳಲ್ಲಿ ನಂಬರ್ 1 ಸ್ಥಾನಕ್ಕೇರಿರುವ 'ರಾಖ್', 60 ದೇಶಗಳ ಟಾಪ್ 10 ಪಟ್ಟಿಯಲ್ಲೂ ಸ್ಥಾನ ಪಡೆದಿದೆ.
35
ನೈಜ ಘಟನೆಯ ಸುತ್ತ ಹೆಣೆದ ಕಥೆ
ಜೂನ್ 12ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಸಿರೀಸ್ನಲ್ಲಿ ನೈತಿಕತೆ, ಅಪರಾಧ ಮತ್ತು ನ್ಯಾಯದ ನಡುವಿನ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ತೆರೆದಿಡಲಾಗಿದೆ. ಕಥೆ ಮುಂದುವರಿದಂತೆ ಪ್ರೇಕ್ಷಕರ ಕುತೂಹಲ ಹೆಚ್ಚುತ್ತಲೇ ಹೋಗುತ್ತದೆ. ಅಲಿ ಫಜಲ್ ತಮ್ಮ ವೃತ್ತಿಜೀವನದ ಅತ್ಯಂತ ವಿಭಿನ್ನ ಪಾತ್ರಗಳಲ್ಲಿ ಒಂದನ್ನು ಇಲ್ಲಿ ನಿರ್ವಹಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ತಾಯಿಯ ಪಾತ್ರದಲ್ಲಿ ಸೋನಾಲಿ ಬೇಂದ್ರೆ ಕೂಡ ಗಮನ ಸೆಳೆಯುತ್ತಾರೆ. ಆಮಿರ್ ಬಶೀರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಆಕಾಶ್ ಮಖಿಜಾ ಮತ್ತು ರಾಮದೀಪ್ ಯಾದವ್ ಪ್ರಮುಖ ಪ್ರತಿನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿರೀಸ್ನ ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
'ರಾಖ್' ವೆಬ್ ಸಿರೀಸ್ 1978ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ರಂಗಾ–ಬಿಲ್ಲಾ ಪ್ರಕರಣವನ್ನು ಆಧರಿಸಿದೆ. ರಂಗಾ ಮತ್ತು ಬಿಲ್ಲಾ ಕಳ್ಳತನ, ಅಪಹರಣ ಹಾಗೂ ಕೊಲೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಬಳಿಕ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿತ್ತು. ನಿರ್ದೇಶಕ ಪ್ರೋಸಿತ್ ರಾಯ್ ಈ ನೈಜ ಘಟನೆಯನ್ನು 'ರಾಖ್' ಮೂಲಕ ತೆರೆಮೇಲೆ ತಂದಿದ್ದಾರೆ. ಸಿರೀಸ್ನಲ್ಲಿ ಸೋನಾಲಿ ಬೇಂದ್ರೆ, ಅಲಿ ಫಜಲ್, ಆಮಿರ್ ಬಶೀರ್, ಆಕಾಶ್ ಮಖಿಜಾ, ರಾಮದೀಪ್ ಯಾದವ್, ದಿವ್ಯ ಶರ್ಮಾ, ವಿವಾನ್ ಶರ್ಮಾ, ಅಂಶುಲ್ ಚೌಹಾಣ್, ರಾಕೇಶ್ ಬೇಡಿ ಮತ್ತು ದಿವ್ಯೇಂದು ಭಟ್ಟಾಚಾರ್ಯ ಸೇರಿದಂತೆ ಹಲವರು ನಟಿಸಿದ್ದಾರೆ.
55
ದೇಶವನ್ನೇ ಬೆಚ್ಚಿಬೀಳಿಸಿದ್ದ ಆ ಘಟನೆ
1978ರಲ್ಲಿ ನೌಕಾಪಡೆಯ ಅಧಿಕಾರಿ ಮದನ್ ಮೋಹನ್ ಚೋಪ್ರಾ ಅವರ ಇಬ್ಬರು ಪುತ್ರರನ್ನು ರಂಗಾ ಮತ್ತು ಬಿಲ್ಲಾ ಅಪಹರಿಸಿದ್ದರು. ಅಪಹರಣದ ವೇಳೆ ಬಿಲ್ಲಾ ಚಾಕುವಿನಿಂದ ಸಂಜಯ್ ಮೇಲೆ ದಾಳಿ ಮಾಡಿದ್ದ. ಮಕ್ಕಳನ್ನು ರಕ್ಷಿಸಲು ಗೀತಾ ಕಿರುಚಿಕೊಂಡಾಗ, ಆ ಮಾರ್ಗವಾಗಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಕಾರಿನಲ್ಲಿದ್ದ ಮಕ್ಕಳನ್ನು ಗಮನಿಸಿ, ಕಾರಿನ ನಂಬರ್ನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಕ್ರಮ ಕೈಗೊಳ್ಳುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ರಂಗಾ ಮತ್ತು ಬಿಲ್ಲಾ ಸಂಜಯ್ನನ್ನು ಹ*ತ್ಯೆ ಮಾಡಿದರು. ಬಳಿಕ ಬಿಲ್ಲಾ ಚಾಕುವಿನಿಂದ ಗೀತಾಳ ಕುತ್ತಿಗೆಗೆ ಇರಿದು ಆಕೆಯನ್ನೂ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೇ ನೈಜ ಪ್ರಕರಣವನ್ನು ಆಧರಿಸಿರುವುದರಿಂದ 'ರಾಖ್' ಸಿರೀಸ್ ಪ್ರೇಕ್ಷಕರಲ್ಲಿ ಆರಂಭದಿಂದ ಅಂತ್ಯದವರೆಗೂ ಕುತೂಹಲ ಮತ್ತು ಆತಂಕವನ್ನು ಮೂಡಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.