Khalnayak Returns ಬೆನ್ನಲ್ಲೇ ಸಂಜಯ್​ ದತ್​ ಬೆನ್ನೇರಿತು ಕಾಗೆ: ಸಿಎಂ ಸಿದ್ದು ನೆನಪಿಸಿದ ಕನ್ನಡಿಗರು! Video Viral

Published : Apr 26, 2026, 07:12 PM IST

'ಖಳನಾಯಕ್ ರಿಟರ್ನ್ಸ್' ಚಿತ್ರದ ಮೂಲಕ ಮರಳುತ್ತಿರುವ ನಟ ಸಂಜಯ್ ದತ್ ಅವರ ಕಾರಿನ ಮೇಲೆ ಕಾಗೆ ಕುಳಿತ ಘಟನೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕುಳಿತು ವಿವಾದ ಸೃಷ್ಟಿಸಿದ್ದ 2016ರ ಪ್ರಸಂಗವನ್ನು ನೆನಪಿಸಿದೆ.

PREV
16
‘ಖಳನಾಯಕ್ ರಿಟರ್ನ್ಸ್’

ನಟ ಸಂಜಯ್​ ದತ್​ ಅವರ ಖಳನಾಯಕ್​ ಚಿತ್ರ ಬ್ಲಾಕ್​ಬಸ್ಟರ್​ ಆಗಿತ್ತು. 30 ವರ್ಷಗಳ ಹಿಂದೆ ರಿಲೀಸ್​ ಆಗಿದ್ದ ಈ ಚಿತ್ರದ ಸೀಕ್ವೆಲ್ ಈಗ ಸಿದ್ಧವಾಗುತ್ತಿದೆ. ಮೊನ್ನೆ 24ರಂದು ‘ಖಳನಾಯಕ್ ರಿಟರ್ನ್ಸ್’ (Khalnayak Returns) ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಟೀಸರ್‌ನಲ್ಲಿ ಸಂಜಯ್ ದತ್ ಅತ್ಯಂತ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

26
ಜಾಲತಾಣದಲ್ಲಿ ಮಾಹಿತಿ

ಈ ಸಿನಿಮಾ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿರುವ ನಟ, ‘ಯಾವುದೇ ಕಥೆ ಮುಗಿಯುವುದಿಲ್ಲ. ಅದು ಮತ್ತೆ ಆರಂಭವಾಗುತ್ತದೆ. ಖಳನಾಯಕ್ ರಿಟರ್ನ್ಸ್’ ಎಂದು ಬರೆದುಕೊಂಡಿದ್ದಾರೆ. ‘ಪ್ರತಿ ಕಥೆಗೂ ಒಂದು ಸಮಯವಿರುತ್ತದೆ. ಈಗ ಅದರ ಸಮಯ ಬಂದಿದೆ’ ಎಂಬ ಕ್ಯಾಪ್ಷನ್ ನೀಡಿದ್ದಾರೆ.

36
ಏನು ಗ್ರಹಚಾರ ಕಾದಿದೆ?

ಆದರೆ ಇದರ ಬೆನ್ನಲ್ಲೇ ಇದೀಗ ಅವರ ಕಾರಿನ ಮೇಲೆ ಕಾಗೆಯೊಂದು ಕುಳಿತು ಹಾರಿ ಹೋಗಿದೆ. ಬಹುಶಃ ಇದನ್ನು ಖುದ್ದು ನಟನೂ ನೋಡಿರಲಿಕ್ಕಿಲ್ಲ. ನೋಡಿದ್ದರೂ ಅಷ್ಟೊಂದು ಗಮನ ಹರಿಸಿರಲಿಕ್ಕಿಲ್ಲ. ಆದರೆ, ಪಾಪರಾಜಿಗಳು ಬಿಡಬೇಕಲ್ಲ. ನಟ ಕಾರಿನಿಂದ ಇಳಿಯುವುದಕ್ಕೂ ಸರಿಯಾಗಿ ಆ ಕಾಗೆ ಬಂದ ಕಾರಿನ ಮೇಲೆ ಕುಳಿತು ಅಲ್ಲಿಂದ ಹಾರಿ ಹೋಗಿದೆ. ಇದಾಗಲೇ ಜೈಲು ಸೇರಿ ಬಂದಿರೋ ನಟನಿಗೆ ಇನ್ನೇನು ಗ್ರಹಚಾರ ಕಾದಿದೆ ಎಂದು ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

46
ಮೂಢನಂಬಿಕೆ ನಂಬಲ್ಲ

ಆದರೆ ಕಾಗೆಯ ವಿಷಯ ಬಂದಾಗಲೆಲ್ಲಾ ನಮ್ಮ ಕನ್ನಡಿಗರು ನೆನಪಿಸಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು. ಮೂಢನಂಬಿಕೆ ನಂಬಲ್ಲ, ಹಿಂದೂ ಹಬ್ಬಗಳ ದಿನಗಳಂದು ನಾನು ಮಾಂಸಾಹಾರ ಸೇವನೆ ಮಾಡುತ್ತೇನೆ ಎಂದೆಲ್ಲಾ ಹೇಳುವ ಮುಖ್ಯಮಂತ್ರಿಗಳು, ಚುನಾವಣೆ ಹತ್ತಿರ ಬಂದಾಗ ದೇಗುಲಗಳಲ್ಲಿ ಪೂಜೆ ಸಲ್ಲಿಸುವ ವಿಡಿಯೋಗಳೆಲ್ಲಾ ಹರಿಬಿಟ್ಟು ಟ್ರೋಲ್​ ಮಾಡುವವರಿಗೇನೂ ಕಮ್ಮಿಯಿಲ್ಲ ಎನ್ನಿ. ತಾವು ನಂಬದಿದ್ದರೂ ತಮ್ಮ ಪತ್ನಿಗಾಗಿ ಹೀಗೆಲ್ಲಾ ಮಾಡುತ್ತೇವೆ ಎಂದು ಸಿಎಂ ಆಗಲೀ, ಪ್ರಕಾಶ್​ ರಾಜ್​ ಆಗಲಿ ಎಲ್ಲರೂ ಹೇಳುವುದು ಕಾಮನ್​.

56
2016ರ ಘಟನೆ

ಆದರೆ, ವಿಷ್ಯ ಅದಲ್ಲ. ಇದೀಗ ಸಂಜಯ್​ ದತ್​ ಅವರ ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ 2016ರ ಘಟನೆಯನ್ನು ಜಾಲತಾಣದಲ್ಲಿ ಮತ್ತೆ ನೆನಪಿಸಲಾಗುತ್ತಿದೆ. ಆಗ ಸಿದ್ದರಾಮಯ್ಯನವರ ಅಧಿಕೃತ ಕಾರಿನ ಬಾನೆಟ್ ಮೇಲೆ ಕಾಗೆ ಕುಳಿತುಕೊಂಡಾಗ, ಮೂಢನಂಬಿಕೆಯನ್ನು ವಿರೋಧಿಸುವ ಸಿಎಂ ಅದೇ ಕಾಗೆ ಕಾರಣಕ್ಕೆ ಕಾರು ಬದಲಾಯಿಸಿದರು ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.

66
ಕಾರು ಬದಲಾಯಿಸಿದ್ದ ಸಿಎಂ ಸಿದ್ದರಾಮಯ್ಯ

ಏಕೆಂದರೆ, ಮೂಢ ನಂಬಿಕೆಯೆಲ್ಲಾ ನಂಬಲ್ಲ ಎಂದಿದ್ದ ಸಿಎಂ, ಕಾಗೆ ಕುಳಿತ ಕೆಲವೇ ದಿನಗಳಲ್ಲಿ ಅದನ್ನು ಬದಲಾಯಿಸಿ, ಹೊಸ ಕಾರನ್ನು ಖರೀದಿಸಿದರು. ಆದರೆ ಇದು ಟ್ರೋಲ್​ ಆಗುತ್ತಲೇ ಅವರು, ಸಮಜಾಯಿಷಿ ನೀಡಿದ್ದರು. ಹಳೆಯ ಕಾರು ಹೆಚ್ಚು ಓಡಿದ್ದರಿಂದಲೇ ಹೊಸ ಕಾರು ಖರೀದಿಸಲಾಗಿದೆ ಎಂದಿದ್ದರು. ನಂತರದ ದಿನಗಳಲ್ಲಿ ಕೇರಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಸಿದ್ದರಾಮಯ್ಯ ಅವರ ಮೇಲಿದ್ದ ಮರದ ಕೊಂಬೆಯಿಂದ ಕಾಗೆಯೊಂದು ಅವರ ಬಿಳಿ ಪಂಚೆಯ ಮೇಲೆ ಹಿಕ್ಕೆ ಹಾಕಿದ ಪ್ರಸಂಗವೂ ಸಾಕಷ್ಟು ಸುದ್ದಿಯಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories