Published : Nov 01, 2022, 08:49 PM ISTUpdated : Nov 01, 2022, 08:52 PM IST
ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ, ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನಸೌಧದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸುರಿಯುತ್ತಿರುವ ಮಳೆಯ ನಡುವೆ, ಜೂನಿಯರ್ ಎನ್ಟಿಆರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪತಿಯ ಪರವಾಗಿ ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಫೋಟೋ ಕೃಪೆ: ಎ ವೀರಮಣಿ, ಕೆ. ರವಿ, ಸುರೇಶ್ ಪಿ
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ , ನಟ ಜೂನಿಯರ್ ಎನ್ಟಿಆರ್ , ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ವಿವಿಧ ಗಣ್ಯರ ಸಮ್ಮುಖದಲ್ಲಿ ಸಾಲು ಹೊದಿಸಿ ಪೇಟಾ ತೊಡಿಸಿ, ಕರ್ನಾಟಕ ರತ್ನ ಪದಕ ನೀಡಿ ಗೌರವಿಸಿದರು.
214
ಪತಿಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
314
ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗು ನಟ ಜೂನಿಯರ್ ಎನ್ಟಿಆರ್, ಪರಂಪರೆ ಹಾಗೂ ಉಪನಾಮ ಹಿರಿಯರಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಎಂಬುದು ಆತನ ಸ್ವಂತ ಸಂಪಾದನೆ, ಬರೀ ವ್ಯಕ್ತಿತ್ವದಿಂದ, ಕೇವಲ ನಗುವಿನಿಂದ ಸ್ವಂತ ಪ್ರತಿಭೆಯಿಂದ ರಾಜ್ಯವನ್ನು ಗೆದ್ದಿರುವ ಯಾರಾದರು ಇದ್ದರೆ ಅದು ಪುನೀತ್ ರಾಜ್ ಕುಮಾರ್ ಮಾತ್ರ ಎಂದು ಹೇಳಿದರು.
414
ಸಮಾರಂಭ ನಡೆದ ವಿಧಾನಸೌಧದ ಮುಂದೆ ಸೇರಿದ ಅಪ್ಪು ಅಭಿಮಾನಿಗಳು ಹಾಗೂ ಜನ ಸಾಗರ, ಸುರಿಯುತ್ತಿರುವ ಮಳೆಯ ನಡುವೆಯೂ ಸ್ಥಳ ಬಿಟ್ಟು ಕದಲದ ಅಭಿಮಾನಿಗಳು
514
ಇನ್ನು ಕಾರ್ಯಕ್ರಮಲ್ಲಿ ಮಾತನಾಡಿದ ತಲೈವಾ ತಮಿಳು ಸೂಪರ್ ಸ್ಟಾರ್, ಪುನೀತ್ ದೇವರ ಮಗ ಸ್ವಲ್ಪ ಕಾಲ ಭೂಮಿಗೆ ಬಂದು ನಮ್ಮೊಂದಿಗೆ ಇದ್ದು ವಾಪಸ್ ಹೊರಟು ಹೋಗಿದ್ದಾರೆ ಅವರು ನಿಧನರಾದಾಗ ನಾನು ಆಸ್ಪತ್ರೆಯಲ್ಲಿದ್ದೆ. ಹಲವು ದಿನಗಳ ಬಳಿಕ ನನ್ನ ಕುಟುಂಬದವರು ಅವರು ನಿಧನರಾದ ಬಗ್ಗೆ ತಿಳಿಸಿದರು. ಆ ಕ್ಷಣ ನನಗೆ ನಂಬಲಾಗಲಿಲ್ಲ ಎಂದು ರಜನಿ ಹೇಳಿಕೊಂಡರು.
614
ನಟ ರಜನಿಕಾಂತ್ ಜೊತೆ ಶಿವಣ್ಣ, ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ರಾಜ್ಕುಮಾರ್ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
714
ಮಾತು ಆರಂಭಿಸುವ ಮುನ್ನ ನಾಡಿನ ಸಮಸ್ತ ಜನರಿಗೆ ಏಳು ಕೋಟಿ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ತಲೈವಾ ರಜನಿಕಾಂತ್
814
ವಿಧಾನಸೌಧದ ಮುಂದೆ ಪುನೀತ್ ರಾಜ್ ಕುಮಾರ್ ಕಟೌಟ್ ಹಾಗೂ ಕನ್ನಡ ಧ್ವಜ ಹಿಡಿದುಕೊಂಡು ಸಂಭ್ರಮ ಪಡುತ್ತಿರುವ ಕನ್ನಡಿಗರು. ಅಭಿಮಾನಿಗಳ ಮನಸ್ಸು ಹೃದಯಗಳಲ್ಲಿ ರಾರಾಜಿಸುತ್ತಿರುವ ಅಪ್ಪು.
914
ಅಭಿಮಾನಿಗಳ ಕೈಯಲ್ಲಿ ಕನ್ನಡ ಧ್ವಜದಲ್ಲಿ ಮೂಡಿ ಬಂದ ನಟ ಸಾರ್ವಭೌಮ ಅಪ್ಪು. ಕೆಂಪು ಹಳದಿ ಸಾಲು ಕೈಯಲ್ಲಿ ಅಪ್ಪು ಇರುವ ಧ್ವಜದೊಂದಿಗೆ ಬಂದ ಅಭಿಮಾನಿಗಳು.
1014
ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು
1114
ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು
1214
ವಿಧಾನಸೌಧದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸುರಿಯುತ್ತಿರುವ ಮಳೆಯ ನಡುವೆ, ಜೂನಿಯರ್ ಎನ್ಟಿಆರ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪತಿಯ ಪರವಾಗಿ ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.
1314
ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು
1414
ವಿಧಾನಸೌಧದ ಮುಂದೆ ಮಾಧ್ಯಮಗಳ ಕ್ಯಾಮರಾಗಳಿಗೆ ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ಫೋಸ್ ಕೊಟ್ಟ ಪವರ್ ಸ್ಟಾರ್ ಅಭಿಮಾನಿಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.