ಸತೀಶ್ ಕೌಶಿಕ್ ಸಾವಿಗೆ ಟ್ವಿಸ್ಟ್: ಹೋಳಿ ಪಾರ್ಟಿ ಸ್ಥಳದಲ್ಲಿ ಔಷಧ ಪತ್ತೆ, ಫಾರ್ಮ್ ಹೌಸ್ ಮಾಲೀಕ ಪರಾರಿ!

Published : Mar 11, 2023, 05:36 PM IST

ಚಿತ್ರ ನಿರ್ಮಾಪಕ ಮತ್ತು ನಟ ಸತೀಶ್ ಕೌಶಿಕ್ (Satish Kaushik) ಸಾವಿನ ಪ್ರಕರಣವನ್ನು ದೆಹಲಿ ಪೊಲೀಸರು ತ್ವರಿತವಾಗಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಅವರ ವಿವರವಾದ ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ನಡುವೆಯೇ , ಪೊಲೀಸರು ಇತ್ತೀಚೆಗೆ ಸತೀಶ್   ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿದ್ದರು. ದಕ್ಷಿಣ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಪಾರ್ಟಿಯನ್ನು ಸತೀಶ್ ಅವರ ಸ್ನೇಹಿತ ಆಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಪಾರ್ಟಿ ಸ್ಥಳದಿಂದ ಪೊಲೀಸರು ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ. ಸತೀಶ್ ಕೌಶಿಕ್ ಸಾವಿನ ಪ್ರಕರಣದಲ್ಲಿ ಪೊಲೀಸರು ಫಾರ್ಮ್‌ಹೌಸ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲು ಬಯಸಿದ್ದಾರೆ. ಆದರೆ ವರದಿಗಳ ಪ್ರಕಾರ, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ ಮತ್ತು ವಿವರವಾದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ

PREV
18
ಸತೀಶ್ ಕೌಶಿಕ್ ಸಾವಿಗೆ ಟ್ವಿಸ್ಟ್: ಹೋಳಿ ಪಾರ್ಟಿ ಸ್ಥಳದಲ್ಲಿ ಔಷಧ ಪತ್ತೆ, ಫಾರ್ಮ್ ಹೌಸ್ ಮಾಲೀಕ ಪರಾರಿ!
Image: Google

ವರದಿಗಳ ಪ್ರಕಾರ,  ಕಳೆದ ದಿನಗಳಲ್ಲಿ ಹೋಳಿ ಪಾರ್ಟಿಯಲ್ಲಿ ಸತೀಶ್ ಕೌಶಿಕ್ ಭಾಗವಹಿಸಿದ್ದ ಫಾರ್ಮ್‌ಹೌಸ್ ಮಾಲೀಕರು ಪರಾರಿಯಾಗಿದ್ದಾರೆ. ಅದೇ ಸಮಯದಲ್ಲಿ, ಪ್ರಕರಣದ ಹೆಚ್ಚಿನ ತನಿಖೆಗಾಗಿ ನಟನ ಅಂತಿಮ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

28
Satish Kaushik

ವರದಿಗಳ ಪ್ರಕಾರ, ದೆಹಲಿ ಪೊಲೀಸರು ಸತೀಶ್ ಕೌಶಿಕ್ ಅವರ ವಿವರವಾದ ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ, ಅದರ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ. ವರದಿಗಳ ಮೂಲಗಳನ್ನು ಉಲ್ಲೇಖಿಸಿ, ಸತೀಶ್ ಸಾವಿನ ಬಗ್ಗೆ ವೈದ್ಯರು ಸದ್ಯಕ್ಕೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ ಎಂದು ಬರೆಯಲಾಗಿದೆ.

38
Satish Kaushik

ವೈದ್ಯರು ಸತೀಶ್ ಅವರ ಹೃದಯ ಮತ್ತು ರಕ್ತವನ್ನು ಕೆಲವು ಪರೀಕ್ಷೆಗಳಿಗೆ ಸಂರಕ್ಷಿಸಿದ್ದಾರೆ. ಒಂದು ವಾರ ಅಥವಾ 15 ದಿನಗಳಲ್ಲಿ ಚಿತ್ರ ನಿರ್ಮಾಪಕರ ವಿವರವಾದ ಮರಣೋತ್ತರ ಪರೀಕ್ಷೆಯ ವರದಿಯನ್ನು ಪೊಲೀಸರು ಪಡೆಯುತ್ತಾರೆ ಎಂದು ನಂಬಲಾಗಿದೆ.

48
Image: Satish Kaushik / Instagram

ಮೂಲಗಳ ಪ್ರಕಾರ ದೆಹಲಿ ಪೊಲೀಸರ ಅಪರಾಧ ತಂಡವು ಪಾರ್ಟಿ ನಡೆದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿತು ಮತ್ತು ಸತೀಶ್ ಕೌಶಿಕ್ ಸಾಯುವ ಮೊದಲು ಅಲ್ಲಿ ನಡೆದ ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಸ್ಥಳದಿಂದ ಕೆಲವು ಔಷಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಂತೆ ಮುಂದಿನ ತನಿಖೆ ನಡೆಸಲಾಗುವುದು. ಪಾರ್ಟಿಗೆ ಆಗಮಿಸಿದ ಅತಿಥಿಗಳ ಪಟ್ಟಿಯನ್ನೂ ಪೊಲೀಸರು ಕೇಳಿದ್ದಾರೆ.

58

ಪ್ರಕರಣವೊಂದರಲ್ಲಿ ಬೇಕಾಗಿರುವ ಕೈಗಾರಿಕೋದ್ಯಮಿಯೊಬ್ಬರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಸತೀಶ್ ಸಾವಿನ ಪ್ರಕರಣದಲ್ಲಿ ಯಾವುದೇ ಸಂಶಯಾಸ್ಪದ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ  ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ.

68
Image: Anupam Kher / Twitter

ಸತೀಶ್ ಕೌಶಿಕ್ ಅವರು ಮಾರ್ಚ್ 9 ರಂದು ಹೃದಯಾಘಾತದಿಂದ ನಿಧನರಾದರು. , ಸತೀಶ್ ದೆಹಲಿಯಲ್ಲಿರುವ ಸ್ನೇಹಿತನ ಸ್ಥಳಕ್ಕೆ ಹೋಗುತ್ತಿದ್ದಾಗ, ಅವರಿಗೆ ತೊಂದರೆ ಕಾಣಿಸಿಕೊಂಡಿತ್ತು ಎಂದು ಸತೀಶ್ ಅವರ  ಸ್ನೇಹಿತ ಅನುಪಮ್ ಖೇರ್ ಸಂಭಾಷಣೆಯಲ್ಲಿ ಹೇಳಿದ್ದಾರೆ.

78

'ತನಗೆ ಚಡಪಡಿಕೆ ಅನಿಸಿದಾಗ, ಅವನು ತನ್ನ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಕೇಳಿದನು, ದಾರಿಯಲ್ಲಿ ಅವನಿಗೆ ಹೃದಯಾಘಾತವಾಯಿತು, ಆ ಸಮಯದಲ್ಲಿ ಸುಮಾರು 1 ಗಂಟೆಯ ಸಮಯ ಇರಬೇಕು. ಸತೀಶ್ ಮುಂಜಾನೆ ಕೊನೆಯುಸಿರೆಳೆದನು' ಎಂದು ಅನುಪಮ್ ಹೇಳಿದ್ದರು.

88

ಮಾರ್ಚ್ 9 ರಂದು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೆಹಲಿಯ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಾರ್ಚ್ 9 ರಂದು ಸಂಜೆ ಮುಂಬೈನಲ್ಲಿ ಸತೀಶ್ ಅವರ ಅಂತ್ಯಕ್ರಿಯೆ ನಡೆಯಿತು.

Read more Photos on
click me!

Recommended Stories