ಎದ್ನೋ ಬಿದ್ನೋ ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್; ಎಂಥಾ ಬ್ಯಾಡ್ ಟೈಂ ನೋಡಿ!

Published : Jun 12, 2026, 03:36 PM IST

ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಯಾವುದೇ ಹೊಸ ಸಿನಿಮಾದ ಕಾರಣಕ್ಕಲ್ಲ, ಬದಲಾಗಿ ಬೇರೆ ಒಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿ ಇದ್ದಾರೆ. ಏನದು ನೋಡಿ..!

PREV
16

ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್!

"'ಕಲಾ ಹಿರನ್' ಚಿತ್ರದ ವಿರುದ್ಧ ಸಿಡಿದೆದ್ದ ಸಲ್ಮಾನ್ ಖಾನ್! ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ 'ಬಾಲಿವುಡ್ ಭಾಯ್‌ಜಾನ್'!"

ಮುಂಬೈ/ದೆಹಲಿ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ (Salman Khan) ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಯಾವುದೇ ಹೊಸ ಸಿನಿಮಾದ ಕಾರಣಕ್ಕಲ್ಲ, ಬದಲಾಗಿ ಒಂದು ಸಿನಿಮಾದ ವಿರುದ್ಧ ಕಾನೂನು ಸಮರ ಸಾರಿದ್ದಾರೆ! ಹೌದು, ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಬಿಡುಗಡೆಗೆ ಸಿದ್ಧವಾಗಿರುವ 'ಕಲಾ ಹಿರನ್: ಬ್ಯಾಟಲ್ ಫಾರ್ ಲೆಗಸಿ' (Kala Hiran: Battle for Legacy) ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಗೆ ತಡೆ ನೀಡುವಂತೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.

26

ವಿವಾದಕ್ಕೆ ಕಾರಣವೇನು?

ಸಲ್ಮಾನ್ ಖಾನ್ ಈ ಅರ್ಜಿ ಸಲ್ಲಿಸಲು ಮುಖ್ಯ ಕಾರಣ 'ಪರ್ಸನಾಲಿಟಿ ರೈಟ್ಸ್' (Personality Rights). ಚಿತ್ರದ ಟೀಸರ್ ಮತ್ತು ಪ್ರಚಾರದ ಹಾದಿಯನ್ನು ಗಮನಿಸಿದ ಸಲ್ಮಾನ್, ಚಿತ್ರತಂಡವು ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅರ್ಜಿಯ ಪ್ರಕಾರ, ಚಿತ್ರದ ತಯಾರಕರು ಸಲ್ಮಾನ್ ಖಾನ್ ಅವರನ್ನೇ ಹೋಲುವ 'ಲುಕ್-ಅಲೈಕ್' ನಟನನ್ನು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಅವರ ಐಕಾನಿಕ್ ಗುರುತಾದ ಅವರ ಕೈಯಲ್ಲಿರುವ 'ಬ್ರೇಸ್‌ಲೆಟ್' ಅನ್ನು ಸಹ ಆ ಪಾತ್ರಕ್ಕೆ ತೊಡಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ಮತ್ತು ವ್ಯಕ್ತಿತ್ವವನ್ನು ಬಳಸಿಕೊಂಡು ಪ್ರಚಾರ ಪಡೆಯುವ ಹುನ್ನಾರ ಎಂದು ಸಲ್ಮಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

36

ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವದ ಭೀತಿ:

'ಆಜ್ ತಕ್' ವರದಿಯ ಪ್ರಕಾರ, ಈ ಸಿನಿಮಾ 1998ರ ಕೃಷ್ಣಮೃಗ ಬೇಟೆ ಪ್ರಕರಣದ (Blackbuck Poaching Case) ಸುತ್ತ ಹೆಣೆಯಲಾಗಿದೆಯಂತೆ. ಸದ್ಯ ಈ ಪ್ರಕರಣವು ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಹೀಗಿರುವಾಗ ಚಿತ್ರ ಬಿಡುಗಡೆಯಾದರೆ ಅದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಹುದು ಮತ್ತು ಸಾರ್ವಜನಿಕವಾಗಿ ತಮ್ಮ ಇಮೇಜ್‌ಗೆ ದೊಡ್ಡ ಮಟ್ಟದ ಹಾನಿ ಮಾಡಬಹುದು ಎಂಬುದು ಸಲ್ಮಾನ್ ವಾದ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ನಡುವಿನ ವಿವಾದವನ್ನೂ ಸಹ ಸಿನಿಮೀಯ ರೂಪದಲ್ಲಿ ತೋರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

46

ಲೀಗಲ್ ನೋಟಿಸ್ ನೀಡಿದ್ದರೂ ಬಗ್ಗದ ಚಿತ್ರತಂಡ:

ದೆಹಲಿ ಹೈಕೋರ್ಟ್ ಮೆಟ್ಟಿಲೇರುವ ಮುನ್ನವೇ ಸಲ್ಮಾನ್ ಖಾನ್ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಚಿತ್ರದ ಪ್ರಚಾರ ಮತ್ತು ನಿರ್ಮಾಣದ ಕೆಲಸಗಳನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದ್ದರು. "ಕ್ರಿಯಾಶೀಲವಾಗಿರುವ ಕಾನೂನು ಪ್ರಕರಣದ ಮೇಲೆ ಸಿನಿಮಾ ಮಾಡುವುದು ನ್ಯಾಯದ ಆಡಳಿತಕ್ಕೆ ಅಡ್ಡಿಪಡಿಸಿದಂತೆ" ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೂ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದರಿಂದ ಈಗ ಸಲ್ಮಾನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

56

ಚಿತ್ರದ ಹಿನ್ನೆಲೆ:

'ಕಲಾ ಹಿರನ್' ಚಿತ್ರದ ಪೋಸ್ಟರ್ ಕಳೆದ ತಿಂಗಳು ಬಿಡುಗಡೆಯಾದಾಗಲೇ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಇದು ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತಿದ್ದು, ಚಿತ್ರವು ಕೋರ್ಟ್‌ರೂಮ್ ಡ್ರಾಮಾ ಮತ್ತು ಕ್ರೈಮ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಸದ್ಯ ಸಲ್ಮಾನ್ ಖಾನ್ ಅವರ ಈ ಅರ್ಜಿಯ ವಿಚಾರಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ. ನ್ಯಾಯಾಲಯವು ಈ ಚಿತ್ರಕ್ಕೆ ತಡೆ ನೀಡುತ್ತದೆಯೇ ಅಥವಾ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

66

ಒಟ್ಟಿನಲ್ಲಿ 'ಕಲಾ ಹಿರನ್' ಸಿನಿಮಾ ಈಗ ಸಲ್ಮಾನ್ ಖಾನ್ ಪಾಲಿಗೆ ದೊಡ್ಡ ಕಾನೂನು ಸಂಘರ್ಷವಾಗಿ ಪರಿಣಮಿಸಿದೆ. ಸಲ್ಮಾನ್ ಅಭಿಮಾನಿಗಳು ಕೂಡ ಈ ಸಿನಿಮಾ ಬಿಡುಗಡೆಯಾಗಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories