ಪ್ರಭಾಸ್‌ ಮದುವೆ ಭವಿ‍ಷ್ಯ ಕೇಳಿ ಫ್ಯಾನ್ಸ್‌ ಕಂಗಾಲು ; ಅಷ್ಟಕ್ಕೂ ಏನು ಹೇಳತ್ತೆ ಭವಿಷ್ಯ

First Published Aug 19, 2022, 6:30 PM IST

ತೆಲುಗು ಚಿತ್ರರಂಗದ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಪ್ರಭಾಸ್ (Prabhas) ಒಬ್ಬರು. ಕೆಲ ಸಮಯದಿಂದ ಅವರ ವೈಯಕ್ತಿಕ ಜೀವನ ಟಾಲಿವುಡ್ ಅಭಿಮಾನಿಗಳಲ್ಲಿ  ಬಿಸಿ ಚರ್ಚೆಯ ವಿಷಯವಾಗಿದೆ. ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಪ್ರಭಾಸ್ ಮದುವೆ ಬಗ್ಗೆ ಹೇಳಿದ್ದ ಭವಿಷ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.  ಅಷ್ಟಕ್ಕೂ ಜ್ಯೋತಿಷಿ ಬಾಹುಬಲಿ ನಟನ ಮದುವೆ ಬಗ್ಗೆ ಹೇಳಿದ್ದೇನು ಗೊತ್ತಾ?

ಇತ್ತೀಚೆಗಷ್ಟೇ ಪ್ರಭಾಸ್ ಮದುವೆಯ ಬಗ್ಗೆ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ, ನಟ ಪ್ರಭಾಸ್ ಮದುವೆಯಾದರೆ, ದಿವಂಗತ ಉದಯ್ ಕಿರಣ್ ಗೆ ಆದ ಗತಿಯೇ ಅವರಿಗೂ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 
 

ಚಿತ್ರಂ, ನುವ್ವು ನೇನು, ಮತ್ತು ಮನಸಂತ ನುವ್ವೆಯಂತಹ ಬ್ಯಾಕ್-ಟು-ಬ್ಯಾಕ್ ಹಿಟ್‌ಗಳ ಮೂಲಕ ಉದ್ಯಮದಲ್ಲಿ ಹೆಸರು ಮಾಡಿದ್ದ ವಾಜಪೇಯಜುಲ ಉದಯ್‌ ಕಿರಣ್‌ ಅವರು ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ಗಳಿಸಿದರು.
 

ಆದರೆ   32 ವರ್ಷದ ನಟ ಉದಯ್‌ ಕಿರಣ್‌ ಜನವರಿ 5, 2014 ರಂದು ಆತ್ಮಹತ್ಯೆ ಮಾಡಿಕೊಂಡರು. ವರದಿಗಳ ಪ್ರಕಾರ, ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಸುಶ್ಮಿತಾ ಅವರ ಜೊತೆ  ನಿಶ್ಚಿತಾರ್ಥ ಮುರಿದ ನಂತರ ನಟನ ವೃತ್ತಿಜೀವನವು ತೊಂದರೆಗೆ ಸಿಲುಕಿತ್ತು.
 

ಈ ಹಿಂದೆ ಹಲವು ಸೆಲೆಬ್ರಿಟಿಗಳ ಬಗ್ಗೆ ವೇಣು ಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಇದರ ಪರಿಣಾಮವಾಗಿ, ನಟನ ಮದುವೆಯ ಬಗ್ಗೆ ಅವರ ಭವಿಷ್ಯವಾಣಿಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದ ಸಮಯದಲ್ಲಿ ಪ್ರಭಾಸ್ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ವದಂತಿ ಜೂನ್‌ನಲ್ಲಿ ಹಬ್ಬಿತ್ತು.  ಈ ಬಗ್ಗೆ ಅವರ ಚಿಕ್ಕಪ್ಪ, ಹಿರಿಯ ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅಭಿಮಾನಿಗಳಿಗೆ ತಿಳಿಸುವ ನಿರೀಕ್ಷೆಯಿದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಆದರೆ, ಈ ಬಗ್ಗೆ ಪ್ರಭಾಸ್ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ದೃಢೀಕರಣವನ್ನು ಇನ್ನೂ ನೀಡಿಲ್ಲ.  
 

ಈಶ್ವರ್ ಚಿತ್ರದ ಮೂಲಕ ಪ್ರಭಾಸ್ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದರು, ಅದು ದೊಡ್ಡ ಯಶಸ್ಸನ್ನು ಕಂಡಿತು. ನಟನ ಅಭಿಮಾನಿ ಬಳಗವನ್ನು ಯಂಗ್ ರೆಬೆಲ್ ಸ್ಟಾರ್ ಎಂದು ಪ್ರಭಾಸ್‌ಗೆ ಹೆಸರು ನೀಡಿದೆ. 

ಬ್ಲಾಕ್ಬಸ್ಟರ್ ಬಾಹುಬಲಿ ಫಿಲ್ಮ್ ಫ್ರ್ಯಾಂಚೈಸ್‌ ಮೂಲಕ ಪ್ರಭಾಸ್‌  ಅವರು ಪ್ಯಾನ್-ಇಂಡಿಯಾ ಸ್ಟಾರ್ ಆದರು ಮತ್ತು ಪ್ರಸ್ತುತ ಹಲವಾರು ದೊಡ್ಡ-ಬಜೆಟ್ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಧೆ ಶ್ಯಾಮ್ ನಂತರ ಪ್ರಭಾಸ್ ಸಲಾರ್ ಮತ್ತು ಆದಿಪುರುಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ

click me!