ಸಮಂತಾರ ಜೊತೆ ಡಿವೋರ್ಸ್‌ to ಬಾಲಿವುಡ್‌ ಎಂಟ್ರಿ: ನಾಗಚೈತನ್ಯರ ಇಂಟರೆಸ್ಟಿಂಗ್‌ ವಿಷಯಗಳು

First Published Nov 23, 2022, 5:00 PM IST

ನವೆಂಬರ್ 23 ದಕ್ಷಿಣ ನಟ ನಾಗ ಚೈತನ್ಯ (Naga Chaitanya) ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರ ಪುತ್ರ. ನಾಗ ಚೈತನ್ಯ ಅವರಿಗೆ ಮೊದಲ ಚಿತ್ರ  ಬಹಳ ಸುಲಭವಾಗಿ ಸಿಕ್ಕಿತ್ತಾದರೂ, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಬಲದ ಮೇಲೆ ಚಿತ್ರರಂಗದಲ್ಲಿ ಸ್ಥಾನವನ್ನು ಗಳಿಸಿದ್ದಾರೆ.  ಕಳೆದ 12 ವರ್ಷಗಳಲ್ಲಿ 12ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇವುಗಳಲ್ಲಿ ಹೆಚ್ಚಿನವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿವೆ.  ನಾಗ ಚೈತನ್ಯಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

Naga Chaitanya

ನಾಗ ಚೈತನ್ಯ ಅವರು 2009ರಲ್ಲಿ ಬಿಡುಗಡೆಯಾದ ಜೋಶ್ ಚಿತ್ರದ ಮೂಲಕ ದಕ್ಷಿಣ ಇಂಡಸ್ಟ್ರಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರ ಕೊನೆಯ ಎರಡು ಚಿತ್ರಗಳಾದ ಪ್ರೇಮಂ ಮತ್ತು ಸಾಹಸ ಸಾಗಿಪೋ ಹಿಟ್ ಚಿತ್ರಗಳು.
 

Naga Chaitanya and son

ನಾಗ ಚೈತನ್ಯ ಅವರು ಆಮೀರ್ ಖಾನ್ ಅವರ ಹಿಂದಿ ಚಲನಚಿತ್ರ ಲಾಲ್ ಸಿಂಗ್ ಚಡ್ಡಾದೊಂದಿಗೆ ಹಿಂದಿ ಚಲನಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟರು, ಆದರೆ ಈ ಚಿತ್ರವು ಸೂಪರ್ ಫ್ಲಾಪ್ ಎಂದು ಸಾಬೀತಾಯಿತು.

31 ವರ್ಷದ ನಾಗ ಚೈತನ್ಯ ಅವರಿಗೆ ತಂದೆ ನಾಗಾರ್ಜುನ ಅಚ್ಚುಮೆಚ್ಚಿನ ವ್ಯಕ್ತಿ. ನಾಗಾರ್ಜುನ ಅವರು ಒಮ್ಮೆ ತನ್ನ ಇಬ್ಬರು ಪುತ್ರರಲ್ಲಿ ಚೈತನ್ಯಗೆ ಹತ್ತಿರವಾಗಿದ್ದಾರೆ.ನಾಗಾರ್ಜುನ್ ಚೈತನ್ಯ ಜೊತೆಗಿನ ಅವರ ಸಂಬಂಧವನ್ನು ಸ್ನೇಹಿತನ ಸಂಬಂಧ ಎಂದು ಹೇಳಿದ್ದರು. 

ಭಾವನಾತ್ಮಕವಾಗಿ ತನ್ನನ್ನು ಹೇಗೆ ಸಮತೋಲನಗೊಳಿಸಬೇಕೆಂದು ಅವನಿಗೆ ತಿಳಿದಿದೆ. ಕೆಲವೊಮ್ಮೆ ನಾಗಾರ್ಜುನ ತನ್ನ ಮಗ ಚೈತನ್ಯನಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾರಂತೆ.

ಬಾಹುಬಲಿ ನಟ ರಾಣಾ ದಗ್ಗುಬಾಟಿ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ತಾರೆ, ಅವರು ಚೈತನ್ಯ ಅವರ ನಿಕಟ ಸಂಬಂಧಿ. ಇಬ್ಬರ ನಡುವೆ ಅತ್ಯುತ್ತಮ ಬಾಂಧವ್ಯವಿದೆ. ಇಬ್ಬರೂ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರು.

Samantha

ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರು 2009 ರಿಂದ ಸಂಬಂಧದಲ್ಲಿದ್ದರು. ಆಗ ನಾಗ ಅವರು ನಟನೆಗೆ ಪಾದಾರ್ಪಣೆ ಮಾಡಿದ ವರ್ಷ. ಪರಸ್ಪರ ಪ್ರೀತಿಯಲ್ಲಿದ್ದ ಇಬ್ಬರು ಮದುವೆಯಾದರು. 

ಆದರೆ ಮದುವೆಯ ನಾಲ್ಕನೇ ವರ್ಷಾಚರಣೆಗೂ ಮುನ್ನವೇ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ಬೇರೆಯಾದರು. ಸಮಂತಾ ಮತ್ತು ನಾಗ ಚೈತನ್ಯ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ.

ನಾಗ ಚೈತನ್ಯ ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಮತ್ತು ತಾಯಿ ಲಕ್ಷ್ಮಿ ದಗ್ಗುಬಾಟಿ. ನಾಗ ಅವರ ಅಜ್ಜ ಅಂದರೆ ಲಕ್ಷ್ಮಿ ದಗ್ಗುಬಾಟಿಯವರ ತಂದೆ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಡಾ. ಡಿ. ರಾಮನಾಯ್ಡು. ಅವರ ತಾಯಿಯ ಸಹೋದರ ವೆಂಕಟೇಶ್ ಕೂಡ ದಕ್ಷಿಣದ ಸೂರ್‌ಸ್ಟಾರ್‌ ಆಗಿದ್ದಾರೆ. ಚೈತನ್ಯ ಅವರ ಸಹೋದರ ಅಖಿಲ್ ಕೂಡ ನಟರು.

ನಾಗ ಚೈತನ್ಯ ಬಹಳ ದಿನಗಳಿಂದ ಬಾಲಿವುಡ್ ಚಿತ್ರಗಳ ಆಫರ್‌ಗಳನ್ನು ತಿರಸ್ಕರಿಸುತ್ತಿದ್ದರು. ದಕ್ಷಿಣ ಭಾಷೆ ಮಾತನಾಡುವುದರಿಂದ ಹಿಂದಿ ಚಿತ್ರರಂಗದಲ್ಲಿ ಅಭದ್ರತೆ ಕಾಡುತ್ತದೆ  ಭಾಷೆಯ ಮೇಲಿನ ಹಿಡಿತ ಇಲ್ಲದ ಕಾರಣ ಚಿತ್ರಗಳನ್ನು ತಿರಸ್ಕರಿಸುತ್ತಿದ್ದರು ಎಂದು ಅವರು  ಕಾರಣವನ್ನು ಹೇಳಿದ್ದರು.

ಆದರೆ ಅದೇ ಸಮಯದಲ್ಲಿ, ಅವರು ಆಮೀರ್ ಖಾನ್ ಅವರ ಪ್ರಸ್ತಾಪವನ್ನು ತಿರಸ್ಕರಿಸಲು ಸಾಧ್ಯವಾಗಲಿಲ್ಲ. ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಸಿನಿಮಾ ಥಿಯೇಟರ್‌ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿತು.

click me!