ಜಿಯಾ ಖಾನ್ ಪ್ರಕರಣ: ಪಾಂಚೋಲಿಗೆ ಮುಗಿಯದ ಕಷ್ಟ, ನಟಿಯ ತಾಯಿಗೆ ನ್ಯಾಯಾಲಯ ಛೀಮಾರಿ

First Published Sep 30, 2022, 4:24 PM IST

ಬಾಲಿವುಡ್ ನಟರಾದ ಆದಿತ್ಯ ಪಾಂಚೋಲಿ ಮತ್ತು ಜರೀನಾ ವಹಾಬ್ ಅವರ ಪುತ್ರ ಸೂರಜ್ ಪಾಂಚೋಲಿ( Suraj Pancholi) 2015  ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನ್ಯೂಕಮ್ಮರ್‌ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಯಿತು. ಆದರೆ, ಈ ಚಿತ್ರ ಬಿಡುಗಡೆಯಾಗುವ ಎರಡು ವರ್ಷಗಳ ಮೊದಲೇ ಸೂರಜ್ ಸಖತ್‌ ಪ್ರಚಾರ ಪಡೆದಿದ್ದರು. ಇದಕ್ಕೆ ಕಾರಣ 2013ರಲ್ಲಿ ನಟಿ ಜಿಯಾ ಖಾನ್ (Jiah Khan) ಆತ್ಮಹತ್ಯೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಜಿಯಾ ಅವರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿರುವ ಸಂಬಂಧದ  ಆಧಾರದ ಮೇಲೆ ಪೊಲೀಸರು ಸೂರಜ್‌ನನ್ನು ಬಂಧಿಸಿದ್ದರು. ಅಂದಿನಿಂದ, ಕಳೆದ 9 ವರ್ಷಗಳಲ್ಲಿ ಸೂರಜ್ ಅವರ ಎರಡು ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಅಷ್ಟೇ ಅಲ್ಲ, ಈ ಪ್ರಕರಣದಿಂದ ಇದುವರೆಗೂ ಖುಲಾಸೆಯಾಗಲು ಸಾಧ್ಯವಾಗಿಲ್ಲ. ಇದೀಗ ಸೂರಜ್  ಮತ್ತೊಮ್ಮೆ ಈ ವಿಚಾರದಲ್ಲಿ  ಕಷ್ಟ ಎದುರಿಸುತ್ತಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಇ-ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸೂರಜ್ ಪಾಂಚೋಲಿ ಅವರು ಕಳೆದ 10 ವರ್ಷಗಳಿಂದ ಈ ಪ್ರಕರಣ ಮತ್ತು ತನ್ನ ವಿರುದ್ಧದ ಸುಳ್ಳು ಆರೋಪಗಳ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಹೇಳಿದರು.

'ಮನುಷ್ಯನಾಗಿ ಈ ಎಲ್ಲ ಸಂಗತಿಗಳಿಂದ ಕೆಟ್ಟದಾಗಿ ಪ್ರಭಾವಿತನಾಗಿದ್ದಾನೆ. ನಾನು ಈ ಸಮಯವನ್ನು ಹೇಗೆ ಕಳೆದಿದ್ದೇನೆ ಎಂದು ನನಗೆ ಮಾತ್ರ ತಿಳಿದಿದೆ. ಜಿಯಾ ಅವರ ಕುಟುಂಬದ ಬಗ್ಗೆ ನನಗೆ ತುಂಬಾ  ಗೌರವವಿದೆ ಮತ್ತು ನಾನು ಯಾವಾಗಲೂ ಘನತೆಯನ್ನು ಕಾಪಾಡಿಕೊಂಡಿದ್ದೇನೆ. ಆದಷ್ಟು ಬೇಗ ನನಗೂ ಅವರಿಗೂ ನ್ಯಾಯಯುತವಾದ ವಿಚಾರಣೆ ನಡೆಯಲಿ ಮತ್ತು ಈ ವಿಷಯವು ಶೀಘ್ರದಲ್ಲೇ ಕೊನೆಗೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ನಟ ಸೂರಜ್ ಪಾಂಚೋಲಿ ಹೇಳಿದರು.

ಈ ಇಡೀ ವಿಚಾರದಲ್ಲಿ ಸೂರಜ್ ಮಾತ್ರವಲ್ಲ, ಸೂರಜ್ ತಾಯಿ ಜರೀನಾ ವಹಾಬ್ ಪ್ರತಿಕ್ರಿಯೆ ಕೂಡ ಮುನ್ನೆಲೆಗೆ ಬಂದಿದೆ. 'ರಾಬಿಯಾ (ಜಿಯಾಳ ತಾಯಿ) ಈ ವಿಷಯದಲ್ಲಿ ಸೂರಜ್‌ನ ತಪ್ಪಿಲ್ಲ ಎಂದು ಯಾವಾಗಲೂ ತಿಳಿದಿದ್ದಾರೆ. ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಲು ಬಂದಾಗ, ರಾಬಿಯಾ ದೇಶದಲ್ಲಿ ಇರುವುದಿಲ್ಲ.   ಆದರೆ ಅಮಾಯಕ ಹುಡುಗನನ್ನು ಜನರ ನಡುವೆ ವಿಲನ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ

ಜೂನ್ 3 ರಂದು ನಟಿ ಜಿಯಾ ಖಾನ್ ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾದಾಗ 2013 ರಿಂದ ಈ ಪ್ರಕರಣ  ನಡೆಯುತ್ತಿದೆ. ಜಿಯಾ ಅವರ ಕುಟುಂಬ ಸದಸ್ಯರು ಆಕೆಯ ಬಾಯ್‌ ಫ್ರೆಂಡ್‌ ಸೂರಜ್ ಪಾಂಚೋಲಿ ನಟಿಯನ್ನು ಆತ್ಮಹತ್ಯೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು.

ಆಗ ಜಿಯಾಳ ತಾಯಿ ರಾಬಿಯಾ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಹೇಳಿದ್ದರು. ಆದರೆ, ಈ ಪ್ರಕರಣದಲ್ಲಿ ಸೂರಜ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. 
 

ಇದೀಗ ಇತ್ತೀಚೆಗೆ ಕೋರ್ಟ್ ರಬಿಯಾ ಖಾನ್ ಗೆ ಛೀಮಾರಿ ಹಾಕಿದೆ. ಜಿಯಾ ಖಾನ್ ಅವರ ತಾಯಿ ರಾಬಿಯಾ ಆತ್ಮಹತ್ಯೆಯನ್ನು ಕೊಲೆ ಎಂದು ಸಾಬೀತುಪಡಿಸುವ ಮೂಲಕ ವಿಚಾರಣೆಯನ್ನು ಮತ್ತಷ್ಟು ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಂದು ಬಾಂಬೆ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಿದೆ.
 

click me!