ಮುಂಬೈನಲ್ಲಿ ನೀರಿಗೆ ಹಾಹಾಕಾರ, ರೆಸ್ಟೋರೆಂಟ್‌ನಲ್ಲಿ ರಿಕ್ವೆಸ್ಟ್ ಮಾಡಿದ್ರಷ್ಟೇ ಕೊಡ್ತಾರೆ ಕುಡಿಯೋ ನೀರು!

Published : May 25, 2024, 04:51 PM IST
ಮುಂಬೈನಲ್ಲಿ ನೀರಿಗೆ ಹಾಹಾಕಾರ, ರೆಸ್ಟೋರೆಂಟ್‌ನಲ್ಲಿ ರಿಕ್ವೆಸ್ಟ್ ಮಾಡಿದ್ರಷ್ಟೇ ಕೊಡ್ತಾರೆ ಕುಡಿಯೋ ನೀರು!

ಸಾರಾಂಶ

ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಕಾಣಿಸಿಕೊಂಡ ಬೆನ್ನಲ್ಲೇ ಈಗ ಮುಂಬೈನಲ್ಲಿ ನೀರಿಗೆ ತತ್ವಾರ ಶುರುವಾಗಿದೆ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ಮನವಿ ಮಾಡಿದ್ರಷ್ಟೇ ಕುಡಿಯೋಕೆ ನೀರು ಕೊಡಲಾಗುತ್ತೆ.

ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಕಾಣಿಸಿಕೊಂಡ ಬೆನ್ನಲ್ಲೇ ಈಗ ಮುಂಬೈನಲ್ಲಿ ನೀರಿಗೆ ತತ್ವಾರ ಶುರುವಾಗಿದೆ. ಬೃಹತ್‌ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ (BMC) ನೀರಿನ ಸಮಸ್ಯೆ ಹೆಚ್ಚಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈಗೆ ನೀರಿನ ಪೂರೈಕೆಯಲ್ಲಿ 5% ಕಡಿತವನ್ನು ಘೋಷಿಸಿದೆ. ಈ ಕಡಿತವು ಜೂನ್ 5 ರಿಂದ 10% ಕ್ಕೆ ದ್ವಿಗುಣಗೊಳ್ಳುತ್ತದೆ. ಎಲ್ಲಾ ಬಿಎಂಸಿ ನಾಗರಿಕರು ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಲಾಗಿದೆ. ಮುಂಬೈನ ಜನರು ಭಯಪಡಬೇಡಿ ಎಂದು ಮುಂಬೈ ಮುನ್ಸಿಪಾಲ್ ಹೇಳಿದೆ.

ಅಕ್ಟೋಬರ್ 2023ರಲ್ಲಿ ಸರಾಸರಿಗಿಂತ ಕಡಿಮೆ ಮಳೆಯ ಕಾರಣ, ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹವು 5.64% ಕಡಿಮೆಯಾಗಿದೆ. ಮೇ 25, 2024ರಂತೆ, ಮುಂಬೈಗೆ ನೀರು ಸರಬರಾಜು ಮಾಡುವ ಅಣೆಕಟ್ಟುಗಳು 1,40,202 ಮಿಲಿಯನ್ ಲೀಟರ್‌ಗಳನ್ನು ಹೊಂದಿವೆ, ಇದು ವಾರ್ಷಿಕ 14,47,363 ಮಿಲಿಯನ್ ಲೀಟರ್‌ಗಳ 9.69% ಮಾತ್ರ ಆಗಿದೆ.

ಬೆಂಗಳೂರು 110 ಹಳ್ಳಿಗಳಿಗೆ ಗುಡ್‌ ನ್ಯೂಸ್; ಕಾವೇರಿ ನೀರು ಸರಬರಾಜಿಗೆ 15 ದಿನಗಳಷ್ಟೇ ಬಾಕಿ!

ಪ್ರಸ್ತುತ ಪೂರೈಕೆಗೆ ಹೆಚ್ಚುವರಿಯಾಗಿ, ಮುಂಬೈ ಭಟ್ಸಾ ಅಣೆಕಟ್ಟಿನಿಂದ ಹೆಚ್ಚುವರಿ 1,37,000 ಮಿಲಿಯನ್ ಲೀಟರ್ ಮತ್ತು ಅಪ್ಪರ್ ವೈತರ್ಣ ಅಣೆಕಟ್ಟಿನಿಂದ 91,130 ಮಿಲಿಯನ್ ಲೀಟರ್‌ಗಳನ್ನು ಪಡೆಯುತ್ತದೆ. ಭಾರತೀಯ ಹವಾಮಾನ ಇಲಾಖೆಯು ಈ ವರ್ಷ ಮುಂಗಾರು ಸಕಾಲಿಕ ಆಗಮನದ ಮುನ್ಸೂಚನೆಯನ್ನು ನೀಡಿದ್ದು, ಮತ್ತಷ್ಟು ಭರವಸೆ ನೀಡಿದೆ. ನೀರು ಕಡಿತವು ಥಾಣೆ, ಭಿವಂಡಿ-ನಿಜಾಂಪುರ್ ಮತ್ತು BMC ಯಿಂದ ಸರಬರಾಜು ಮಾಡುವ ಸುತ್ತಮುತ್ತಲಿನ ಹಳ್ಳಿಗಳ ಮೇಲೂ ಪರಿಣಾಮ ಬೀರುತ್ತದೆ. ಸಾಕಷ್ಟು ಮಳೆಯು ನೀರಿನ ಸಂಗ್ರಹವನ್ನು ಮರುಪೂರಣಗೊಳಿಸುವವರೆಗೆ ಈ ಕಡಿತಗಳು ಜಾರಿಯಲ್ಲಿರುತ್ತವೆ.

BMC ನೀರು ಉಳಿಸಲು ಈ ಕೆಳಗಿನ ಅಭ್ಯಾಸಗಳನ್ನು ಪಾಲಿಸುವಂತೆ ಸೂಚಿಸಿದೆ.

-ಅಗತ್ಯವಿರುವಷ್ಟು ನೀರು ಮಾತ್ರ ಕುಡಿಯಿರಿ.
-ಸ್ನಾನಕ್ಕೆ ಶವರ್ ಬದಲಿಗೆ ಬಕೆಟ್ ಬಳಸಿ.
-ಹಲ್ಲುಜ್ಜುವಾಗ ಅಥವಾ ಮನೆಕೆಲಸ ಮಾಡುವಾಗ ಟ್ಯಾಪ್‌ ನೀರು ಬಳಸದಿರಿ.
-ವಾಹನಗಳನ್ನು ಸ್ವಚ್ಛಗೊಳಿಸಲು ಪೈಪ್‌ ಬದಲು ಬಕೆಟ್ ಮತ್ತು ಬಟ್ಟೆಯನ್ನು ಬಳಸಿ.
-ಮಹಡಿಗಳು ಮತ್ತು ಮೇಲ್ಮೈಗಳನ್ನು ತೊಳೆಯಲು ಸಹ ಬಟ್ಟೆಯನ್ನು ಬಳಸಿ.
-ನೀರಿನ ಹರಿವನ್ನು ಕಡಿಮೆ ಮಾಡಲು ಟ್ಯಾಪ್‌ಗಳಲ್ಲಿ ನಳಿಕೆಗಳನ್ನು ಸ್ಥಾಪಿಸಿ.

ಸರೋವರಗಳ ಊರಾಗಿದ್ದ ಬೆಂಗಳೂರಲ್ಲಿ 2025ರಲ್ಲಿ ನೀರೇ ಇರೋಲ್ವಾ!?

ಇದೆಲ್ಲದರ ಮಧ್ಯೆ, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ವಿನಂತಿಯ ಮೇರೆಗೆ ಮಾತ್ರ ನೀರು ಪೂರೈಸಲು ತಿಳಿಸಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನೀರು ಉಳಿಸುವ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನೀರಿನ ವ್ಯವಸ್ಥೆಗಳಲ್ಲಿನ ಸೋರಿಕೆಯನ್ನು ನಿಯಮಿತವಾಗಿ ಪರಿಶೀಲಿಸಲು ಮುಂಬೈ ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಮುಂಬೈನ ಜನರು ನೀರನ್ನು ಸಂರಕ್ಷಿಸಲು ಸಹಾಯ ಮಾಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!