TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?

TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?

Published : May 05, 2026, 04:30 PM IST

ತಮಿಳುನಾಡು ಮತ್ತು ಸಿನಿಮಾ ಹಾಗು ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮಿ ಪೊಲಿಟಿಕ್ಸ್​​ನಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಈಗ ನಟಿ ಜಯಲಲಿಯಾ ಹಾದಿಯಲ್ಲಿ..

ತಮಿಳುನಾಡು ಮತ್ತು ಸಿನಿಮಾ ಹಾಗು ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮಿ ಪೊಲಿಟಿಕ್ಸ್​​ನಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಈಗ ನಟಿ ಜಯಲಲಿಯಾ ಹಾದಿಯಲ್ಲಿ ನಟ ವಿಜಯ್​​ ಹೆಜ್ಜೆ ಇಟ್ಟಿದ್ದು, ಮುಂದೆ ತಮಿಳು ನಾಡು ರಾಜಕಾರಣ ಮತ್ತಷ್ಟು ರಂಗು ರಂಗಾರಿರಲಿದೆ. ತಮಿಳುನಾಡು ರಾಜಕಾರಣಲ್ಲಿ ಸಿನಿಮಾ ಉಸಿರಾಗಿ ಬೆರೆತು ಹೋಗಿದೆ. ಇಲ್ಲಿ ರಾಜಕೀಯ ಮಾಡಿಕೊಂಡು ಬಂದವರು ಆಡಳಿತ ನಡೆಸಿದ್ದಕ್ಕಿಂತ ಸಿನಿಮಾ ಮಾಡಿ ಹೆಸರು ಮಾಡಿ ರಾಜಕಾರಕ್ಕೆ ಬಂದವರು ಆಳಿದ್ದೇ ಹೆಚ್ಚು.. ಅವರಲ್ಲಿ ಕರುಣಾನಿಧಿ ಮೊದಲಿಗರು..

ಸಿನಿಮಾ ರಂಗದಲ್ಲಿ ರೈಟರ್​ ಕಮ್ ಆ್ಯಕ್ಟರ್ ಆಗಿದ್ದ ಕರುಣಾನಿಧಿ 1969ರಲ್ಲಿ ಡಿಎಂಕೆ ಪಕ್ಷವನ್ನ ಅಧಿಕಾರಕ್ಕೆ ತಂದು ಸಿಎಂ ಆದ್ರು. ಅಷ್ಟೊತ್ತಿಗಾಗಲೇ ಕರುಣಾನಿಧಿ ಹಿಂದೆಯೇ ಇದ್ದ ಸ್ಟಾರ್ ನಟ ಎಮ್​​ಜಿ ಆರ್​​. ಡಿಎಂಕೆ ಪಕ್ಷ ಸೇರಿಕೊಂಡು ರಾಜಕೀಯದ ಆಳ ಅಗಲ ತಿಳಿದಿದ್ರು. ಆದ್ರೆ ಡಿಎಂಕೆ ಜೊತೆ ವೈಮಸ್ಸು ಎಂಜಿಆರ್​​​ರನ್ನ A I A D M K ಪಕ್ಷ ಸ್ಥಾಪಿಸೋ ಹಾಗೆ ಮಾಡ್ತು. ಕೊನೆಗೆ 1977 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೂರು ಭಾರಿ ಸಿಎಂ ಪಟ್ಟಕ್ಕೇರಿದ್ರು. ಎಂಜಿಆರ್​​ ರಾಜಕಾ

ರಣದ ಜೊತೆ ಜೊತೆಗೆ ಬೆಸೆದು ಹೋಗಿದ್ದ ನಟಿ ಅಂದ್ರೆ ಅದು ಜಯಲಲಿತಾ. ಎಂಜಿಆರ್ ಹಾಗು ಜಯಲಲಿತಾ ಇಬ್ಬರೂ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟ ಸೂಪರ್​ ಜೋಡಿ. ಈ ಸ್ನೇಹ ಇಬ್ಬರಲ್ಲೂ ಸಂಬಂಧ ಗಟ್ಟಿ ಮಾಡಿತ್ತು. ಕೊನೆಗೆ ಎಂಜಿಆರ್​ ಜೊತೆ ಸೇರಿ ತಮಿಳುನಾಡು ರಾಜಕೀಯ ರಂಗ ಪ್ರವೇಶಕ್ಕೆ ನಾಂದಿ ಹಾಡಿದ್ರು ಜಯಲಲಿತಾ. ತಮಿಳಿಗರ ‘ಅಮ್ಮ’ನಾಗಿ ರಾಜ್ಯವಾಳಿದ್ರು. ಇದೀಗ ವಿಜಯ್ ಈ ದಿಗ್ಗಜರ ಸಾಲಿಗೆ ಬಂದು ನಿಂತಿದ್ದಾರೆ. ದಳಪತಿ ವಿಜಯ್ ಜಯಲಲಿತಾರ ಆಡಳಿತವನ್ನ ಹತ್ತಿರದಿಂದ ಕಂಡವರು.. ಜಯಲಲಿತಾರನ್ನ ಸಾಕಷ್ಟು ಭಾರಿ ಬೇಟಿ ಮಾಡಿದ್ದಾರೆ. ಜಯಲಲಿತಾ ಇರೋ ಅವರೆಗೂ ವಿಜಯ್ ಪೊಲಿಟಿಕ್ಸ್​ ಬಗ್ಗೆ ಆಸಕ್ತಿ ತೋರಿಸಿದವರೇ ಅಲ್ಲ. ಆದ್ರೆ ಈಗ ವಿಜಯ್​​​ ಸಂಪೂರ್ಣ ರಾಜಕಾರಣ ಶುರು ಮಾಡಿದ್ದಾರೆ. ಇಲ್ಲಿ ವಿಜಯ್ ಎಷ್ಟು ವರ್ಷ ರಾಜ್ಯಭಾರ ಮಾಡುತ್ತಾರೆ ಕಾದು ನೋಡಬೇಕಿದೆ. 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
Read more