TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?

TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?

Published : May 05, 2026, 04:30 PM IST

ತಮಿಳುನಾಡು ಮತ್ತು ಸಿನಿಮಾ ಹಾಗು ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮಿ ಪೊಲಿಟಿಕ್ಸ್​​ನಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಈಗ ನಟಿ ಜಯಲಲಿಯಾ ಹಾದಿಯಲ್ಲಿ..

ತಮಿಳುನಾಡು ಮತ್ತು ಸಿನಿಮಾ ಹಾಗು ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮಿ ಪೊಲಿಟಿಕ್ಸ್​​ನಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಈಗ ನಟಿ ಜಯಲಲಿಯಾ ಹಾದಿಯಲ್ಲಿ ನಟ ವಿಜಯ್​​ ಹೆಜ್ಜೆ ಇಟ್ಟಿದ್ದು, ಮುಂದೆ ತಮಿಳು ನಾಡು ರಾಜಕಾರಣ ಮತ್ತಷ್ಟು ರಂಗು ರಂಗಾರಿರಲಿದೆ. ತಮಿಳುನಾಡು ರಾಜಕಾರಣಲ್ಲಿ ಸಿನಿಮಾ ಉಸಿರಾಗಿ ಬೆರೆತು ಹೋಗಿದೆ. ಇಲ್ಲಿ ರಾಜಕೀಯ ಮಾಡಿಕೊಂಡು ಬಂದವರು ಆಡಳಿತ ನಡೆಸಿದ್ದಕ್ಕಿಂತ ಸಿನಿಮಾ ಮಾಡಿ ಹೆಸರು ಮಾಡಿ ರಾಜಕಾರಕ್ಕೆ ಬಂದವರು ಆಳಿದ್ದೇ ಹೆಚ್ಚು.. ಅವರಲ್ಲಿ ಕರುಣಾನಿಧಿ ಮೊದಲಿಗರು..

ಸಿನಿಮಾ ರಂಗದಲ್ಲಿ ರೈಟರ್​ ಕಮ್ ಆ್ಯಕ್ಟರ್ ಆಗಿದ್ದ ಕರುಣಾನಿಧಿ 1969ರಲ್ಲಿ ಡಿಎಂಕೆ ಪಕ್ಷವನ್ನ ಅಧಿಕಾರಕ್ಕೆ ತಂದು ಸಿಎಂ ಆದ್ರು. ಅಷ್ಟೊತ್ತಿಗಾಗಲೇ ಕರುಣಾನಿಧಿ ಹಿಂದೆಯೇ ಇದ್ದ ಸ್ಟಾರ್ ನಟ ಎಮ್​​ಜಿ ಆರ್​​. ಡಿಎಂಕೆ ಪಕ್ಷ ಸೇರಿಕೊಂಡು ರಾಜಕೀಯದ ಆಳ ಅಗಲ ತಿಳಿದಿದ್ರು. ಆದ್ರೆ ಡಿಎಂಕೆ ಜೊತೆ ವೈಮಸ್ಸು ಎಂಜಿಆರ್​​​ರನ್ನ A I A D M K ಪಕ್ಷ ಸ್ಥಾಪಿಸೋ ಹಾಗೆ ಮಾಡ್ತು. ಕೊನೆಗೆ 1977 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೂರು ಭಾರಿ ಸಿಎಂ ಪಟ್ಟಕ್ಕೇರಿದ್ರು. ಎಂಜಿಆರ್​​ ರಾಜಕಾ

ರಣದ ಜೊತೆ ಜೊತೆಗೆ ಬೆಸೆದು ಹೋಗಿದ್ದ ನಟಿ ಅಂದ್ರೆ ಅದು ಜಯಲಲಿತಾ. ಎಂಜಿಆರ್ ಹಾಗು ಜಯಲಲಿತಾ ಇಬ್ಬರೂ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟ ಸೂಪರ್​ ಜೋಡಿ. ಈ ಸ್ನೇಹ ಇಬ್ಬರಲ್ಲೂ ಸಂಬಂಧ ಗಟ್ಟಿ ಮಾಡಿತ್ತು. ಕೊನೆಗೆ ಎಂಜಿಆರ್​ ಜೊತೆ ಸೇರಿ ತಮಿಳುನಾಡು ರಾಜಕೀಯ ರಂಗ ಪ್ರವೇಶಕ್ಕೆ ನಾಂದಿ ಹಾಡಿದ್ರು ಜಯಲಲಿತಾ. ತಮಿಳಿಗರ ‘ಅಮ್ಮ’ನಾಗಿ ರಾಜ್ಯವಾಳಿದ್ರು. ಇದೀಗ ವಿಜಯ್ ಈ ದಿಗ್ಗಜರ ಸಾಲಿಗೆ ಬಂದು ನಿಂತಿದ್ದಾರೆ. ದಳಪತಿ ವಿಜಯ್ ಜಯಲಲಿತಾರ ಆಡಳಿತವನ್ನ ಹತ್ತಿರದಿಂದ ಕಂಡವರು.. ಜಯಲಲಿತಾರನ್ನ ಸಾಕಷ್ಟು ಭಾರಿ ಬೇಟಿ ಮಾಡಿದ್ದಾರೆ. ಜಯಲಲಿತಾ ಇರೋ ಅವರೆಗೂ ವಿಜಯ್ ಪೊಲಿಟಿಕ್ಸ್​ ಬಗ್ಗೆ ಆಸಕ್ತಿ ತೋರಿಸಿದವರೇ ಅಲ್ಲ. ಆದ್ರೆ ಈಗ ವಿಜಯ್​​​ ಸಂಪೂರ್ಣ ರಾಜಕಾರಣ ಶುರು ಮಾಡಿದ್ದಾರೆ. ಇಲ್ಲಿ ವಿಜಯ್ ಎಷ್ಟು ವರ್ಷ ರಾಜ್ಯಭಾರ ಮಾಡುತ್ತಾರೆ ಕಾದು ನೋಡಬೇಕಿದೆ. 

02:25AIADMK: ಎರಡೆಲೆ ಚಿಹ್ನೆಯ ಹಿಂದಿದೆ ಮೂಕಾಂಬಿಕೆ ಕಥೆ: ಈಗ ವಿಜಯ್ ಕೂಡ ದೇವಿಯ ಮೊರೆ!
03:36Kollur Mookambika ದೇವಿಗೆ ಖಡ್ಗವೇ ಯಾಕೆ ಅರ್ಪಿಸುತ್ತಾರೆ? ಇದರ ಹಿಂದಿದೆ ವಿಜಯದ ರಹಸ್ಯ!
15:12ಶುಕ್ರವಾರ ಮೂಕಾಂಬಿಕೆ ಸನ್ನಿಧಿಯಲ್ಲಿ Thalapathy Vijay: ಅಮ್ಮನ ಹರಕೆ.. ದೇವಿ ಪೂರೈಕೆ.. ದಳಪತಿ ದೇಗುಲ ದರ್ಶನ!
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
Read more