
ದಟ್ಟ ಕಾಡಿನಲ್ಲಿ ಗುಮ್ಮಗಳ ರೋಚಕ ಅಲೆದಾಟ, ಕರಡಿ ಗುಹೆ ಹುಡುಕಾಟದ ರೋಚಕತೆ ಜತೆಗೆ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಈ ಚಿತ್ರದ ಪೋಸ್ಟರ್ ಸಾಕಗಷ್ಟು ಗಮನ ಸೆಳೆಯುತ್ತಿದೆ.
ಸಿನಿಮಾ ಆಗುತ್ತಿದೆ ಮದನ್ ಪಟೇಲ್ರ 'ತಮಟೆ' ಕಾದಂಬರಿ!
ಗುಮ್ಮ ಇಸ್ ವಾಚಿಂಗ್ ಎನ್ನುವ ಉಪ ಶೀರ್ಷಿಕೆಯೊಂದಿಗೆ ಪೋಸ್ಟರ್ಬಿಡುಗಡೆ ಯಾಗಿದ್ದು , ಪೋಸ್ಟರ್ನಲ್ಲಿರುವ ಐವರು ವ್ಯಕ್ತಿಗಳಲ್ಲೇ ಯಾರೋ ಒಬ್ಬರು ಗುಮ್ಮ ಇರಬಹುದೇ ಅಥವಾ
ಇನ್ಯಾರೋ ಬೇರೆ ಇದ್ದಾರೆಯೇ ಎಂಬ ಕುತೂಹಲವನ್ನು ಮೂಡಿಸುತ್ತಿದೆ.
ಅಯ್ಯೋ! ರಾಧಾ ಮಿಸ್ಗೆ ಟೂ ಬಿಟ್ಟು ಶಾನ್ವಿ ಹಿಂದೆ ಹೊರಟೇ ಬಿಟ್ರು ರಮಣ್!
ನಿಗೂಢವಾಗಿಯೇ ಉಳಿದಿರುವ, ಯಾರ ಕಣ್ಣಿಗೂ ಕಂಡಿರದ ಕರಡಿ ಗುಹೆಯನ್ನು ಅನ್ವೇಷಣೆಗೆ ಹೊರಟ ಐವರು ಸ್ನೇಹಿತರು, ದಟ್ಟ ಕಾನನದಲ್ಲಿ ಅವರ ಎದುರು ಅನಾವರಣಗೊಳ್ಳುವ ಮನುಷ್ಯನ ವಿವಿಧ ಮುಖಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಈ ಚಿತ್ರದ ಮುಖ್ಯ ಪಾತ್ರದಾರಿ ಪೋಸ್ಟರ್ನಲ್ಲಿದ್ದು ಭಾವನಾತ್ಮಕತೆ ಎದ್ದು ಕಾಣುವಂತಿದೆ. ಇದು ಗುಮ್ಮದ ಅಸ್ತಿತ್ವ ಹಾಗೂ ಇನ್ನಿತರ ಅಪರಿಚಿತ ವ್ಯಕ್ತಿಗಳ ಇರುವಿಕೆಯ ಸಾಧ್ಯತೆಯನ್ನು ತೋರಿಸುತ್ತದೆ ಎಂಬುದು ನಿರ್ದೇಶಕರು ಪೋಸ್ಟರ್ ಕುರಿತು ಹೇಳುವ ಮಾತು.
ಸರವಣ ಸಂಗೀತ, ಗೋವಿಂದ್ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಸಾಹಿತಿ, ಪತ್ರಕರ್ತ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮನರೂಪ ಚಿತ್ರ ತೆರೆ ಮೇಲೆ ಮೂಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.