ಸಿನಿಮಾ ಆಗುತ್ತಿದೆ ಮದನ್ ಪಟೇಲ್‌ರ 'ತಮಟೆ' ಕಾದಂಬರಿ!

Published : Aug 19, 2019, 02:14 PM IST
ಸಿನಿಮಾ ಆಗುತ್ತಿದೆ ಮದನ್ ಪಟೇಲ್‌ರ 'ತಮಟೆ' ಕಾದಂಬರಿ!

ಸಾರಾಂಶ

ನಟ ಮಯೂರ್ ಪಟೇಲ್ ಬಹುದಿನಗಳ ನಂತರ ಕಾಣಿಸಿಕೊಂಡಿದ್ದು, ನಟನೆಯ ಬದಲಿಗೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಈ ಚಿತ್ರದ ಹೆಸರು ‘ತಮಟೆ’.  

ಮಯೂರ್ ಪಟೇಲ್‌ತಂದೆ ಮದನ್ ಪಟೇಲ್ ಪ್ರಮುಖ ಪಾತ್ರಧಾರಿ. ನಟ, ನಿರ್ಮಾಪಕ ಮದನ್ ಪಟೇಲ್ ಬರೆದ ‘ತಮಟೆ’ ಕಾದಂಬರಿಯನ್ನಾಧರಿಸಿ ತಯಾರಾದ ಚಿತ್ರವಿದು. ಇದು ತಮಟೆ ಬಾರಿಸುವ ಬಡ ಮುನಿಯನ ಬದುಕಿನ ಕತೆ. ತಮಟೆ ಬಾರಿಸುವುದನ್ನೇ ನಂಬಿಕೊಂಡು ಬದುಕುತ್ತಿದ್ದ ಮುನಿಯನ ಬದುಕಿಗೆ ಆಧುನಿಕತೆ ಹೇಗೆಲ್ಲ ಸವಾಲಾಯಿತು ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಮಯೂರ್ ಪಟೇಲ್.

ಅಯ್ಯೋ! ರಾಧಾ ಮಿಸ್‌ಗೆ ಟೂ ಬಿಟ್ಟು ಶಾನ್ವಿ ಹಿಂದೆ ಹೊರಟೇ ಬಿಟ್ರು ರಮಣ್!

ಕಾದಂಬರಿಯನ್ನಾಧರಿಸಿ ತಯಾರಾದ ಚಿತ್ರವಿದು. ಇದು ತಮಟೆ ಬಾರಿಸುವ ಬಡ ಮುನಿಯನ ಬದುಕಿನ ಕತೆ. ತಮಟೆ ಬಾರಿಸುವುದನ್ನೇ ನಂಬಿಕೊಂಡು ಬದುಕುತ್ತಿದ್ದ ಮುನಿಯನ ಬದುಕಿಗೆ ಆಧುನಿಕತೆ ಹೇಗೆಲ್ಲ ಸವಾಲಾಯಿತು ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಮಯೂರ್ ಪಟೇಲ್.

 

‘ಅಪ್ಪ ಬರೆದಿದ್ದ ಈ ಕಾದಂಬರಿಯ ಪ್ರತಿಗಳು ಮಾರಾಟವಾಗಿವೆ. ಅದನ್ನು ಓದಿದ ನಂತರ ಬಡ ಮುನಿಯನ ಪಾತ್ರ ತೀವ್ರವಾಗಿ ಕಾಡಿತ್ತು. ಅದನ್ನೇ ಆಧರಿಸಿ ಸಿನಿಮಾ ಮಾಡಲು ನಿರ್ಧರಿಸಿದೆ. ಮುನಿಯ ಪಾತ್ರಕ್ಕೆ ಯಾರು ಕಲಾವಿದ ಅಂತ ಯೋಚಿಸುತ್ತಿದ್ದಾಗ ನನ್ನ ತಲೆಗೆ ಬಂದಿದ್ದು ತಂದೆ ಮದನ್ ಪಟೇಲ್.ಅವರು ಕೂಡ ಮೂಲತಃ ವಾದ್ಯ ನುಡಿಸುತ್ತಾ ಬಂದವರು. ಅದರಲ್ಲೂ ತಮಟೆ ಬಾರಿಸುವುದು ಅವರಿಗೆ ಗೊತ್ತಿತ್ತು. ಹಾಗಾಗಿ ನೀವೇ ಸೂಕ್ತ ಅಂತ ಹೇಳಿ, ನಿರ್ದೇಶನಕ್ಕಿಳಿಯುತ್ತಿದ್ದೇನೆ’ ಎನ್ನುವ ಮಾತು ನಟ ಮಯೂರ್ ಪಟೇಲ್ ಅವರದ್ದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?