ಶುರುವಾಗಲಿದೆ ಅಣ್ಣ ತಂಗಿಯ ಬಾಂಧವ್ಯ ಸಾರುವ 'ರಕ್ಷಾ ಬಂಧನ'!

Published : Jul 22, 2019, 09:48 AM ISTUpdated : Jul 22, 2019, 02:11 PM IST
ಶುರುವಾಗಲಿದೆ ಅಣ್ಣ ತಂಗಿಯ ಬಾಂಧವ್ಯ ಸಾರುವ 'ರಕ್ಷಾ ಬಂಧನ'!

ಸಾರಾಂಶ

ಅಣ್ಣತಂಗಿಯ ಕತೆಗಳು ಎವರ್‌ಗ್ರೀನ್‌. ಕನ್ನಡ ಸಿನಿಮಾಗಳಲ್ಲಂತೂ ಇದು ಸುಪ್ರಸಿದ್ಧ. 1958ರಲ್ಲಿ ಡಾ. ರಾಜ್‌ಕುಮಾರ್‌ ಅಭಿನಯಿಸಿರುವ ಅಣ್ಣತಂಗಿ ಸಿನಿಮಾವಾಗಲೀ 2005ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್‌- ರಾಧಿಕಾ ಜೋಡಿಯ ಅಣ್ಣತಂಗಿ ಸಿನಿಮಾವಾಗಲೀ, ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವಂಥ ಚಿತ್ರಗಳೇ. ಈ ನಡುವೆ ಇದೇ ಎಳೆಯನ್ನು ಸಾರುವ ಹತ್ತು ಹಲವು ಸಿನಿಮಾಗಳು ಬಂದು ಹೋಗಿವೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ರಂಜಿಸಿರುವಂಥವೇ.

ಸಿನಿಮಾದಲ್ಲಿ ಜನಪ್ರಿಯವಾಗಿರುವ ಈ ಕತೆಯನ್ನು ಕಿರುತೆರೆಗೆ ತಂದಿರುವ ಉದಾಹರಣೆಗಳು ಕಡಿಮೆ. ಅಣ್ಣನ ಸುಖ ಸಂತೋಷಕ್ಕಾಗಿ ಸದಾ ಹಂಬಲಿಸುವ ತಂಗಿ, ತಂಗಿಯ ಶ್ರೇಯಸ್ಸಿಗಾಗಿ ಹಾತೊರೆಯುವ ಅಣ್ಣ, ಒಬ್ಬರಿಗೊಬ್ಬರ ಮಾಡುವ ತ್ಯಾಗ, ಈ ಮಧ್ಯೆ ಉಂಟಾಗುವ ನೋವು, ನಲಿವು- ಇವೆಲ್ಲವೂ ಟೆಲಿವಿಷನ್‌ ಧಾರಾವಾಹಿಗೆ ಹೇಳಿ ಮಾಡಿಸಿದಂಥ ದೃಶ್ಯಗಳು. ವೀಕ್ಷಕರಿಗೆ ಸದಾ ಏನಾದರೂ ಹೊಸತನ್ನು ಕೊಡಲು ಹಂಬಲಿಸುವ ಕಲರ್ಸ್‌ ಕನ್ನಡದ ತಂಡ ಇದೀಗ ರಕ್ಷಾಬಂಧನ’ ಎನ್ನುವ ಆಕರ್ಷಕ ಅಣ್ಣತಂಗಿ ಕತೆಯನ್ನು ಸಿದ್ಧಪಡಿಸಿದೆ.

'ಪದ್ಮಾವತಿ' ಜಪ ಮಾಡಿದ್ಲು ಪದ್ದು; ಹುಡುಗರು ಜಪ ಮಾಡಿದ್ದು ಇವರದ್ದು!

ಜುಲೈ 22ರಿಂದ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಕಾರ್ತಿಕ್‌ ಮತ್ತು ನಂದಿನಿ ಎಂಬ ಅಣ್ಣತಂಗಿಯರ ಕತೆ ಇದು. ಅಣ್ಣನ ಮದುವೆ ಮೊದಲಾಗಲಿ ಎಂದು ಬಯಸುವ ತಂಗಿ, ತಂಗಿಯ ಕಲ್ಯಾಣವಾಗದೆ ನನ್ನ ಜೀವನದಲ್ಲಿ ಏನೂ ಇಲ್ಲ ಎನ್ನುವ ಅಣ್ಣ- ಹೀಗಿರುವ ಸೋದರ ಸೋದರಿಯರ ಮದುವೆ ಅವರಿಬ್ಬರ ಜೀವನದಲ್ಲಿ ಎಂಥ ಬದಲಾವಣೆ ತರುತ್ತದೆ ಎಂಬುದೇ ಕತೆಯ ತಿರುಳು.

ಬಹಳ ದಿನಗಳ ನಂತರ ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಧಾರಾವಾಹಿಯೊಂದರ ಶೀರ್ಷಿಕೆ ಗೀತೆ ಹಾಡಿದ್ದಾರೆ. ಈ ಗೀತೆಯನ್ನು ರೋಹಿತ್‌ ಪದಕಿ ಅವರು ಬರೆದಿದ್ದಾರೆ ಹಾಗೂ ಬಿಗ್ ಬಾಸ್ , ಗಾಂಧಾರಿ ಖ್ಯಾತಿಯ ಜಗನ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಅಣ್ಣತಂಗಿಯರ ನಡುವಿನ ಮಮತೆ, ವಾತ್ಸಲ್ಯಗಳು ಮತ್ತು ಅವರ ಮದುವೆ ಪರಸ್ಪರರ ಜೀವನದಲ್ಲಿ ಯಾವ ಬದಲಾವಣೆ ತರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಇದು. ಈ ಕತೆ ವಿಶೇಷವಾಗಿ ನನಗೆ ತುಂಬಾ ಖುಷಿ ಕೊಟ್ಟಿದೆ. ಇದು ಧಾರಾವಾಹಿ ನೋಡುಗರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ನನ್ನದು ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌.

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

ಅತ್ಯುತ್ತಮ ತಾರಾಗಣ, ಎಂದಿನಂತೆ ಕಲರ್ಸ್‌ ಕನ್ನಡದ ಧಾರಾವಾಹಿಗಳಲ್ಲಿ ಕಾಣುವ ಶ್ರೇಷ್ಠ ಗುಣಮಟ್ಟ- ಹೀಗೆ ಕುಟುಂಬ ಸಮೇತ ನೋಡುವ ಧಾರಾವಾಹಿಯಾಗಿ ರಕ್ಷಾಬಂಧನ ಸಿದ್ಧವಾಗಿದೆ. ಈಗ ಕನ್ನಡ ಕಿರುತೆರೆಯಲ್ಲಿ ರಾರಾಜಿಸುತ್ತಿರವ ಕತೆಗಳಿಗಿಂತ ತೀರಾ ಭಿನ್ನವಾಗಿರುವ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಾರುವ ಈ ಧಾರಾವಾಹಿ ಜನ ಮೆಚ್ಚುಗೆ ಗಳಿಸುವುದರಲ್ಲಿ ಅನುಮಾನವಿಲ್ಲ,

ಹಾಗಾದರೆ ಜುಲೈ 22ರಿಂದ ರಾತ್ರಿಯ ಊಟ ಈ ಅಣ್ಣತಂಗಿಯ ಜೊತೆಗೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!