
ಮೂರು ತಿಂಗಳ ಹಿಂದೆ ಹೆತ್ತು ಹೊತ್ತು ಆಡಿಸಿದ ಅಮ್ಮನೇ ಪ್ರಿಯಕರನಿಗಾಗಿ ಮಗುವಿನ ಉಸಿರು ನಿಲ್ಲಿಸಿದ್ಲು.. ನಂತರ ಅಮಾಯಕಳಂತೆ ನಾಟಕವಾಡಿದ್ರು.. ಆದ್ರೆ ಅಪ್ಪನ ಹೋರಾಟ ಇವತ್ತು ಕೊಲೆಗಾರರ ನಿಜ ಬಣ್ಣ ಬಯಲಾಗಿದೆ.
ಮೂರು ತಿಂಗಳ ಹಿಂದೆ ಹೆತ್ತು ಹೊತ್ತು ಆಡಿಸಿದ ಅಮ್ಮನೇ ಪ್ರಿಯಕರನಿಗಾಗಿ ಮಗುವಿನ ಉಸಿರು ನಿಲ್ಲಿಸಿದ್ಲು.. ನಂತರ ಅಮಾಯಕಳಂತೆ ನಾಟಕವಾಡಿದ್ರು.. ಆದ್ರೆ ಅಪ್ಪನ ಹೋರಾಟ ಇವತ್ತು ಕೊಲೆಗಾರರ ನಿಜ ಬಣ್ಣ ಬಯಲಾಗಿದೆ. ಪ್ರಿಯಾಂಕಾಳ ಪ್ರಿಯಕರ ಅಂದರ್ ಆಗಿದ್ದಾನೆ.. ಆದ್ರೆ ಪೊಲೀಸರ ತನಿಖೆಯಲ್ಲಿ ಈ ಪ್ರಿಯಕರ ಶಾಕಿಂಗ್ ಮಾಹಿತಿಗಳನ್ನ ಹೊರಹಾಕಿದ್ದಾನೆ.. ಆ ಮಗುವನ್ನ ಯಾಕೆ..? ಹೇಗೆ ಕೊಂದ್ರು ಅನ್ನೋದನ್ನ ಡಿಟೇಲಾಗಿ ಹೇಳಿದ್ದಾನೆ.. ಅಷ್ಟೇ ಅಲ್ಲ ಪ್ರಿಯಾಂಕ ಮತ್ತು ಈತನ ಲವ್ ಸ್ಟೋರಿ ಬಗ್ಗೆ ಕೂಡ ಬಾಯಿಬಿಟ್ಟಿದ್ದಾನೆ.. ಹಾಗಾದ್ರೆ ಮಗುವನ್ನ ಅಮ್ಮನೇ ಕೊಂದ ಕೇಸ್ಗೆ ಸಿಕ್ಕಿರೋ ಹೊಸ ಟ್ವಿಸ್ಟ್ ಏನು.?
ಈ ಕೇಸ್ ಸಂಬಂಧ ಇರೋ ಹೊಸ ಅಪ್ಡೇಟ್ಸ್ ಏನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. ಆವತ್ತು ಪ್ರವೀಣ್ ಆಗಿದ್ದಾಗ್ಲಿ ಅಂತ ಮಗಳನ್ನ ಕರೆದುಕೊಂಡು ಬಂದುಬಿಟ್ಟಿದ್ದಿದ್ರೆ ಇವತ್ತು ಆ ಮಗು ಸುರಕ್ಷಿತವಾಗಿ ಅಪ್ಪನ ಜೊತೆ ಆಟವಾಡಿಕೊಂಡು ಇರುತ್ತಿತ್ತು.. ಆದ್ರೆ ಈ ಮನೆಹಾಳ್ ಅಮ್ಮ ಅದಕ್ಕೂ ಅವಕಾಶ ಕೊಡಲಿಲ್ಲ.. ತನ್ನ ಗೆಳೆಯನನ್ನ ಜೊತೆ ಸೇರಿಕೊಂಡು ಆ ಮುದ್ದು ಕಂದಮ್ಮನನ್ನ ಕೊಂದುಬಿಟ್ಟಿದ್ದಾಳೆ.. ಅಷ್ಟಕ್ಕೂ ಆ ಮಗುವನ್ನ ಈ ಕಿರಾತಕರು ಹೇಗೆ ಕೊಂದ್ರು..? ಮಗು ಕೊಂದು ಅವರು ಮಾಡಿದ ನಾಟಕ ಎಂಥದ್ದು..? ಕೆಟ್ಟ ಅಪ್ಪ ಇರ್ತಾನೆ.. ಕೆಟ್ಟ ಅಮ್ಮ ಇರೋದಿಲ್ಲ ಅಂತ ಹೇಳ್ತಾರೆ.. ಅದ್ರೆ ಇಲ್ಲಿ ಎಲ್ಲವೂ ಉಲ್ಟಾ... ಗಂಡನ ಮೇಲಿನ ಕೋಪಕ್ಕೆ, ಪ್ರೀಯಕರನ ಮೇಲಿನ ಮೋಹಕ್ಕೆ ಇವತ್ತು ತಾಯಿಯೇ ಹೆತ್ತ ಮಗುವನ್ನ ಕೊಂದುಬಿಟ್ಟಿದ್ದಾಳೆ.
ಆವತ್ತು ಮಗುವನ್ನ ಕರೆದುಕೊಂಡು ಹೊರಗೆ ಹೋಗಿದ್ದಾರೆ.. ಬಿರಿಯಾನಿ ತಿನ್ನಸಿ ಮನೆಗೆ ಬಂದಿದ್ದಾರೆ.. ನಂತರ ಪ್ರಿಯಾಂಕ ಶಾಪಿಂಗ್ಗೆ ಅಂತ ಹೊರಗೆ ಹೋಗಿದ್ದಾಳೆ.. ಈ ಟೈಂನಲ್ಲಿ ಆ ಮಗು ಮೋಹನನ ಬಳಿ ಐಸ್ಕ್ರೀಮ್ ಕೇಳಿದೆ.. ಅಷ್ಟೇ ಈ ಪಾಪಿ ಆ ಮಗುವಿನ ಹೊಟ್ಟೆಗೆ ಒದ್ದೇಬಿಟ್ಟಿದ್ದಾನೆ.. ಆ ಮಗು ಅಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದೆ.. ನಂತರ ತಾಯಿ ಮನೆಗೆ ಬಂದು ನೋಡಿದ್ರೆ ಮಗು ಬದುಕಿಲ್ಲ.. ಈ ಟೈಂನಲ್ಲಿ ರಾಂಗ್ ಆಗಬೇಕಿದ್ದ ಪ್ರಿಯಾಂಕ.. ಪ್ರಿಯಕರನ ಜೊತೆ ಸೇರಿ ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಪ್ಲಾನ್ ಮಾಡಿದ್ಲು. ದೇವರು ಇದ್ದಾನೆ ಅನ್ನೋದು ನಿಜವಾದ್ರೆ ಈಕೆ ಮಾಡಿರೋ ತಪ್ಪಿಗೆ ತಕ್ಕ ಶಿಕ್ಷೆಯಾಗಲೇಬೇಕು.. ಏನೂ ಅರಿಯದ ಆ ಕಂದಮ್ಮನ ಸಾವಿಗೆ ನ್ಯಾಯ ಕೊಡಿಸಬೇಕು.. ಇಲ್ಲವಾದ್ರೆ ಈ ಪ್ರಿಯಾಂಕಳನಂತವರು ಮತ್ತಷ್ಟು ಜನ ಹುಟ್ಟಿಕೊಳ್ತಾರೆ.