ಆದಿಪುರುಷ್​ ಪಾರ್ಟ್​-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್​- ರಾಧಿಕಾ ಜೋಡಿ

Published : Jun 23, 2023, 09:04 AM ISTUpdated : Jun 24, 2023, 11:23 AM IST
ಆದಿಪುರುಷ್​ ಪಾರ್ಟ್​-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್​- ರಾಧಿಕಾ ಜೋಡಿ

ಸಾರಾಂಶ

ಆದಿಪುರುಷ್​ ಚಿತ್ರದ ಗಲಾಟೆ ಬೆನ್ನಲ್ಲೇ ನಟರಾದ ಯಶ್​-ರಾಧಿಕಾ ಪಂಡಿತ್​ ಜೋಡಿ ರಾಮ-ಸೀತೆಯಾಗಿ ಮಿಂಚುತ್ತಿರೋ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.   

ಈಗ ಎಲ್ಲೆಲ್ಲೂ ಆದಿಪುರುಷ್ (Adipurush) ಚಿತ್ರದ್ದೇ ಮಾತು. ನೆಗೆಟಿವ್​ ಕಮೆಂಟ್​ಗಳ ಸುರಿಮಳೆ ಒಂದೆಡೆಯಾದರೆ, ಇದನ್ನು ಬ್ಯಾನ್​ ಮಾಡುವಂತೆ  ಕೋರ್ಟ್​ ಬಾಗಿಲಿಗೂ ಹೋಗಿಯಾಗಿದೆ. ಜನರು ಮಾತ್ರವಲ್ಲದೇ ರಾಮಾಯಣ- ಮಹಾಭಾರತದ ಹಲವಾರು ಧಾರಾವಾಹಿಗಳಲ್ಲಿ ವಿವಿಧ ಪಾತ್ರಧಾರಿಗಳಾಗಿದ್ದವರೂ ಆದಿಪುರುಷ್​ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಶ್ರೀರಾಮ ಹಾಗೂ ಹನುಮಾನ್‌ಗೆ ಅಪಮಾನ ಮಾಡಲಾಗಿದೆ. ಸಂಭಾಷಣೆ ಕೀಳು ಮಟ್ಟದಲ್ಲಿದೆ ಸೇರಿದಂತೆ, ಎಲ್ಲಾ ಪಾತ್ರಗಳನ್ನು ವಿಚಿತ್ರವಾಗಿ ಸೃಷ್ಟಿಸಲಾಗಿದೆ. ಅದರಲ್ಲಿಯೂ ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಅವರನ್ನು ನೋಡಲು ಸಾಧ್ಯವೇ ಇಲ್ಲ, ಈ ಚಿತ್ರಕ್ಕೆ ಪ್ರಭಾಸ್​ ಅವರು ರಾಮನಾಗಿರುವುದು ತಮಗೆ ಸ್ವಲ್ಪವೂ ಇಷ್ಟವಿಲ್ಲ... ಹೀಗೆ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.  ರಾಮಾಯಣ ಧಾರಾವಾಹಿಯ ಸೀತೆಯ ಪಾತ್ರಧಾರಿ ದೀಪಿಕಾ, ಮಹಾಭಾರತ ನಟ ಗಜೇಂದ್ರ ಚೌಹ್ಹಾಣ್ ಸೇರಿದಂತೆ ಹಲವು ಪೌರಾಣಿಕ ಪಾತ್ರಧಾರಿಗಳೂ ಆದಿಪುರುಷ್ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಹಿಂದೂಗಳು ಪ್ರತಿಭಟನೆ ಮಾಡುತ್ತಿದ್ದಾರೆ. 

ಇದೆಲ್ಲದರ ನಡುವೆ ​ ಇದೀಗ ಯಶ್​-ರಾಧಿಕಾ (Yash-Radhika Pandith) ಪಂಡಿತ್​ ಕ್ಯೂಟ್​ ಕಪಲ್​ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸುದ್ದಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿಯ ಬಗ್ಗೆ ಹೇಳುವ ಮಾತೇ ಇಲ್ಲ. ಇವರು  ಸ್ಯಾಂಡಲ್​ವುಡ್​ನ ಸಕತ್​ ಫೇಮಸ್ ಜೋಡಿ. ಮೊದಲು ಚಿತ್ರರಂಗದಲ್ಲಿ ಜೋಡಿಯಾದವರು ನಂತರ ತೆರೆಯ ಹಿಂದೆಯೂ ಜೋಡಿಯಾಗಿ ಇಬ್ಬರು ಮುದ್ದು ಮಕ್ಕಳ ಪಾಲಕರೂ ಆಗಿದ್ದಾರೆ. ಆದಿಪುರುಷ್​ ಗಲಾಟೆ ಬೆನ್ನಲ್ಲೆ ಈಗ ಯಶ್​-ರಾಧಿಕಾ ಜೋಡಿ ಸದ್ದು ಮಾಡುತ್ತಿದೆ. ಆದಿಪುರುಷ್​ಗೂ, ಈ ಜೋಡಿಗೂ ಏನಪ್ಪಾ ಸಂಬಂಧ ಎಂದು ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ.

ಬಟ್ಟೆ ಬದಲಿಸಿದ ವಿಭೀಷಣನ ಪತ್ನಿ: ಆದಿಪುರುಷನೋ, ಕಾಮಸೂತ್ರವೋ ಇದು ಎಂದು ನೆಟ್ಟಿಗರು ಗರಂ!

ಈಗ ಏನಿದ್ದರೂ ಎಡಿಟೆಡ್​ (edited) ಯುಗ. ಇರುವ ಮೂಲ ಚಿತ್ರವನ್ನು ಹಲವು ರೀತಿಯ ತಂತ್ರಾಂಶ ಬಳಿಕ ಎಡಿಟ್​ ಸುಲಭದಲ್ಲಿ ಮಾಡಬಹುದು. ಅದೇ ರೀತಿ ಆದಿಪುರುಷ್​ನಲ್ಲಿ ಸೀತೆ-ರಾಮನ ಪಾತ್ರವನ್ನೇ ಹೋಲುವಂತೆ ಯಶ್​-ರಾಧಿಕಾರನ್ನು ಸೀತೆ-ರಾಮ ಪಾತ್ರವನ್ನಾಗಿ ಎಡಿಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ. ಇಬ್ಬರೂ ಕಾವಿ ಧರಿಸಿ ರಾಮ ಸೀತೆಯಂತೆ ಕಾಣಿಸಿಕೊಂಡಿದ್ದಾರೆ. ಆದಿಪುರುಷ್​ ಗಲಾಟೆ ಏನೇ ಇದ್ದರೂ ಈ ಕ್ಯೂಟ್​ ಜೋಡಿಯನ್ನು ಮಾತ್ರ ಜನರು ಅದರಲ್ಲಿಯೂ ಯಶ್​-ರಾಧಿಕಾ (Yash-Radhika) ಫ್ಯಾನ್ಸ್​ ಸಕತ್​ ಇಷ್ಟಪಡುತ್ತಿದ್ದಾರೆ. ಆದಿಪುರುಷ್​ ಪಾರ್ಟ್​-2 ಎನ್ನುತ್ತಿದ್ದಾರೆ ನೆಟ್ಟಿಗರು. ಆದಿಪುರುಷ್​ ಪಾರ್ಟ್​ 1 ಫ್ಲಾಪ್​ ಆದ್ರೂ ಪಾರ್ಟ್​-2 ಸಕತ್​ ಹಿಟ್​ ಆಗಲಿದೆ ಎನ್ನುತ್ತಿದ್ದಾರೆ. 


  
ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಸದ್ಯ ರಾಧಿಕಾ ಸಿನಿ ರಂಗದಿಂದ ದೂರವಿದ್ದು, ಮಕ್ಕಳ ಲಾಲನೆ ಪೋಷಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ಅವರು ಆಗಾಗ್ಗೆ ಕೆಲವೊಂದು ವಿಷಯಗಳನ್ನು ಹಾಗೂ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಇರುತ್ತಾರೆ. ಇನ್ನು ಯಶ್​ ಕುರಿತು ಹೇಳುವುದಾದರೆ, ಇವರ ಮುಂದಿನ ಸಿನಿಮಾ ಕುರಿತು ಸಾಕಷ್ಟು ಕುತೂಹಲವಿದೆ. ಮೈಸೂರಿನ ನಂಜನಗೂಡು (Nanjangudu) ಶ್ರೀಕಂಠೇಶ್ವರನ ಸನ್ನಿಧಿಗೆ ಭೇಟಿ ನೀಡಿದ್ದ ಯಶ್​, ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತಾಡಿದ್ದರು. ಶೀಘ್ರದಲ್ಲೇ ಹೊಸ ಚಿತ್ರದ  ಘೋಷಣೆ ಮಾಡುವುದಾಗಿ ಯಶ್​ ಹೇಳಿದ್ದರಿಂದ ಫ್ಯಾನ್ಸ್​ ಕಾತರರಾಗಿದ್ದಾರೆ. ಇವರು  ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ನಂತರ  ರಾಮಾಯಣ ಸಿನಿಮಾದಲ್ಲಿ ರಾವಣನಾಗುತ್ತಾರೆ ಎನ್ನೋ ಮಾತೂ ಇದ್ದು, ಸದ್ಯ ಅವರ ನಡೆ ಸೀಕ್ರೇಟ್​ ಆಗಿ ಉಳಿದಿದೆ. ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುವವರಿಗೆ ಉತ್ತರವಾಗಿ ಈ ರಾಕಿಂಗ್ ಸ್ಟಾರ್​,  ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ನಾವು ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು ಎಂದು ಹೇಳುವ ಮೂಲಕ ಭರ್ಜರಿ ಚಿತ್ರವನ್ನು ಕೊಡಲಿದ್ದಾರೆ ಎಂದು ಹಿಂಟ್​ ಕೊಟ್ಟಿದ್ದಾರೆ.

ಆದಿಪುರುಷ್‌ ವಿವಾದದ ಬೆನ್ನಲ್ಲೇ ಪ್ರತ್ಯಕ್ಷಳಾದ ರಾಮಾಯಣದ ಸೀತೆ! ನಟಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್