ಸಲ್ಮಾನ್ ಖಾನ್‌ನ ಕೊಂದೇ ತೀರುತ್ತೇವೆ: ಸುದ್ದಿವಾಹಿನಿ ಮೂಲಕ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಹಿರಂಗ ಕೊಲೆ ಬೆದರಿಕೆ

By Shruthi KrishnaFirst Published Jun 27, 2023, 11:13 AM IST
Highlights

ಸಲ್ಮಾನ್ ಖಾನ್‌ನ ಕೊಂದೇ ತೀರುತ್ತೇವೆ ಎಂದು ಗ್ಯಾಂಗ್‌ಸ್ಟಾರ್ ಸುದ್ದಿವಾಹಿನಿ ಮೂಲಕ ಗೋಲ್ಡಿ ಬ್ರಾರ್ ಬಹಿರಂಗವಾಗಿ ಬಹಿರಂಗ ಕೊಲೆ ಬೆದರಿಕೆ ಹಾಕಿದ್ದಾರೆ. 

ಬಾಲಿವುಡ್ ನಟ ಸಲ್ಮಾನ್​ ಖಾನ್​ ಅವರಿಗೆ ಪದೇ ಪದೇ ಕೊಲೆ ಬೆದರಿಕೆ ಬರುತ್ತಿದೆ. ಲಾರೆನ್ಸ್​ ಬಿಷ್ಣೋಯ್​ ಕಡೆಯಿಂದ ಹಲವು ಬಾರಿ ಜೀವ ಬೆದರಿಕೆ ಬಂದಿತ್ತು. ಬಳಿಕ ಸಲ್ಮಾನ್ ಖಾನ್ ತನ್ನ ಭದ್ರತೆ ಹೆಚ್ಚಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕೊಲೆ ಬೆದರಿಕೆ ಬಂದಿದ್ದು, ರಾಷ್ಟ್ರೀಯ ಸುದ್ದಿ ವಾಹಿನಿಯ ಸಂದರ್ಶನದಲ್ಲೇ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಗ್ಯಾಂಗ್​ಸ್ಟರ್​ ಗೋಲ್ಡಿ ಬ್ರಾರ್​, ಸಲ್ಮಾನ್​ ಖಾನ್ ಹತ್ಯೆಯ ಪ್ಲ್ಯಾನ್​ ಬಹಿರಂಗ ಪಡಿಸಿದ್ದಾರೆ. ಇದು ಸಲ್ಮಾನ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 

ಮೋಸ್ಟ್​ ವಾಂಟೆಂಡ್​ ಕ್ರಿಮಿನಲ್​ ಆಗಿರುವ ಗೋಲ್ಡಿ ಬ್ರಾರ್​ ಜೊತೆಗಿನ ಫೋನ್​ ಸಂದರ್ಶನದಲ್ಲಿ ಸಲ್ಮಾನ್​ ಖಾನ್​ ಬಗ್ಗೆ ಮಾತನಾಡಿದ್ದಾನೆ. ‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲೆ ಮಾಡುತ್ತೇವೆ’ ಎಂದು ಗೋಲ್ಡಿ ಶಪಥ ಮಾಡಿದ್ದಾನೆ. 

Latest Videos

‘ಸಲ್ಮಾನ್​ ಖಾನ್​ನನ್ನು ಕೊಲ್ಲುತ್ತೇವೆ. ಆತ ಬಿಷ್ಣೋಯ್​ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ನಾವು ಪವಿತ್ರವೆಂದು ತಿಳಿಯುವ ಕೃಷ್ಣಮೃಗವನ್ನು ಸಾಯಿಸಿದ್ದಾನೆ. ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಅವನು ಇನ್ನೂ ಕ್ಷಮೆ ಕೇಳಿಲ್ಲ. ಸಲ್ಮಾನ್​ ಖಾನ್​ ಮಾತ್ರವಲ್ಲದೇ ನಮ್ಮ ಎಲ್ಲ ಶತ್ರುಗಳನ್ನೂ ನಾವು ಕೊಲ್ಲುತ್ತೇವೆ’ ಎಂದು ಗೋಲ್ಡಿ ಬ್ರಾರ್​ ಹೇಳಿದ್ದಾನೆ. 

1998ರಲ್ಲಿ ‘ಹಮ್​ ಸಾಥ್​ ಸಾಥ್​ ಹೈ’ ಸಿನಿಮಾದ ಶೂಟಿಂಗ್​ ವೇಳೆ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಆಡಿದ್ದರು. ಬಿಷ್ಣೋಯ್​ ಸಮುದಾಯದವರು ಕೃಷ್ಣಮೃಗವನ್ನು ಪವಿತ್ರವೆಂದು ನಂಬುತ್ತಾರೆ. ಹಾಗಾಗಿ ಬಿಷ್ಣೋಯ್​ ಸಮುದಾಯದ ಕೆಲವರು ಸಲ್ಮಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಲಾರೆನ್ಸ್​ ಬಿಷ್ಣೋಯ್​ ಬಳಿಕ ಇದೀಗ ಮತ್ತೊಬ್ಬ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್​ ಕೂಡ ಸಲ್ಮಾನ್ ವಿರುದ್ಧ ಕಿಡಿಕಾರಿದ್ದಾನೆ. ಈ ಹಿಂದೆ ಸಲ್ಮಾನ್​ ಖಾನ್​ಗೆ ಇ-ಮೇಲ್​ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. ಈಗ ಸುದ್ದಿ ವಾಹಿನಿಯ ಸಂದರ್ಶನದಲ್ಲೇ ಆದ ಕೊಲೆ ಬೆದರಿಕೆ ಹಾಕಿದ್ದಾನೆ.

ಸಲ್ಮಾನ್​ ಕೈಯಲ್ಲಿ ಸದಾ ಇರೋ ಬ್ರೆಸ್​ಲೆಟ್​ ಹೀಗೆಲ್ಲಾ ಮಾಡತ್ತಾ? ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​

ಇದೇ ವೇಳೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಗೋಲ್ಡಿ ಬ್ರಾರ್​ ಒಪ್ಪಿಕೊಂಡಿದ್ದಾನೆ. ಆ ಕೊಲೆಗೆ ವೈಯಕ್ತಿಕ ವಿಚಾರವೇ ಕಾರಣ ಎಂದು ಆತ ಹೇಳಿದ್ದಾನೆ. ಈಗ ಆತನ ಮುಂದಿನ ಟಾರ್ಗೆಟ್​ ಸಲ್ಮಾನ್​ ಖಾನ್​. ಸದ್ಯಕ್ಕೆ ಗೋಲ್ಡಿ ಬ್ರಾರ್ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ. ಭಾರತದಿಂದ ಎಸ್ಕೇಪ್​ ಆಗಿದ್ದ ಆತ ಕೆನಡಾದಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿಯೂ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಪಟ್ಟಿಯಲ್ಲಿ ಆತನ ಹೆಸರಿದೆ. ಹಾಗಾಗಿ ಅಲ್ಲಿಂದಲೂ ಗೋಲ್ಡಿ ಬ್ರಾರ್ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

ಯಾವ ಸ್ಟಾರ್ ದುಬಾರಿ ಬಾಡಿಗಾರ್ಡ್ ಹೊಂದಿದ್ದಾರೆ? : ಸಲ್ಮಾನ್ , ಯಶ್ , ವಿಜಯ್ ಅಲ್ಲ ಮತ್ಯಾರು ಗೊತ್ತಾ?

ಖ್ಯಾತ ರ್ಯಾಪರ್ ಹನಿ ಸಿಂಗ್ ಅವರಿಗೂ ಗೋಲ್ಡಿ ಬ್ರಾರ್ ಕಡೆಯಿಂದ ಜೀವ ಬೆದರಿಕೆ  ಬಂದಿತ್ತು. ಹನಿ ಸಿಂಗ್ ತಕ್ಷಣ ದೆಹಲಿ ಪೊಲೀಸ್ ಸ್ಟೇಷನ್‌ಗೆ ತೆರಳಿ ದೂರು ದಾಖಲಿಸಿದ್ದರು. ತನ್ನ ಮ್ಯಾನೇಜರ್‌ಗೆ ಗೋಲ್ಡಿ ಕಡೆಯಿಂದ ಜೀವ ಬೆದರಿಕೆಯ ವಾಯ್ಸ್ ನೋಟ್ ಬಂದಿದ್ದು ತುಂಬಾ ಭಯವಾಗಿದೆ ಎಂದು ಹೇಳಿದ್ದರು. ಇದೀಗ ಸಲ್ಮಾನ್ ಖಾನ್ ಅವರನ್ನು ಕೊಂದೇ ತೀರುವುದಾಗಿ ಶಪಥ ಮಾಡಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. 

click me!