ಭೂಗತ ಲೋಕದ ನಂಟು: 35 ಕೋಟಿಗಾಗಿ ನಿರ್ದೇಶಕನಿಗೆ ಬ್ಲಾಕ್‌ಮೆಲ್!

Published : Aug 29, 2020, 12:45 PM IST
ಭೂಗತ ಲೋಕದ ನಂಟು: 35 ಕೋಟಿಗಾಗಿ ನಿರ್ದೇಶಕನಿಗೆ ಬ್ಲಾಕ್‌ಮೆಲ್!

ಸಾರಾಂಶ

ಖ್ಯಾತ ನಿರ್ದೇಶಕನಿಗೆ 35 ಕೋಟಿ ಹಫ್ತಾ ಕೊಡುವಂತೆ ಧಮ್ಕಿ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ..

ಬಾಲಿವುಡ್‌ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ನಟ ಮಹೇಶ್‌ ಮಂಜ್ರೇಕರ್‌ಗೆ ಬರೋಬ್ಬರಿ 35 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕಾಕ್ ಹೊಟೇಲ್‌ನಲ್ಲಿ 3 ದಿನ ಉಳ್ಕೊಂಡಿದ್ರು ಸುಶಾಂತ್-ಸಾರಾ..!

ಒಂದೇ ಸಮನೆ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ದಾದರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಮಹೇಶ್‌, ಆತನಿಗೆ ಭೂಗತ ಲೋಕದ ಸಂಪರ್ಕವಿದೆ ಎಂದು ತಿಳಿಸಿದ್ದರು. ಆದರೆ ಪೊಲೀಸ್‌ ವ್ಯಕ್ತಿಯನ್ನು ಸೆರೆ ಹಿಡಿದ ನಂತರ ವಿಚಾರಣೆಗೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ.  

ನಿರ್ದೇಶಕನಿಗೆ ಕರೆ ಮಾಡಿದ ವ್ಯಕ್ತಿ ತಾನು ಭೂಗತ ಲೋಕದವನು, ಅಬು ಸಲೀಂ ಗ್ಯಾಂಗ್‌ ಕಡೆಯಿಂದ ವಸೂಲಿ ಮಾಡಲು ಹೇಳಿದ್ದಾರೆ, ಎಂದು ಹಣ ಕೊಡುವಂತೆ ನಾಲ್ಕರಿಂದ ಐದು ಬಾರಿ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ.

ಟೀ ಅಂಗಡಿ ವ್ಯಾಪಾರಿ:
ದೂರು ದಾಖಲಿಸಿಕೊಂಡ ಪೊಲೀಸರು AEC ಅವರಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದರು. ಕರೆ ಮಾಡುತ್ತಿದ್ದ ನಂಬರ್‌ ಟ್ಯಾಪ್‌ ಮಾಡುವ ಮೂಲಕ ಕ್ರೈಂ ಬ್ರಾಂಚ್‌ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.

ಮೊದಲ ಸಿನಿಮಾದಿಂದ ಕೈಬಿಟ್ಟದ್ದಕ್ಕೆ 4 ದಿನ ಅತ್ತಿದ್ದರಂತೆ ಅಣ್ಣಯ್ಯ ನಟಿ

ಹೌದು! ಮಹೇಶ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಟೀ ಅಂಗಡಿ ವ್ಯಾಪಾರಿ ಅಂತೆ. 34 ವರ್ಷದ ಮಿಲಿಂದ್ ತುಸಾಂಕರ್‌ ಎಂದು ತಿಳಿದು ಬಂದಿದೆ. ಮುಂಬೈನ 90 ಫೀಟ್‌ ರಸ್ತೆಯಲ್ಲಿ ಟೀ ಅಂಗಡಿಯೊಂದನ್ನು ಇಟ್ಟು ಕೊಂಡಿದ್ದಾನೆ.  'ಕೊರೋನಾ ಲಾಕ್‌ಡೌನ್‌ನಿಂದ ಮಿಲಿಂದ್‌ ಕುಟುಂಬ ಸಂಕಷ್ಟದಲ್ಲಿದ ಕಾರಣ ಹಣ ಸಂಪಾದಿಸಲು ಹೀಗೆ ಮಾಡಿದ್ದಂತೆ. ಗೂಗಲ್‌ ಹಾಗೂ ಯುಟ್ಯೂಬ್‌ನಲ್ಲಿ ವೀಡಿಯೋ ನೋಡಿ ಇಂಥ ಕೆಲಸಕ್ಕೆ ಕೈ ಹಾಕಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧರೆಯ ದೊರೆ ಯಶ್ ಹೇಳಲಿದ್ದಾರೆ 'ಅಜ್ಜಿಯ ಕಥೆ'.. ರಾಕಿಂಗ್ ಸ್ಟಾರ್ ಆ 'ಫೇರಿ ಟೇಲ್'ನಲ್ಲಿ ಏನೆಲ್ಲಾ ಇದೆ?
‘ಜೈ ಹನುಮಾನ್’ನಲ್ಲಿ ಶ್ರೀರಾಮ ಯಾರು? ರಿಷಬ್ ಶೆಟ್ಟಿ ಹನುಮಂತನಾದ ಬೆನ್ನಲ್ಲೇ ಹೆಚ್ಚಿದ ಕುತೂಹಲ!