ಶೂಟಿಂಗ್‌ಗೆ ಹೋದಾಗ ಸುನೀಲ್ ಶೆಟ್ಟಿಗೆ ಗನ್‌ಪಾಯಿಂಟ್‌ ಇಟ್ಟ ಅಮೆರಿಕ ಪೊಲೀಸ್‌, ಕಾಪಾಡಿದ ಪಾಕಿಸ್ತಾನಿ!

Published : Feb 28, 2025, 06:49 PM ISTUpdated : Feb 28, 2025, 07:40 PM IST
ಶೂಟಿಂಗ್‌ಗೆ ಹೋದಾಗ ಸುನೀಲ್ ಶೆಟ್ಟಿಗೆ ಗನ್‌ಪಾಯಿಂಟ್‌ ಇಟ್ಟ ಅಮೆರಿಕ ಪೊಲೀಸ್‌, ಕಾಪಾಡಿದ ಪಾಕಿಸ್ತಾನಿ!

ಸಾರಾಂಶ

ನಟ ಸುನೀಲ್ ಶೆಟ್ಟಿ, 2001ರಲ್ಲಿ ಅಮೆರಿಕಾದಲ್ಲಿ ನಡೆದ 9/11 ದಾಳಿಯ ನಂತರ ಲಾಸ್ ಏಂಜಲೀಸ್‌ನಲ್ಲಿ ಚಿತ್ರೀಕರಣದಲ್ಲಿರುವಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ. ಉದ್ದನೆಯ ಗಡ್ಡದಿಂದಾಗಿ ಪೊಲೀಸರು ಅವರನ್ನು ಅನುಮಾನಿಸಿ ಗನ್‌ಪಾಯಿಂಟ್‌ನಲ್ಲಿ ಇರಿಸಿದರು. ಆಗ ಪಾಕಿಸ್ತಾನಿ ಹೋಟೆಲ್ ಮ್ಯಾನೇಜರ್ ಬಂದು ಅವರು ನಟ ಎಂದು ಹೇಳಿ ರಕ್ಷಿಸಿದರು. ಈ ಘಟನೆಯನ್ನು ಅವರು ಚಂದಾ ಕೊಚ್ಚರ್ ಅವರ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಣ್ಣಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಸುನೀಲ್ ಶೆಟ್ಟಿ  ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.   ಪೊಲೀಸರು ಒಮ್ಮೆ ಅವರ ಮೇಲೆ ಗನ್  ಪಾಯಿಂಟ್‌ ಇಟ್ಟಿದ್ದರು. ಈ ಸಂದರ್ಭದಲ್ಲಿ  ಪಾಕಿಸ್ತಾನಿಯೊಬ್ಬರು ಅವರನ್ನು ರಕ್ಷಿಸಿದರು.

ಮುಂಬರುವ 'ಕೇಸರಿ ವೀರ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸುನೀಲ್ ಶೆಟ್ಟಿ ಈ ಘಟನೆ ಬಗ್ಗೆ ವಿವರಿಸಿದ್ದು,  2001 ರಲ್ಲಿ  ಉಗ್ರರು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ (WTC) ಮೇಲೆ ದಾಳಿ ಮಾಡಿದಾಗ ಈ ಘಟನೆ ಸಂಭವಿಸಿತು. ಆಗ ಅವರು ಲಾಸ್ ಏಂಜಲೀಸ್‌ನಲ್ಲಿ ನಿರ್ದೇಶಕ ಸಂಜಯ್ ಗುಪ್ತಾ ಅವರ 'ಕಾಂಟೆ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಅವರ ಉದ್ದನೆಯ ಗಡ್ಡವನ್ನು ನೋಡಿದ ಪೊಲೀಸರು ಅವರನ್ನು ಅನುಮಾನಿಸಿ ಗನ್‌ಪಾಯಿಂಟ್‌ನಲ್ಲಿ ಇರಿಸಿದರು.

ನಟ ಸುನಿಲ್ ಶೆಟ್ಟಿ ಜೊತೆ ಅಫೇರ್‌ ಗಾಸಿಪ್: ನಟಿ ಸೋನಾಲಿ ಬೇಂದ್ರೆ ಫುಲ್ ಗರಂ

ಸುನೀಲ್ ಶೆಟ್ಟಿ ಅವರ ಆಘಾತಕಾರಿ ರಹಸ್ಯ ಘಟನೆಯನ್ನು  ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪಾಡ್‌ಕಾಸ್ಟ್‌ನಲ್ಲಿ  ತಮ್ಮ  ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ಮೊದಲ ದಿನ ಎದ್ದ ತಕ್ಷಣ ಟಿವಿಯಲ್ಲಿ 9/11 ರ ದಾಳಿಯ ಸುದ್ದಿ ನೋಡಿದೆ. ಹೋಟೆಲ್ ಕೊಠಡಿಯಿಂದ ಹೊರಗೆ ಬಂದು ಕೆಳಗೆ ಹೋದಾಗ, ಕೀಲಿಗಳನ್ನು ಮರೆತಿದ್ದೇನೆ ಎಂದು ನೆನಪಾಯಿತು. ಈ ಘಟನೆಯಿಂದಲೇ ಅವರು ಅನುಮಾನಿತರ ಸಾಲಿನಲ್ಲಿ ನಿಲ್ಲುವಂತಾಯಿತು. 

 "ನಾನು ಹೋಟೆಲ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಲಿಫ್ಟ್‌ಗೆ ಬಂದಾಗ ನನ್ನ ರೂಮಿನ ಕೀಲಿ ಮರೆತಿದ್ದೇನೆ ಎಂದು ಗೊತ್ತಾಯಿತು. ಅಲ್ಲಿ ಒಬ್ಬ ಅಮೆರಿಕನ್ ವ್ಯಕ್ತಿ ಇದ್ದ. ಅವನು ನನ್ನನ್ನು ನೋಡುತ್ತಿದ್ದ.  'ನಿಮ್ಮ ಬಳಿ ಕೀಲಿಗಳಿವೆಯೇ? ನಾನು ನನ್ನ ಕೀಲಿಗಳನ್ನು ಮರೆತಿದ್ದೇನೆ ಮತ್ತು ಸಿಬ್ಬಂದಿ ಹೊರಗೆ ಹೋಗಿದ್ದಾರೆ  ನಾನು ಅವನನ್ನು ಕೇಳಿದೆ. ಅವನು ಓಡಿಹೋಗಿ ಗಲಾಟೆ ಮಾಡಿದ ಕೂಡಲೇ ಪೊಲೀಸರು ಬಂದರು. ರಸ್ತೆಯಿಂದ ಬಂದೂಕುಧಾರಿಗಳು ಬಂದು ತಲೆಬಾಗು ಇಲ್ಲದಿದ್ದರೆ ಶೂಟ್ ಮಾಡುತ್ತೇವೆ ಎಂದರು.

63ರಲ್ಲೂ 30ರ ಯುವಕನಂತೆ ಕಾಣುವ ನಟ ಸುನೀಲ್ ಶೆಟ್ಟಿ ಫಿಟ್ನೆಸ್ ಸಿಕ್ರೇಟ್ ಇದು

ಆಗ ಹೋಟೆಲ್ ಮ್ಯಾನೇಜರ್ ಸುನೀಲ್ ಶೆಟ್ಟಿಯನ್ನು ಕಾಪಾಡಿದ. ಏನಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಹಾಗಾಗಿ ನಾನು ಮೊಣಕಾಲುಗಳ ಮೇಲೆ ಕುಳಿತೆ. ಅವರು ನನಗೆ ಕೈಕೋಳ ಹಾಕಿದರು. ಆ ಸಮಯದಲ್ಲಿ ಪ್ರೊಡಕ್ಷನ್ ಟೀಮ್ ಬಂತು ಮತ್ತು ಹೋಟೆಲ್ ಮ್ಯಾನೇಜರ್ (ಪಾಕಿಸ್ತಾನಿ) ಬಂದು 'ಅವರು ನಟ' ಎಂದರು. ಆ ಸಮಯದಲ್ಲಿ ನಾವೆಲ್ಲಾ ಹುಚ್ಚರಾಗಿದ್ದೆವು. ಮುಂದೆ ಏನಾಗುತ್ತದೆಯೋ ಎಂದು ನನಗೆ ತಿಳಿದಿರಲಿಲ್ಲ, ಏಕೆಂದರೆ ಅಲ್ಲಿ ತುಂಬಾ ಗದ್ದಲವಿತ್ತು ಮತ್ತು ನನಗೆ ಉದ್ದನೆಯ ಗಡ್ಡವಿತ್ತು ಎಂದಿದ್ದಾರೆ.

ಟೊಮ್ಯಾಟೋ ಬಗ್ಗೆ ಮಾತಾಡಿ ಹಿಗ್ಗಾಮುಗ್ಗ ಟ್ರೋಲ್ ಆದ ಸುನಿಲ್ ಶೆಟ್ಟಿ: ಕೊನೆಗೂ ಬಹಿರಂಗ ಕ್ಷಮೆ ಕೇಳಿದ ನಟ

ಸುನೀಲ್ ಶೆಟ್ಟಿ ಅನುಮಾನದ ಸುಳಿಯಲ್ಲಿ ಸಿಲುಕಿದ್ದು ಹೇಗೆ ಎಂದಿರುವ ಸುನೀಲ್ ಶೆಟ್ಟಿ  ಲಿಫ್ಟ್‌ನಲ್ಲಿ ಭೇಟಿಯಾದ ವ್ಯಕ್ತಿಗೆ ಇಂಗ್ಲಿಷ್ ಬರುತ್ತಿರಲಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.   ಅವನು ನನ್ನ ಭಾಷೆ ಅರ್ಥಮಾಡಿಕೊಳ್ಳಲಿಲ್ಲ ಎಂದು ಅನಿಸುತ್ತದೆ. ಬಹುಶಃ ಅವನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಅದಕ್ಕಾಗಿಯೇ ನಾನು ಕೀಲಿ, ಲಿಫ್ಟ್ ಸನ್ನೆ ಮಾಡಿದೆ, ಆದರೆ ಅದರಲ್ಲಿ ಆ ಸನ್ನೆಯಿಂದ ನಾನು ಸಿಕ್ಕಿಹಾಕಿಕೊಂಡೆ ಅನ್ನಿಸುತ್ತದೆ ಎಂದಿದ್ದಾರೆ ಸುನೀಲ್‌ ಶೆಟ್ಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?