Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!

Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!

Published : May 23, 2026, 10:02 PM ISTUpdated : May 23, 2026, 10:04 PM IST

ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಕೊರಳಿಗೆ ಕಟ್ಟಿದ ಆ ಸುಂದರ ಮಂಗಳಸೂತ್ರವನ್ನು ಬೇರಾರೂ ವಿನ್ಯಾಸ ಮಾಡಿದ್ದಲ್ಲ, ಸ್ವತಃ ರಶ್ಮಿಕಾ ಮಂದಣ್ಣ. ತನ್ನ ಜೀವನದ ಅತ್ಯಂತ ವಿಶೇಷ ಕ್ಷಣಕ್ಕಾಗಿ ರಶ್ಮಿಕಾ ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಅಭಿರುಚಿಗೆ ತಕ್ಕಂತೆ ಮಂಗಳಸೂತ್ರ ಮಾಡಿಸಿಕೊಂಡಿದ್ದಾರೆ.. ಈ ಸ್ಟೋರಿ ನೋಡಿ!

ಸಾಮಾನ್ಯವಾಗಿ ಸ್ಟಾರ್ ನಟಿಯರ ಮದುವೆ ಎಂದರೆ ಅವರು ಧರಿಸುವ ಡ್ರೆಸ್, ಆಭರಣಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತದೆ. ಈಗ ರಶ್ಮಿಕಾ ಮಂದಣ್ಣ ಅವರ ಮದುವೆಯ ಮಂಗಳಸೂತ್ರದ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ರಶ್ಮಿಕಾ ಅವರ ಮದುವೆಯ ಲುಕ್ ವಿನ್ಯಾಸಗೊಳಿಸಿದ್ದ ಖ್ಯಾತ ಸ್ಟೈಲಿಸ್ಟ್ ಪ್ರಿಯಾ ಮಗಂತಿ, ಮದುವೆಯಾಗಿ ಮೂರು ತಿಂಗಳ ನಂತರ ಒಂದು ಇಂಟರೆಸ್ಟಿಂಗ್ ಗುಟ್ಟನ್ನು ಹೊರಹಾಕಿದ್ದಾರೆ.

ಅದು- ವಿಜಯ್ ದೇವರಕೊಂಡ ಅವರು ರಶ್ಮಿಕಾ ಕೊರಳಿಗೆ ಕಟ್ಟಿದ ಆ ಸುಂದರವಾದ ಮಂಗಳಸೂತ್ರವನ್ನು ಬೇರಾರೂ ವಿನ್ಯಾಸ ಮಾಡಿದ್ದಲ್ಲ, ಸ್ವತಃ ರಶ್ಮಿಕಾ ಮಂದಣ್ಣ ಅವರೇ ಡಿಸೈನ್ ಮಾಡಿದ್ದರಂತೆ! ಹೌದು, ತನ್ನ ಜೀವನದ ಅತ್ಯಂತ ವಿಶೇಷ ಕ್ಷಣಕ್ಕಾಗಿ ರಶ್ಮಿಕಾ ತುಂಬಾನೇ ಪ್ಲ್ಯಾನ್ ಮಾಡಿಕೊಂಡಿದ್ದರು. ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಡಿಸೈನ್‌ಗಳಿಗಿಂತ ಭಿನ್ನವಾಗಿ, ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಅಭಿರುಚಿಗೆ ತಕ್ಕಂತೆ ಮಂಗಳಸೂತ್ರ ಇರಬೇಕು ಎಂಬುದು ರಶ್ಮಿಕಾ ಅವರ ಹಠವಾಗಿತ್ತಂತೆ.

ಕ್ರಿಯೇಟಿವಿಟಿಯಲ್ಲೂ ರಶ್ಮಿಕಾ ಸೈ!
ನಟನೆಯಲ್ಲಿ ಮಾತ್ರವಲ್ಲದೆ ಡಿಸೈನಿಂಗ್‌ನಲ್ಲೂ ತಾನು ಸೈ ಎನ್ನುವುದನ್ನು ರಶ್ಮಿಕಾ ಸಾಬೀತುಪಡಿಸಿದ್ದಾರೆ. ರಶ್ಮಿಕಾ ನೀಡಿದ ಐಡಿಯಾಗಳು ಮತ್ತು ವಿನ್ಯಾಸವನ್ನು ನೋಡಿ ಸ್ವತಃ ಸ್ಟೈಲಿಸ್ಟ್ ಪ್ರಿಯಾ ಅವರೇ ಆಶ್ಚರ್ಯಚಕಿತರಾಗಿದ್ದರಂತೆ. ಸಾಂಪ್ರದಾಯಿಕ ಕಲೆ ಮತ್ತು ಆಧುನಿಕ ಶೈಲಿಯ ಮಿಶ್ರಣವನ್ನು ಹೊಂದಿದ್ದ ಆ ಮಂಗಳಸೂತ್ರವನ್ನು ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿತ್ತು. ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅವರ ಈ ಕ್ರಿಯೇಟಿವಿಟಿಗೆ ಫುಲ್ ಫಿದಾ ಆಗಿದ್ದರು ಎನ್ನಲಾಗಿದೆ.

ಇನ್ನೂ ನಿಂತಿಲ್ಲ ಸಂಭ್ರಮ!
ಉದಯಪುರದ ಅರಮನೆಯಲ್ಲಿ ನಡೆದ ಈ ಮದುವೆಯಲ್ಲಿ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಮತ್ತು ವಿಜಯ್ ಅವರ ರಾಯಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಮಾಂಗಲ್ಯದ ವಿಷಯ ಹೊರಬರುತ್ತಿದ್ದಂತೆ ಅಭಿಮಾನಿಗಳು "ರಶ್ಮಿಕಾ ಕೇವಲ ಗ್ರೇಟ್ ಆಕ್ಟ್ರೆಸ್ ಮಾತ್ರವಲ್ಲ, ಅದ್ಭುತ ಡಿಸೈನರ್ ಕೂಡ ಹೌದು" ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಿನಿಮಾ ಹಂಗಾಮ ವಿಡಿಯೋ ನೋಡಿ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more