ಡಿವೋರ್ಸ್ ಸುದ್ದಿಗೆ ಉತ್ತರ ಸಿಕ್ತು ಬಿಡಿ.. ಮೌನ ಮುರಿದು ಪತ್ನಿ-ಮಗಳ ಬಗ್ಗೆ 'ಜೂನಿಯರ್ ಬಿ' ಬಿಚ್ಚಿಟ್ಟ ಸತ್ಯಗಳಿವು!

Published : Apr 04, 2026, 05:56 PM IST
Aishwarya Rai Abhishek Bachchan

ಸಾರಾಂಶ

ಮಹಿಳೆಯರಲ್ಲಿರುವ ಸೂಕ್ಷ್ಮ ಸಂವೇದನೆ ಪುರುಷರಲ್ಲಿ ಕಡಿಮೆ ಇರುತ್ತದೆ. ಆದರೂ ನಾನು ಮತ್ತು ಐಶ್ವರ್ಯಾ ಮಗಳಿಗೆ ಉತ್ತಮ ಮಾದರಿಯಾಗಲು ಬಯಸುತ್ತೇವೆ. ಮಕ್ಕಳಿಗೆ ಬರಿ ಮಾತಿನ ಮೂಲಕ ಪಾಠ ಮಾಡುವ ಬದಲು, ನಾವೇ ಅದನ್ನು ಮಾಡಿ ತೋರಿಸುತ್ತೇವೆ. ಮನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳೊಂದಿಗೆ ಜೀವನ ನಡೆಸಿದರೆ ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ. ನಮ್ಮ ಮನೆಯಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ಸ್ಪರ್ಧೆಯಿಲ್ಲ..

ಪತ್ನಿ-ಮಗಳ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

ಬಾಲಿವುಡ್‌ನ ಅತ್ಯಂತ ಚರ್ಚಿತ ಮತ್ತು ಪ್ರಭಾವಶಾಲಿ ಜೋಡಿ ಎಂದರೆ ಅದು ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್. ಕಳೆದ ಕೆಲವು ತಿಂಗಳುಗಳಿಂದ ಈ ದಂಪತಿಗಳ ನಡುವೆ ಎಲ್ಲವೂ ಸರಿಯಿಲ್ಲ, ಇವರು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿವೆ. ಸಾರ್ವಜನಿಕ ಸಮಾರಂಭಗಳಲ್ಲಿ ಐಶ್ವರ್ಯಾ (Aishwarya) ಮತ್ತು ಅಭಿಷೇಕ್ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿರುವುದು ಈ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಆದರೆ, ಇವೆಲ್ಲದರ ನಡುವೆ ಅಭಿಷೇಕ್ ಬಚ್ಚನ್ ಅವರು ತಮ್ಮ ವೈವಾಹಿಕ ಜೀವನ, ಪತ್ನಿ ಐಶ್ವರ್ಯಾ ಮತ್ತು ಮಗಳು ಆರಾಧ್ಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಯಶಸ್ಸಿನ ಬಗ್ಗೆ ಅಸೂಯೆ ಇಲ್ಲ:

ಸಂದರ್ಶನವೊಂದರಲ್ಲಿ ಮಾತನಾಡಿದ ಅಭಿಷೇಕ್ ಬಚ್ಚನ್, "ನಮ್ಮಿಬ್ಬರಲ್ಲಿ ಯಾರು ಹೆಚ್ಚು ಯಶಸ್ವಿ?" ಎಂಬ ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. "ನನ್ನ ತಂದೆ-ತಾಯಿ ಮದುವೆಯಾದಾಗ, ನನ್ನ ತಾಯಿ ಜಯಾ ಬಚ್ಚನ್ ಅವರು ತಂದೆ ಅಮಿತಾಬ್ ಅವರಿಗಿಂತ ದೊಡ್ಡ ಸ್ಟಾರ್ ಆಗಿದ್ದರು. ಹಾಗಾಗಿ ಪತ್ನಿ ಹೆಚ್ಚು ಯಶಸ್ವಿಯಾಗುವುದು ನಮಗೆ ಅಸ್ವಾಭಾವಿಕವಾಗಿ ಎಂದೂ ಕಂಡಿಲ್ಲ. ನಾನು ವೃತ್ತಿಜೀವನದ ಆರಂಭದಿಂದಲೂ ಐಶ್ವರ್ಯಾ ಅವರನ್ನು ಬಲ್ಲೆ. ನಾವು 'ಧಾಯಿ ಅಕ್ಷರ್ ಪ್ರೇಮ್ ಕೆ' ಸಿನಿಮಾ ಮಾಡುವಾಗ ಕೇವಲ ಸ್ನೇಹಿತರಾಗಿದ್ದೆವು" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಗಂಡಸುತನ ಎಂದರೆ ಪತ್ನಿಯನ್ನು ಕಟ್ಟಿಹಾಕುವುದಲ್ಲ:

ಅಭಿಷೇಕ್ ಮತ್ತು ಐಶ್ವರ್ಯಾ ಅವರ ಮದುವೆ ಕೇವಲ ಒಂದು ಸಂಬಂಧವಲ್ಲ, ಅದೊಂದು ಸಮಾನವಾದ 'ಪಾರ್ಟನರ್‌ಶಿಪ್' ಎನ್ನುತ್ತಾರೆ ಜೂನಿಯರ್ ಬಚ್ಚನ್. "ನಾನು ದುಡಿಯುತ್ತೇನೆ, ನೀನು ಮನೆ ನೋಡಿಕೋ ಎಂಬ ಕಟ್ಟುಪಾಡುಗಳು ನಮ್ಮಲ್ಲಿಲ್ಲ. ನನ್ನ ಪತ್ನಿ ಏನಾದರೂ ಸಾಧಿಸುವುದನ್ನು ನಿಲ್ಲಿಸಬೇಕು ಎಂದು ಬಯಸುವ ಗಂಡ ನಾನಲ್ಲ. ತನ್ನ ಪತ್ನಿ ಸೋಲಬೇಕು ಎಂದು ಬಯಸುವವನು ಅಹಂಕಾರಿ ಆಗಿರುತ್ತಾನೆ. ನಾನು ಅಂತಹ ವ್ಯಕ್ತಿಯಲ್ಲ. ನನ್ನ ಪತ್ನಿ ತನ್ನನ್ನು ತಾನು ಸಮರ್ಥವಾಗಿ ನೋಡಿಕೊಳ್ಳಬಲ್ಲಳು, ಅವಳು ಸಾಧಿಸುವುದನ್ನು ನೋಡಿ ನನಗೆ ಹೆಮ್ಮೆಯಿದೆ" ಎಂದು ಹೇಳುವ ಮೂಲಕ ತಮ್ಮ ನಡುವಿನ ಅಹಂಕಾರದ ಸಮಸ್ಯೆಯನ್ನು ತಳ್ಳಿಹಾಕಿದ್ದಾರೆ.

ಮಗಳ ಬಗ್ಗೆ ಹೊಸ ಪ್ಲಾನ್:

ತಮ್ಮ ಮುದ್ದಿನ ಮಗಳು ಆರಾಧ್ಯ ಬಚ್ಚನ್ ಬಗ್ಗೆ ಮಾತನಾಡುತ್ತಾ, "ತಂದೆಯಾದವರು ಭಾವನೆಗಳಿಗೆ ಒಳಗಾಗಿ ಕೆಲವು ಬಾರಿ ಕೆಟ್ಟ ಶಿಕ್ಷಕರಾಗಬಹುದು. ಆದರೆ ಮಹಿಳೆಯರಲ್ಲಿರುವ ಸೂಕ್ಷ್ಮ ಸಂವೇದನೆ ಪುರುಷರಲ್ಲಿ ಕಡಿಮೆ ಇರುತ್ತದೆ. ಆದರೂ ನಾನು ಮತ್ತು ಐಶ್ವರ್ಯಾ ಮಗಳಿಗೆ ಉತ್ತಮ ಮಾದರಿಯಾಗಲು ಬಯಸುತ್ತೇವೆ. ಮಕ್ಕಳಿಗೆ ಬರಿ ಮಾತಿನ ಮೂಲಕ ಪಾಠ ಮಾಡುವ ಬದಲು, ನಾವೇ ಅದನ್ನು ಮಾಡಿ ತೋರಿಸುತ್ತೇವೆ. ಮನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳೊಂದಿಗೆ ಜೀವನ ನಡೆಸಿದರೆ ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ. ನಮ್ಮ ಮನೆಯಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ಸ್ಪರ್ಧೆಯಿಲ್ಲ" ಎಂದಿದ್ದಾರೆ.

ತಮ್ಮ ಪತ್ನಿ ಐಶ್ವರ್ಯಾ ಬಗ್ಗೆ ತಮಾಷೆಯಾಗಿ ಮಾತನಾಡುತ್ತಾ, "ಅವಳಿಗೆ ಸ್ವಯಂ ರಕ್ಷಣೆ ಕಲಿಸುವ ಅಗತ್ಯವೇ ಇಲ್ಲ, ಅವಳು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಚೆನ್ನಾಗಿ ಬಲ್ಲಳು" ಎಂದು ಹಾಸ್ಯದ ಮೂಲಕವೇ ಪತ್ನಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಈ ಸಂದರ್ಶನದ ಮೂಲಕ ಅಭಿಷೇಕ್ ಬಚ್ಚನ್ ಅವರು ತಮ್ಮ ಕುಟುಂಬದಲ್ಲಿ ಸಮಾನತೆ ಮತ್ತು ಪ್ರೀತಿಗೆ ಮೊದಲ ಸ್ಥಾನ ಎಂಬುದನ್ನು ಸಾಬೀತುಪಡಿಸಿದ್ದಾರೆ, ಇದು ವಿಚ್ಛೇದನದ ವದಂತಿಗಳಿಗೆ ಪರೋಕ್ಷವಾಗಿ ಉತ್ತರ ನೀಡಿದಂತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೀತೆ ಲುಕ್‌ನಲ್ಲಿ ಸಾಯಿ ಪಲ್ಲವಿ ಕಂಡಾಗ ರಣಬೀರ್‌ಗೆ ಏನಾಯ್ತು? 'ರಾವಣ' ಯಶ್ ಬಗ್ಗೆ 'ರಾಮ' ಹೇಳಿದ್ದು ಭಾರೀ ವೈರಲ್!
Ramayana Teaser: ರಣಬೀರ್ ಮುಖದಲ್ಲಿ 'ಅದು' ಸರಿಯಿಲ್ಲ ಎಂದು ಅಪಸ್ವರ ಎತ್ತಿದ 'ರಾಮಾಯಣ'ದ ಲಕ್ಷ್ಮಣ ಸುನಿಲ್ ಲಹ್ರಿ