
1500 ಕೋಟಿ ಕ್ಲಬ್ ಸೇರಿದ ನಿರ್ದೇಶಕ ಆದಿತ್ಯ ಧರ್ ಕೈಯಲ್ಲಿವೆ ಮೂರು ಬೃಹತ್ ಚಿತ್ರಗಳು!
ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರು ನಿರ್ದೇಶಕ ಆದಿತ್ಯ ಧರ್. ತಮ್ಮ 'ಧುರಂಧರ್' ಮತ್ತು 'ಧುರಂಧರ್: ದಿ ರಿವೆಂಜ್' ಚಿತ್ರಗಳ ಮೂಲಕ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿರುವ ಆದಿತ್ಯ, ಈಗ ಬಾಲಿವುಡ್ನ ಅತ್ಯಂತ ಬೇಡಿಕೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. 'ಧುರಂಧರ್ 2' ಚಿತ್ರವು ಜಾಗತಿಕವಾಗಿ ಬರೋಬ್ಬರಿ 1,500 ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಅಭೂತಪೂರ್ವ ಯಶಸ್ಸಿನ ನಂತರ, ಆದಿತ್ಯ ಧರ್ ತಮ್ಮ ಮುಂದಿನ ನಡೆಯ ಬಗ್ಗೆ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದ್ದಾರೆ.
ವಿಶ್ರಾಂತಿಯ ನಂತರ ಬಿಗ್ ಅನೌನ್ಸ್ಮೆಂಟ್:
ಸತತ ಮೂರು ವರ್ಷಗಳ ಕಾಲ ರಣವೀರ್ ಸಿಂಗ್ ಜೊತೆ 'ಧುರಂಧರ್' ಫ್ರಾಂಚೈಸಿಗಾಗಿ ಹಗಲಿರುಳು ಶ್ರಮಿಸಿರುವ ಆದಿತ್ಯ ಧರ್, ಸದ್ಯಕ್ಕೆ ಒಂದು ಸಣ್ಣ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಆದರೆ, ಈ ವಿಶ್ರಾಂತಿಯ ನಂತರ ಅವರು ಕೈಗೆತ್ತಿಕೊಳ್ಳಲಿರುವ ಸಿನಿಮಾ ಮಾತ್ರ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಮಟ್ಟದ (High Scale) ಚಿತ್ರವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಆದಿತ್ಯ ಮುಂದೆ ಸದ್ಯಕ್ಕೆ ಮೂರು ವಿಭಿನ್ನ ಕಥೆಗಳ ಆಯ್ಕೆಗಳಿವೆ.
ಆದಿತ್ಯ ಧರ್ ಅವರ ಮೊದಲ ಆಯ್ಕೆ ಎಂದರೆ ಅದು ರಣವೀರ್ ಸಿಂಗ್ ಜೊತೆಗಿನ ಸಿನಿಮಾ. ಈ ಬಾರಿ ಅವರು ಮೌರ್ಯ ಸಾಮ್ರಾಜ್ಯದ ಸ್ಥಾಪಕ 'ಚಂದ್ರಗುಪ್ತ ಮೌರ್ಯ'ನ ಜೀವನ ಚರಿತ್ರೆಯನ್ನು ಬೆಳ್ಳಿತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ 'ಬಾಜೀರಾವ್ ಮಸ್ತಾನಿ' ಮತ್ತು 'ಪದ್ಮಾವತ್'ನಂತಹ ಐತಿಹಾಸಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಣವೀರ್ ಸಿಂಗ್ ಅವರಿಗೆ ಇದು ಹೊಸ ಸವಾಲಾಗಲಿದೆ. ಕಳೆದ ವರ್ಷದಿಂದಲೇ ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, 'ಧುರಂಧರ್' ಯಶಸ್ಸು ಈ ಜೋಡಿಯ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಮರಳಿ ಬರಲಿದೆಯೇ 'ಅಶ್ವತ್ಥಾಮ'?:
ಆದಿತ್ಯ ಧರ್ ಅವರ ಕನಸಿನ ಪ್ರಾಜೆಕ್ಟ್ ಆಗಿದ್ದ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' (The Immortal Ashwatthama) ಬಜೆಟ್ ಕಾರಣಗಳಿಂದಾಗಿ ಅರ್ಧಕ್ಕೇ ನಿಂತುಹೋಗಿತ್ತು. ಆದರೆ ಈಗ 'ಧುರಂಧರ್' ಸರಣಿಯಿಂದ ನಿರ್ಮಾಪಕರಿಗೆ ಸುಮಾರು 2,800 ಕೋಟಿ ರೂಪಾಯಿಗಳಷ್ಟು ಲಾಭ ಬಂದಿರುವುದರಿಂದ, ಈ ಚಿತ್ರಕ್ಕೆ ಮತ್ತೆ ಜೀವ ನೀಡಲು ಆದಿತ್ಯ ಉತ್ಸುಕರಾಗಿದ್ದಾರೆ. ಒಂದು ವೇಳೆ ಈ ಸಿನಿಮಾ ಸೆಟ್ಟೇರದಿದ್ದರೆ, ಚಂದ್ರಗುಪ್ತ ಮೌರ್ಯನ ಕಥೆಯೇ ಅವರ ಮುಂದಿನ ಸಿನಿಮಾವಾಗುವುದು ಖಚಿತ. ಇದರೊಂದಿಗೆ ಒಂದು ಕ್ರೀಡಾ ಆಧಾರಿತ (Sports Drama) ಚಿತ್ರದ ಮೇಲೂ ಅವರು ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, 'ಧುರಂಧರ್: ದಿ ರಿವೆಂಜ್' ಚಿತ್ರವು ವಿಶ್ವಾದ್ಯಂತ 1,523.58 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ. ಭಾರತವೊಂದರಲ್ಲೇ 1,148.58 ಕೋಟಿ ರೂ. ಗಳಿಸಿದ್ದರೆ, ವಿದೇಶಗಳಲ್ಲಿ 375 ಕೋಟಿ ರೂ. ಬಾಚಿಕೊಂಡಿದೆ. ಭಾರತೀಯ ಬಾಕ್ಸ್ ಆಫೀಸ್ನಲ್ಲಿ ನಿವ್ವಳ 1,000 ಕೋಟಿ ರೂಪಾಯಿಗಳ ಗಡಿ ದಾಟಲು ಈ ಸಿನಿಮಾ ದಾಪುಗಾಲು ಹಾಕುತ್ತಿದೆ.
ಒಟ್ಟಿನಲ್ಲಿ, ಆದಿತ್ಯ ಧರ್ ಅವರ ಮುಂದಿನ ಚಿತ್ರ ಯಾವುದಾದರೂ ಇರಲಿ, ಅದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದಂತೂ ಗ್ಯಾರಂಟಿ. ರಣವೀರ್ ಸಿಂಗ್ ಅವರ ಆಕ್ಷನ್ ಮತ್ತು ಆದಿತ್ಯ ಧರ್ ಅವರ ಮೇಕಿಂಗ್ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾತರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.