ಅಡ್ಡಿ ಆತಂಕಗಳ ನಡುವೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ 2019-20ರ ಆಯವ್ಯಯ ಮಂಡಿಸಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದರು. ಯಾವುದೇ ಬೆಳವಣಿಗೆಗಳಿಗೂ ವಿಚಲಿತರಾದಗ ಸಿಎಂ, ಬಜೆಟ್ ಮಂಡಿಸುತ್ತಿದ್ದಾರೆ.

05:04 PM (IST) Feb 08
ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
04:38 PM (IST) Feb 08
ಓದಿನ ಜೊತೆಗೆ ಆಟೋಟಗಳಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒತ್ತು ನೀಡಿದ್ದು, ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ಗಳನ್ನು ಘೋಷಣೆ ಮಾಡಲಾಗಿದೆ.
04:36 PM (IST) Feb 08
ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಳಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.
04:23 PM (IST) Feb 08
ರಾಜ್ಯದ ದುಡಿಯುವ ಸಮುದಾಯಕ್ಕೆ ತಮ್ಮ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದಾರೆ. ಅದರಂತೆ ರಾಜ್ಯದ ಚಾಲನಾ ಶಕ್ತಿಯಾಗಿರುವ ದುಡಿಯುವ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ನೀಡಿದ್ದಾರೆ
04:21 PM (IST) Feb 08
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್ನ್ನು ಶುಕ್ರವಾರ ಮಂಡಿಸಿದ್ದಾರೆ. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ಇದರ ಡಿಟೇಲ್ಸ್ ಇಲ್ಲಿದೆ.
ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್, ಛತ್ರಿ ಭಾಗ್ಯ
04:18 PM (IST) Feb 08
ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....
Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?
04:16 PM (IST) Feb 08
ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.
03:55 PM (IST) Feb 08
ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
03:51 PM (IST) Feb 08
ನಾವು ಕೂಡ ಜನರಿಂದ ಅಯ್ಕೆಯಾಗಿ ಬಂದವರು ನಾವು ಕೂಡ ಶಾಸಕರೇ. ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ ಮಾಡೋದು ಸರಿಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಐಸ್ ಕ್ಯಾಂಡಿ ಬಜೆಟ್. ಬಿಸಿಲಿನಲ್ಲಿ ಇಟ್ರೆ ಹಾಗೇ ಕರಗಿಹೋಗುತ್ತೆ. ರೈತರ ಸಾಲ ಮನ್ನಾ ಮಾಡಿಲ್ಲ. ಇದನ್ನ ತಪ್ಪಿಸಿಕೊಳ್ಳಬೇಕು ಅಂತ ಇವತ್ತು ಯಾವೋದು ಅಡಿಯೋ ರೀಲಿಸ್ ಮಾಡಿದ್ದಾರೆ. ನಮ್ಮ ನಾಯಕ ಬಿಎಸ್ ವೈ ಬಗ್ಗೆ ಆರೋಪ ಮಾಡಿದ್ದಾರೆ. ಸಿಎಂ ರಾಜೀನಾಮೆ ಕೊಡಬೇಕು ..
ಪ್ರತಿನಿತ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಪ್ಪಿಸಿಕೊಂಡಿದ್ದಾರೆ.
-ಆರ್ ಅಶೋಕ್, ಬಿಜೆಪಿ ನಾಯಕ
03:50 PM (IST) Feb 08
ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿ ಮಾಡದ ಸಿಎಂ .!
ಬಜೆಟ್ ನಲ್ಲಿ ಔರಾದ್ಕರ್ ವರದಿ ಎದುರು ನೋಡುತ್ತಿದ್ದ ರಾಜ್ಯ ಪೊಲೀಸರು.!
ಔರದ್ಕರ್ ಜಾರಿ ಮಾಡುವುದಾಗಿ ಪೊಲೀಸರಿಗೆ ನೀರಿಕ್ಷೆ ಹುಟ್ಟಿಸ್ಸಿದ್ದ ಸಿಎಂ .!
ಆದ್ರೆ ಬಜೆಟ್ ನಲ್ಲಿ ಔರದ್ಕರ್ ಜಾರಿಯಾಗದ ಹಿನ್ನೇಲೆ ನಿರಾಸೆಗೊಂಡ ಪೊಲೀಸರು..!
ಔರದ್ಕರ್ ವರದಿ ಜಾರಿ ಮಾಡದೇ ಕೇವಲ ಕಷ್ಟ ಪರಿಹಾರ ಭತ್ಯೆ ಅನುಧಾನವನ್ನ ಕೋಟ್ಟ ಸಿಎಂ.!
ಔರದ್ಕರ್ ವರದಿ ಜಾರಿಯಾಗಿದ್ರೆ ಪೊಲೀಸರಿಗೆ ಹೆಚ್ಚಾಗುತ್ತಿದ್ದ 30 ಪರ್ಸೆಂಟ್ ವೇತನ
03:49 PM (IST) Feb 08
ರಾಜ್ಯ ಬಜೆಟ್ ನಲ್ಲಿ ಮಹದಾಯಿ ಯೋಜನೆ ನಿರ್ಲಕ್ಷ್ಯ ಹಿನ್ನೆಲೆ
ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದರು ವಿಭಿನ್ನ ಪ್ರತಿಭಟನೆ
ತಮಟೆ ಬಾರಿಸುವ ಮೂಲಕ ವಿಭಿನ್ನ ಪ್ರತಿಭಟನೆ
ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ
ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಳಂಬ
ಯೋಜನೆ ಜಾರಿ ಹಾಗೂ ಅನುದಾನ ತೆಗೆದಿಡದಿರಲು ಆಕ್ರೋಶ
03:08 PM (IST) Feb 08
ಇನ್ನು ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ) ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು 17,212 ಕೋಟಿ ರೂ. ಅನುದಾನ ನೀಡಿದ್ದಾರೆ.
ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?
03:06 PM (IST) Feb 08
ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ
ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ
ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ
ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.
ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
03:05 PM (IST) Feb 08
ಕಟ್ಟಡ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರಿಗೆ ಯೋಜನೆ
ಶ್ರಮಿಕ ಸೌರಭ ಯೋಜನೆಗೆ ಜಾರಿಗೆ ರಾಜ್ಯ ಸರ್ಕಾರದಿಂದ ನಿರ್ಧಾರ
ಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 5 ಲಕ್ಷ ಮುಂಗಡ ಹಣ
ಕಾರ್ಮಿಕರ ಸ್ವಂತ ಮನೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ
ಕಾರ್ಮಿಕ -ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ ಚಿಕಿತ್ಸೆ ವೆಚ್ಚ
ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂ ಪರಿಹಾರ
ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕೂ 2,500 ರೂ
ಕಾರ್ಮಿಕರ ಮಕ್ಕಳ ಸ್ವಯಂ ಉದ್ಯೋಗ ಪ್ರೋತ್ಸಾಹಕ್ಕೆ 50 ಸಾವಿರ
ಉದ್ಯೋಗ ಪ್ರೋತ್ಸಾಹಿಸಲು 50 ಸಾವಿರ ಬಡ್ಡಿರಹಿತ ಸಹಾಯಧನ
03:03 PM (IST) Feb 08
ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ವ್ಯವಸ್ಥೆ
ಪೆಟ್ರೋಲ್ ಆಟೋ ಎಲೆಕ್ಟ್ರಿಕ್ ಆಟೋ ಪರಿವರ್ತನೆಗೆ ಸಹಾಯಧನ
ಸಾರಿಗೆ ಇಲಾಖೆ ಮೂಲಕ ಈ ಯೋಜನೆಗೆ 30 ಕೋಟಿ ರೂಪಾಯಿ
ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಚಾಲಕರ ದಿನಾಚರಣೆ
ಎಲ್ಲಾ ಜಿಲ್ಲೆಗಳಲ್ಲಿಯೂ ಚಾಲಕರ ದಿನಾಚರಣೆ ಮಾಡಲು ತೀರ್ಮಾನ
ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ್ದರೆ ಪುರಸ್ಕಾರ
ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ ಪುರಸ್ಕಾ
02:43 PM (IST) Feb 08
ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ.
4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?
02:43 PM (IST) Feb 08
ಮಾಹಿತಿ ತಂತ್ರಜ್ಞಾನ ನೀತಿ ಪರಿಷ್ಕರಣೆ ಮಾಡಲು ತೀರ್ಮಾನ
ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ
ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ
ಹೊಸ ಪರಿಪೋಷಣಗಳ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ
ತುಮಕೂರಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ
7 ಕೋಟಿ ರೂಪಾಯಿ ವೆಚ್ಚದಲ್ಲಿ K-Tech ನಾವೀನ್ಯತೆ ಕೇಂದ್ರ
ಕೆ-ಟೆಕ್ ಇನ್ನೋವೇಷನ್ ಹಬ್ ಸ್ಥಾಪನೆಗೆ 7 ಕೋಟಿ ರೂಪಾಯಿ
02:41 PM (IST) Feb 08
ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ
ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ
ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ತಂತ್ರಜ್ಞಾನ ಬಳಸಿ ಸಮೀಕ್ಷೆ
02:38 PM (IST) Feb 08
ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.
02:22 PM (IST) Feb 08
ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ
ಅನ್ನಭಾಗ್ಯ ಪಡಿತರ ಧಾನ್ಯ ವಿತರಣೆಗೆ 3,700 ಕೋಟಿ ರೂ. ಅನುದಾನ
02:22 PM (IST) Feb 08
ಎಲ್ಲಾ ಇಲಾಖೆಗಳ ಯೋಜನೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ
ಆಧಾರ್ ಆಧಾರಿತ ವಿನೂತನವಾದ 'ನೇರ ನಗದು ವರ್ಗಾವಣೆ' ಗೆ ವ್ಯವಸ್ಥೆ
'ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು' ಯೋಜನೆ ಜಾರಿ ವ್ಯವಸ್ಥೆ
ಆಯ್ದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೇ ತಲುಪಿಸುವುದಕ್ಕೆ ವ್ಯವಸ್ಥೆ
02:20 PM (IST) Feb 08
ಕೌನ್ಸಿಲಿಂಗ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ
ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ಕಾಯ್ದೆ
ಎಲ್ಲಾ ಇಲಾಖೆಗಳಲ್ಲೂ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ
ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆ ವ್ಯವಸ್ಥೆ
02:19 PM (IST) Feb 08
ಬಾದಾಮಿ ಪ್ರವಾಸಿ ತಾಣ-ಕರಕುಶಲ ಮಾರುಕಟ್ಟೆ ಅಭಿವೃದ್ಧಿಗೆ 25 ಕೋಟಿ ರೂ
ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ KSTDCಯಿಂದಲೇ ಹೊಸ ಬಸ್ ಗಳು
ಲಂಡನ್ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ
6 ಡಬಲ್ ಡೆಕ್ಕರ್ ತೆರೆದ ಬಸ್ ಖರೀದಿಸಲು 5 ಕೋಟಿ ರೂಪಾಯಿ
ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ ಆಯೋಜನೆಗೆ 2 ಕೋಟಿ
ಹಂಪಿಯಲ್ಲಿ ಹಂಪಿ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ ರೂಪಾಯಿ ಅನುದಾನ
ವಿಜಯಪುರದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ
ಪಣಂಬೂರು ಮತ್ತು ಸಸಿಹಿತ್ಲುವನಲ್ಲಿ ಕಡಲ ತೀರ ಪ್ರವಾಸೋದ್ಯಮ ಅಭಿವೃದ್ಧಿ
ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂಪಾಯಿ ಅನಿುದಾನ
ಪ್ರವಾಸೋದ್ಯಮ ಇಲಾಖೆ 834 ಸಂರಕ್ಷಿತ ಸ್ಮಾರಕಗಳಲ್ಲಿ 600 ಸ್ಮಾರಕಗಳ ಸಮೀಕ್ಷೆ
02:18 PM (IST) Feb 08
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ ವಿಶೇಷ ಅನುದಾನ
ಸರ್ಕಾರದ ಯೋಜನೆಗಳ ಪ್ರಚಾರದ ಕಾರ್ಯ ಕೈಗೊಳ್ಳಲು ಹೊಸ ಘಟಕ
ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕ ಪ್ರಾರಂಭಿಸುವುದಕ್ಕೆ ಕ್ರಮ
ತುಳು, ಕೊಡವ, ಕೊಂಕಣಿ ಭಾಷಾ ಸಿನಿಮಾಗಳ ಪ್ರೋತ್ಸಾಹ ಕಾರ್ಯಕ್ರಮ
ಪ್ರೋತ್ಸಾಹ ಕಾರ್ಯಕ್ರಮಕ್ಕಾಗಿ 1 ಕೋಟಿ ರೂಪಾಯಿ ಅನುದಾನ ಮೀಸಲು
02:17 PM (IST) Feb 08
ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ
ಭಾರತೀಯ ಕ್ರೀಡಾ ಪ್ರಾಧಿಕಾರದಂತೆಯೇ, ವಸತಿ ನಿಲಯಗಳಲ್ಲಿ ಭತ್ಯೆ
ಊಟೋಪಾಚರದ ಭತ್ಯೆ ಹೆಚ್ಚಳಕ್ಕೆ 6 ಕೋಟಿ ರೂ. ಅನುದಾನ
02:16 PM (IST) Feb 08
ಜ. ತಿಮ್ಮಯ್ಯ ಸಾಹಸ ಅಕಾಡೆಮಿ ಮೂಲಕ 10 ಸ್ಥಳಗಳಲ್ಲಿ ಕ್ರೀಡೋತ್ಸವಕ್ಕೆ 2 ಕೋಟಿ ಅನುದಾನ
13ರಿಂದ 15ರ ವಯೋಮಾನದವರಿಗೆ ಮಿನಿ ಒಲಿಂಪಿಕ್ಸ್
ವಿರಾಜಪೇಟೆಯ ಬಾಳಗೋಡದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ
02:12 PM (IST) Feb 08
ಬಜೆಟ್ ಆರಂಭದಲ್ಲೇ ರಾಜ್ಯದ ರೈತ ಸಮುದಾಯವನ್ನು ನೆನೆದ ಸಿಎಂ ಕುಮಾರಸ್ವಾಮಿ, ತಮ್ಮ ಸರ್ಕಾರ ಅನ್ನದಾತನ ಕಣ್ಣೀರು ಒರೆಸಲು ಬದ್ಧವಾಗಿದೆ ಎಂದು ಹೇಳಿದರು.
ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!
02:11 PM (IST) Feb 08
ಎರಡು ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ಹೆಚ್ಚುವರಿ ಹಣ
ಕಾರ್ಯನಿರತ ಪತ್ರಕರ್ತರ ಕ್ಷೇಮನಿಧಿ ದತ್ತಿಗೆ 2 ಕೋಟಿ ಹೆಚ್ಚುವರಿ ಅನುದಾನ
ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗೂ 2 ಕೋಟಿ ರೂ ಹೆಚ್ಚುವರಿ ಅನುದಾನ
02:10 PM (IST) Feb 08
ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.
ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಮಡಿಕೇರಿಯಲ್ಲಿ ಕ್ರೀಡಾ ಹಾಸ್ಟೆಲ್
10 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ
ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ,
ಕಲಬುರಗಿ, ಕೋಲಾರ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕ್ರೀಡಾ ಹಾಸ್ಟೆಲ್
ರಾಜ್ಯದ 4 ಜಿಲ್ಲಾ ಕ್ರೀಡಾಂಗಣಗಳ ಮೇಲ್ದರ್ಜೆಗೆ, 4 ಕೋಟಿ ರೂ. ಅನುದಾನ
ಮಂಡ್ಯ, ಬೀದರ್, ತುಮಕೂರು, ಹಾಸನ ಕ್ರೀಡಾಂಗಣಗಳ ಅಭಿವೃದ್ಧಿ
02:10 PM (IST) Feb 08
ಸುತ್ತೂರು ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥೆಗೆ 5 ಕೋಟಿ ಅನುದಾನ
ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ
ಬೆಂಗಳೂರು ಕರಗ ಉತ್ಸವ ಆಚರಿಸುವ 139 ಸಂಸ್ಥೆಗಳಿಗೆ , ಆದಿಶಕ್ತಿ ಮಾತೆಯರ ವೃದ್ಧಾಶ್ರಮ
ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ
ಮಂಡ್ಯದ ಕರ್ನಾಟಕ ಸಂಘ, ಜಾನಪದ ಪರಿಷತ್, ಮಲೇಬೆನ್ನೂರಿನ ವೀರಭದ್ರೇಶ್ವರ ಟ್ರಸ್ಟ್ಗೆ ತಲಾ 1 ಕೋಟಿ ರೂ.
ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹೆಸರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ
02:08 PM (IST) Feb 08
ಜಾನಪದ ಜಾತ್ರೆಗೆ ಮರು ಜೀವ
ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಆಯೋಜನೆ
ಜಾನಪದ ಜಾತ್ರೆ ಆಯೋಜಿಸಲು 2 ಕೋಟಿ ರೂ. ಅನುದಾನ
02:07 PM (IST) Feb 08
ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ
ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ
ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ
ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.
ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
02:07 PM (IST) Feb 08
ಬೀದರ್ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ
ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ
ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ- 200 ಕೋಟಿ ಅನುದಾನ
02:06 PM (IST) Feb 08
ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ
ರಾಜ್ಯದ 5 ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ
ದಾವಣಗೆರೆ, ತುಮಕೂರು, ಧಾರವಾಡ, ಗದಗ, ಕಲಬುರಗಿಯಲ್ಲಿ ಮುಸ್ಲಿಂ ಹೆಣ್ಮಕ್ಕಳ ಹಾಸ್ಟೆಲ್
ಮುಸ್ಲಿಂ ಖಬರ್ಸ್ತಾನಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
ಅಲ್ಪಸಂಖ್ಯಾತರ ಮೂಲ ಸೌಲಭ್ಯ ಅಭಿವೃದ್ಧಿಗೆ 400 ಕೋಟಿ ರೂ.
02:05 PM (IST) Feb 08
ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ
ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ
ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ 10 ಕೋಟಿ ಅನುದಾನ
02:04 PM (IST) Feb 08
ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.
ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ
ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗೆ 134 ಕೋಟಿ
02:04 PM (IST) Feb 08
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 100 ಶಾಲೆಗಳನ್ನು ಪಿಯುಸಿ ಕೋರ್ಸ್ಳೊಂದಿಗೆ ಮೇಲ್ದರ್ಜೆಗೆ
ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ.
4 ಮೊರಾರ್ಜಿ ಕಾಲೇಜುಗಳಲ್ಲಿ ಐಐಟಿ/ ನೀಟ್ ತರಬೇತಿ ಕೇಂದ್ರ ಆರಂಭಿಸಲು 4 ಕೋಟಿ ಅನುದಾನ
ಹಿಂದುಳಿದ ವರ್ಗಗಳ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಕ್ಕೆ 40 ಕೋಟಿ ರೂ.
ಅಲೆಮಾರಿ ಅಭಿವೃದ್ದಿ ನಿಗಮಕ್ಕೆ 20 ಕೋಟಿ ಅನುದಾನ
ಅಲೆಮಾರಿ ಆಚಾರ ವಿಚಾರಗಳ ಅಧ್ಯಯನಕ್ಕೆ 11 ಕೋಟಿ ರೂ.
02:02 PM (IST) Feb 08
ಬೆಂಗಳೂರಲ್ಲಿ 8 ಹೊಸ ಸೈಬರ್ ಎಕಾನಿಮಿಕ್ ನಾರ್ಕೋಟಿಕ್ ವಿಂಗ್
ಹೊಸ ವಿಂಗ್ ಆರಂಭಕ್ಕೆ 4 ಕೋಟಿ ರೂಪಾಯಿ ಅನುದಾನ ಮೀಸಲು
ಪೊಲೀಸ್ ಕಾಲೋನಿಗಳ ಮೂಲ ಸೌಲಭ್ಯಕ್ಕಾಗಿ 20 ಕೋಟಿ ಅನುದಾನ
ಅಪರಾಧ ನಿಯಂತ್ರಣ ಮತ್ತು ಕಾನೂನು ವ್ಯವಸ್ಥೆ ಕಾಪಾಡಲು ವ್ಯವಸ್ಥೆ
02:01 PM (IST) Feb 08
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರಗಳ ಸ್ಥಾಪನೆಗೆ ಈ ಸಲ ನಿರ್ಧಾರ
ದಾವಣಗೆರೆ, ಹೊಸಕೋಟೆ ಹಾಗೂ ಮದ್ದೂರು ನಗರದಲ್ಲಿ ಕೇಂದ್ರಗಳ ಸ್ಥಾಪನೆ
2019-20ರ ಸಾಲಿನಲ್ಲಿ 4 ಸಾರಿಗೆ ಸಂಸ್ಥೆಗಳಿಗೆ 3,544 ವಿವಿಧ ಮಾದರಿ ಬಸ್ ಗಳು
ಹೊಸದಾಗಿ 44 ಬಸ್ ನಿಲ್ದಾಣಗಳು ಹಾಗೂ 10 ಬಸ್ ಘಟಕಗಳ ಸ್ಥಾಪನೆ ಕ್ರಮ
ಜಿಲ್ಲೆ, ಪ್ರಮುಖ ತಾಲೂಕು ಕೇಂದ್ರದ ಬಸ್ ನಿಲ್ದಾಣಗಳಲ್ಲಿ ಮಗು ಆರೈಕೆ ಕೊಠಡಿ
01:57 PM (IST) Feb 08
ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ
1 ಸಾವಿರ ಅಂಗನವಾಡಿ ಕಟ್ಟಡ ದುರಸ್ತಿಗೆ 10 ಕೋಟಿ ಅನುದಾನ
ಚಿಕ್ಕಮಗಳೂರಿನಲ್ಲಿ ಬಾಲಕಿಯರ ಬಾಲಮಂದಿರ ಆರಂಭ
10 ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಗಳ ಪರಿವರ್ತನೆಗೆ 3 ಕೋಟಿ ಅನುದಾನ