Published : Feb 08, 2019, 12:35 PM ISTUpdated : Feb 08, 2019, 02:44 PM IST

Live|: ಚುನಾವಣೆಗೂ ದೋಸ್ತಿ? ಬಿಜೆಪಿಯೊಂದಿಗೆ ಕುಸ್ತಿ: ಕುಮಾರಣ್ಣ ಬಜೆಟ್ ರಾಜ್ಯದ ಆಸ್ತಿ!

ಸಾರಾಂಶ

ಅಡ್ಡಿ ಆತಂಕಗಳ ನಡುವೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ 2019-20ರ ಆಯವ್ಯಯ ಮಂಡಿಸಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದರು. ಯಾವುದೇ ಬೆಳವಣಿಗೆಗಳಿಗೂ ವಿಚಲಿತರಾದಗ ಸಿಎಂ, ಬಜೆಟ್ ಮಂಡಿಸುತ್ತಿದ್ದಾರೆ.

Live|: ಚುನಾವಣೆಗೂ ದೋಸ್ತಿ? ಬಿಜೆಪಿಯೊಂದಿಗೆ ಕುಸ್ತಿ: ಕುಮಾರಣ್ಣ ಬಜೆಟ್ ರಾಜ್ಯದ ಆಸ್ತಿ!

05:04 PM (IST) Feb 08

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

04:38 PM (IST) Feb 08

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

ಓದಿನ ಜೊತೆಗೆ ಆಟೋಟಗಳಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒತ್ತು ನೀಡಿದ್ದು, ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ಗಳನ್ನು ಘೋಷಣೆ ಮಾಡಲಾಗಿದೆ.

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

04:36 PM (IST) Feb 08

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಳಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

04:23 PM (IST) Feb 08

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

ರಾಜ್ಯದ ದುಡಿಯುವ ಸಮುದಾಯಕ್ಕೆ ತಮ್ಮ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದಾರೆ. ಅದರಂತೆ ರಾಜ್ಯದ ಚಾಲನಾ ಶಕ್ತಿಯಾಗಿರುವ ದುಡಿಯುವ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ನೀಡಿದ್ದಾರೆ

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

04:21 PM (IST) Feb 08

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ಇದರ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

04:18 PM (IST) Feb 08

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

 

04:16 PM (IST) Feb 08

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

03:55 PM (IST) Feb 08

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

03:51 PM (IST) Feb 08

ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ

ನಾವು ಕೂಡ ಜನರಿಂದ ಅಯ್ಕೆಯಾಗಿ ಬಂದವರು ನಾವು ಕೂಡ ಶಾಸಕರೇ. ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಐಸ್ ಕ್ಯಾಂಡಿ ಬಜೆಟ್. ಬಿಸಿಲಿನಲ್ಲಿ ಇಟ್ರೆ ಹಾಗೇ ಕರಗಿಹೋಗುತ್ತೆ. ರೈತರ ಸಾಲ ಮನ್ನಾ ಮಾಡಿಲ್ಲ. ಇದನ್ನ ತಪ್ಪಿಸಿಕೊಳ್ಳಬೇಕು ಅಂತ ಇವತ್ತು ಯಾವೋದು ಅಡಿಯೋ ರೀಲಿಸ್ ಮಾಡಿದ್ದಾರೆ. ನಮ್ಮ ನಾಯಕ ಬಿಎಸ್ ವೈ ಬಗ್ಗೆ ಆರೋಪ ಮಾಡಿದ್ದಾರೆ. ಸಿಎಂ ರಾಜೀನಾಮೆ ಕೊಡಬೇಕು ..
ಪ್ರತಿನಿತ್ಯ ‌ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಪ್ಪಿಸಿಕೊಂಡಿದ್ದಾರೆ. 

-ಆರ್ ಅಶೋಕ್, ಬಿಜೆಪಿ ನಾಯಕ

03:50 PM (IST) Feb 08

ಬಜೆಟ್‌ನಲ್ಲಿ ರಾಜ್ಯ ಪೊಲೀಸರಿಗೆ ಭಾರಿ ನಿರಾಸೆ.!

ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿ ಮಾಡದ ಸಿಎಂ .!

ಬಜೆಟ್ ನಲ್ಲಿ ಔರಾದ್ಕರ್ ವರದಿ ಎದುರು ನೋಡುತ್ತಿದ್ದ ರಾಜ್ಯ ಪೊಲೀಸರು.!

ಔರದ್ಕರ್ ಜಾರಿ ಮಾಡುವುದಾಗಿ ಪೊಲೀಸರಿಗೆ ನೀರಿಕ್ಷೆ ಹುಟ್ಟಿಸ್ಸಿದ್ದ ಸಿಎಂ .!

ಆದ್ರೆ ಬಜೆಟ್ ನಲ್ಲಿ ಔರದ್ಕರ್ ಜಾರಿಯಾಗದ ಹಿನ್ನೇಲೆ ನಿರಾಸೆಗೊಂಡ ಪೊಲೀಸರು..!

ಔರದ್ಕರ್  ವರದಿ ಜಾರಿ ಮಾಡದೇ ಕೇವಲ ಕಷ್ಟ ಪರಿಹಾರ ಭತ್ಯೆ ಅನುಧಾನವನ್ನ ಕೋಟ್ಟ ಸಿಎಂ.!

ಔರದ್ಕರ್ ವರದಿ ಜಾರಿಯಾಗಿದ್ರೆ ಪೊಲೀಸರಿಗೆ ಹೆಚ್ಚಾಗುತ್ತಿದ್ದ 30  ಪರ್ಸೆಂಟ್ ವೇತನ
 

03:49 PM (IST) Feb 08

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ರಾಜ್ಯ ಬಜೆಟ್ ನಲ್ಲಿ ಮಹದಾಯಿ ಯೋಜನೆ ನಿರ್ಲಕ್ಷ್ಯ ಹಿನ್ನೆಲೆ

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದರು ವಿಭಿನ್ನ ಪ್ರತಿಭಟನೆ

ತಮಟೆ ಬಾರಿಸುವ ಮೂಲಕ ವಿಭಿನ್ನ ಪ್ರತಿಭಟನೆ

ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ

ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಳಂಬ

ಯೋಜನೆ ಜಾರಿ ಹಾಗೂ‌ ಅನುದಾನ ತೆಗೆದಿಡದಿರಲು ಆಕ್ರೋಶ

03:08 PM (IST) Feb 08

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

 ಇನ್ನು ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ)  ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು  17,212 ಕೋಟಿ ರೂ. ಅನುದಾನ ನೀಡಿದ್ದಾರೆ.

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

03:06 PM (IST) Feb 08

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 

03:05 PM (IST) Feb 08

ಕಾರ್ಮಿಕರಿಗೆ ಬಂಪರ್ ಸ್ಕೀಮ್ಸ್

ಕಟ್ಟಡ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರಿಗೆ ಯೋಜನೆ

ಶ್ರಮಿಕ ಸೌರಭ ಯೋಜನೆಗೆ ಜಾರಿಗೆ ರಾಜ್ಯ ಸರ್ಕಾರದಿಂದ ನಿರ್ಧಾರ

ಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 5 ಲಕ್ಷ ಮುಂಗಡ ಹಣ

ಕಾರ್ಮಿಕರ ಸ್ವಂತ ಮನೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ

ಕಾರ್ಮಿಕ -ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ ಚಿಕಿತ್ಸೆ ವೆಚ್ಚ

ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂ ಪರಿಹಾರ

ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕೂ 2,500 ರೂ

ಕಾರ್ಮಿಕರ ಮಕ್ಕಳ ಸ್ವಯಂ ಉದ್ಯೋಗ ಪ್ರೋತ್ಸಾಹಕ್ಕೆ 50 ಸಾವಿರ

ಉದ್ಯೋಗ ಪ್ರೋತ್ಸಾಹಿಸಲು 50 ಸಾವಿರ ಬಡ್ಡಿರಹಿತ ಸಹಾಯಧನ

03:03 PM (IST) Feb 08

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವು

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ವ್ಯವಸ್ಥೆ

ಪೆಟ್ರೋಲ್ ಆಟೋ ಎಲೆಕ್ಟ್ರಿಕ್ ಆಟೋ ಪರಿವರ್ತನೆಗೆ ಸಹಾಯಧನ

ಸಾರಿಗೆ ಇಲಾಖೆ ಮೂಲಕ ಈ ಯೋಜನೆಗೆ 30 ಕೋಟಿ ರೂಪಾಯಿ

ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಚಾಲಕರ ದಿನಾಚರಣೆ

ಎಲ್ಲಾ ಜಿಲ್ಲೆಗಳಲ್ಲಿಯೂ ಚಾಲಕರ ದಿನಾಚರಣೆ ಮಾಡಲು ತೀರ್ಮಾನ

ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ್ದರೆ ಪುರಸ್ಕಾರ

ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ ಪುರಸ್ಕಾ

02:43 PM (IST) Feb 08

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ. 

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

02:43 PM (IST) Feb 08

ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಮಾಹಿತಿ ತಂತ್ರಜ್ಞಾನ ನೀತಿ ಪರಿಷ್ಕರಣೆ ಮಾಡಲು ತೀರ್ಮಾನ 

ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ

ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಹೊಸ ಪರಿಪೋಷಣಗಳ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ

ತುಮಕೂರಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ

7 ಕೋಟಿ ರೂಪಾಯಿ ವೆಚ್ಚದಲ್ಲಿ K-Tech ನಾವೀನ್ಯತೆ ಕೇಂದ್ರ

ಕೆ-ಟೆಕ್ ಇನ್ನೋವೇಷನ್ ಹಬ್ ಸ್ಥಾಪನೆಗೆ 7 ಕೋಟಿ ರೂಪಾಯಿ
 

02:41 PM (IST) Feb 08

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ

ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ತಂತ್ರಜ್ಞಾನ ಬಳಸಿ ಸಮೀಕ್ಷೆ

02:38 PM (IST) Feb 08

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

02:22 PM (IST) Feb 08

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಧಾನ್ಯ ವಿತರಣೆಗೆ 3,700 ಕೋಟಿ ರೂ. ಅನುದಾನ
 

02:22 PM (IST) Feb 08

'ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು' ಯೋಜನೆ ಜಾರಿ ವ್ಯವಸ್ಥೆ

ಎಲ್ಲಾ ಇಲಾಖೆಗಳ ಯೋಜನೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ

ಆಧಾರ್ ಆಧಾರಿತ ವಿನೂತನವಾದ 'ನೇರ ನಗದು ವರ್ಗಾವಣೆ' ಗೆ ವ್ಯವಸ್ಥೆ

'ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು' ಯೋಜನೆ ಜಾರಿ ವ್ಯವಸ್ಥೆ

ಆಯ್ದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೇ ತಲುಪಿಸುವುದಕ್ಕೆ ವ್ಯವಸ್ಥೆ
 

02:20 PM (IST) Feb 08

ಕೌನ್ಸಿಲಿಂಗ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ

ಕೌನ್ಸಿಲಿಂಗ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ

ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ಕಾಯ್ದೆ

ಎಲ್ಲಾ ಇಲಾಖೆಗಳಲ್ಲೂ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ

ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆ ವ್ಯವಸ್ಥೆ

02:19 PM (IST) Feb 08

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ KSTDCಯಿಂದಲೇ ಹೊಸ ಬಸ್ ಗಳು

ಬಾದಾಮಿ ಪ್ರವಾಸಿ ತಾಣ-ಕರಕುಶಲ ಮಾರುಕಟ್ಟೆ ಅಭಿವೃದ್ಧಿಗೆ 25 ಕೋಟಿ ರೂ

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ KSTDCಯಿಂದಲೇ ಹೊಸ ಬಸ್ ಗಳು 

ಲಂಡನ್ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ

6 ಡಬಲ್ ಡೆಕ್ಕರ್ ತೆರೆದ ಬಸ್ ಖರೀದಿಸಲು 5 ಕೋಟಿ ರೂಪಾಯಿ

ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ ಆಯೋಜನೆಗೆ 2 ಕೋಟಿ

ಹಂಪಿಯಲ್ಲಿ ಹಂಪಿ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ ರೂಪಾಯಿ ಅನುದಾನ

ವಿಜಯಪುರದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ

ಪಣಂಬೂರು ಮತ್ತು ಸಸಿಹಿತ್ಲುವನಲ್ಲಿ ಕಡಲ ತೀರ ಪ್ರವಾಸೋದ್ಯಮ ಅಭಿವೃದ್ಧಿ

ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂಪಾಯಿ ಅನಿುದಾನ

ಪ್ರವಾಸೋದ್ಯಮ ಇಲಾಖೆ 834 ಸಂರಕ್ಷಿತ ಸ್ಮಾರಕಗಳಲ್ಲಿ 600 ಸ್ಮಾರಕಗಳ ಸಮೀಕ್ಷೆ

02:18 PM (IST) Feb 08

ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ ವಿಶೇಷ ಅನುದಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ ವಿಶೇಷ ಅನುದಾನ

ಸರ್ಕಾರದ ಯೋಜನೆಗಳ ಪ್ರಚಾರದ ಕಾರ್ಯ ಕೈಗೊಳ್ಳಲು ಹೊಸ ಘಟಕ

ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕ ಪ್ರಾರಂಭಿಸುವುದಕ್ಕೆ ಕ್ರಮ

ತುಳು, ಕೊಡವ, ಕೊಂಕಣಿ ಭಾಷಾ ಸಿನಿಮಾಗಳ ಪ್ರೋತ್ಸಾಹ ಕಾರ್ಯಕ್ರಮ

ಪ್ರೋತ್ಸಾಹ ಕಾರ್ಯಕ್ರಮಕ್ಕಾಗಿ 1 ಕೋಟಿ ರೂಪಾಯಿ ಅನುದಾನ ಮೀಸಲು

02:17 PM (IST) Feb 08

ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ

ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ

ಭಾರತೀಯ ಕ್ರೀಡಾ ಪ್ರಾಧಿಕಾರದಂತೆಯೇ, ವಸತಿ ನಿಲಯಗಳಲ್ಲಿ ಭತ್ಯೆ

ಊಟೋಪಾಚರದ ಭತ್ಯೆ ಹೆಚ್ಚಳಕ್ಕೆ 6 ಕೋಟಿ ರೂ. ಅನುದಾನ

02:16 PM (IST) Feb 08

13ರಿಂದ 15ರ ವಯೋಮಾನದವರಿಗೆ ಮಿನಿ ಒಲಿಂಪಿಕ್ಸ್

ಜ. ತಿಮ್ಮಯ್ಯ ಸಾಹಸ ಅಕಾಡೆಮಿ ಮೂಲಕ 10 ಸ್ಥಳಗಳಲ್ಲಿ ಕ್ರೀಡೋತ್ಸವಕ್ಕೆ 2 ಕೋಟಿ ಅನುದಾನ

13ರಿಂದ 15ರ ವಯೋಮಾನದವರಿಗೆ ಮಿನಿ ಒಲಿಂಪಿಕ್ಸ್

ವಿರಾಜಪೇಟೆಯ ಬಾಳಗೋಡದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ

02:12 PM (IST) Feb 08

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

ಬಜೆಟ್ ಆರಂಭದಲ್ಲೇ ರಾಜ್ಯದ ರೈತ ಸಮುದಾಯವನ್ನು ನೆನೆದ ಸಿಎಂ ಕುಮಾರಸ್ವಾಮಿ, ತಮ್ಮ ಸರ್ಕಾರ ಅನ್ನದಾತನ ಕಣ್ಣೀರು ಒರೆಸಲು ಬದ್ಧವಾಗಿದೆ ಎಂದು ಹೇಳಿದರು.

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

02:11 PM (IST) Feb 08

ಎರಡು ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ಹೆಚ್ಚುವರಿ ಹಣ

ಎರಡು ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ಹೆಚ್ಚುವರಿ ಹಣ

ಕಾರ್ಯನಿರತ ಪತ್ರಕರ್ತರ ಕ್ಷೇಮನಿಧಿ ದತ್ತಿಗೆ 2 ಕೋಟಿ ಹೆಚ್ಚುವರಿ ಅನುದಾನ

ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗೂ 2 ಕೋಟಿ ರೂ ಹೆಚ್ಚುವರಿ ಅನುದಾನ
 

02:10 PM (IST) Feb 08

ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.

ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.

ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಮಡಿಕೇರಿಯಲ್ಲಿ ಕ್ರೀಡಾ ಹಾಸ್ಟೆಲ್

10 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ 

ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ,

ಕಲಬುರಗಿ, ಕೋಲಾರ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕ್ರೀಡಾ ಹಾಸ್ಟೆಲ್ 

ರಾಜ್ಯದ 4 ಜಿಲ್ಲಾ ಕ್ರೀಡಾಂಗಣಗಳ ಮೇಲ್ದರ್ಜೆಗೆ, 4 ಕೋಟಿ ರೂ. ಅನುದಾನ

ಮಂಡ್ಯ, ಬೀದರ್, ತುಮಕೂರು, ಹಾಸನ ಕ್ರೀಡಾಂಗಣಗಳ ಅಭಿವೃದ್ಧಿ

02:10 PM (IST) Feb 08

ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ

ಸುತ್ತೂರು ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥೆಗೆ 5 ಕೋಟಿ ಅನುದಾನ

ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ 

ಬೆಂಗಳೂರು ಕರಗ ಉತ್ಸವ ಆಚರಿಸುವ 139 ಸಂಸ್ಥೆಗಳಿಗೆ , ಆದಿಶಕ್ತಿ ಮಾತೆಯರ ವೃದ್ಧಾಶ್ರಮ

ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ

ಮಂಡ್ಯದ ಕರ್ನಾಟಕ ಸಂಘ, ಜಾನಪದ ಪರಿಷತ್, ಮಲೇಬೆನ್ನೂರಿನ ವೀರಭದ್ರೇಶ್ವರ ಟ್ರಸ್ಟ್ಗೆ ತಲಾ 1 ಕೋಟಿ ರೂ.

ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹೆಸರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ

02:08 PM (IST) Feb 08

ಜಾನಪದ ಜಾತ್ರೆಗೆ ಮರು ಜೀವ

ಜಾನಪದ ಜಾತ್ರೆಗೆ ಮರು ಜೀವ

ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಆಯೋಜನೆ

ಜಾನಪದ ಜಾತ್ರೆ ಆಯೋಜಿಸಲು 2 ಕೋಟಿ ರೂ. ಅನುದಾನ
 

02:07 PM (IST) Feb 08

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 

02:07 PM (IST) Feb 08

ಬೀದರ್ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ

ಬೀದರ್‌ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ 

ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ- 200 ಕೋಟಿ ಅನುದಾನ
 

02:06 PM (IST) Feb 08

ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ

ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ

ರಾಜ್ಯದ 5 ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ 

ದಾವಣಗೆರೆ, ತುಮಕೂರು, ಧಾರವಾಡ, ಗದಗ, ಕಲಬುರಗಿಯಲ್ಲಿ ಮುಸ್ಲಿಂ ಹೆಣ್ಮಕ್ಕಳ ಹಾಸ್ಟೆಲ್

ಮುಸ್ಲಿಂ ಖಬರ್ಸ್ತಾನಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ

ಅಲ್ಪಸಂಖ್ಯಾತರ ಮೂಲ ಸೌಲಭ್ಯ ಅಭಿವೃದ್ಧಿಗೆ 400 ಕೋಟಿ ರೂ.
 

02:05 PM (IST) Feb 08

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ

ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ

ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ 10 ಕೋಟಿ ಅನುದಾನ
 

02:04 PM (IST) Feb 08

ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.

ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.

ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ

ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗೆ 134 ಕೋಟಿ 
 

02:04 PM (IST) Feb 08

ಪ. ಜಾತಿ ಮತ್ತು ಪ. ಪಂಗಡ ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳ ಪ್ರಾರಂಭ

ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 100 ಶಾಲೆಗಳನ್ನು ಪಿಯುಸಿ ಕೋರ್ಸ್‌ಳೊಂದಿಗೆ ಮೇಲ್ದರ್ಜೆಗೆ

ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ.

4 ಮೊರಾರ್ಜಿ ಕಾಲೇಜುಗಳಲ್ಲಿ ಐಐಟಿ/ ನೀಟ್ ತರಬೇತಿ ಕೇಂದ್ರ ಆರಂಭಿಸಲು 4 ಕೋಟಿ ಅನುದಾನ

ಹಿಂದುಳಿದ ವರ್ಗಗಳ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಕ್ಕೆ 40 ಕೋಟಿ ರೂ.

ಅಲೆಮಾರಿ ಅಭಿವೃದ್ದಿ ನಿಗಮಕ್ಕೆ 20 ಕೋಟಿ ಅನುದಾನ

ಅಲೆಮಾರಿ ಆಚಾರ ವಿಚಾರಗಳ ಅಧ್ಯಯನಕ್ಕೆ 11 ಕೋಟಿ ರೂ.

02:02 PM (IST) Feb 08

ಬೆಂಗಳೂರಲ್ಲಿ 8 ಹೊಸ ಸೈಬರ್ ಎಕಾನಿಮಿಕ್ ನಾರ್ಕೋಟಿಕ್ ವಿಂಗ್

ಬೆಂಗಳೂರಲ್ಲಿ 8 ಹೊಸ ಸೈಬರ್ ಎಕಾನಿಮಿಕ್ ನಾರ್ಕೋಟಿಕ್ ವಿಂಗ್ 

ಹೊಸ ವಿಂಗ್ ಆರಂಭಕ್ಕೆ 4 ಕೋಟಿ ರೂಪಾಯಿ ಅನುದಾನ ಮೀಸಲು

ಪೊಲೀಸ್ ಕಾಲೋನಿಗಳ ಮೂಲ ಸೌಲಭ್ಯಕ್ಕಾಗಿ 20 ಕೋಟಿ ಅನುದಾನ

ಅಪರಾಧ ನಿಯಂತ್ರಣ ಮತ್ತು ಕಾನೂನು ವ್ಯವಸ್ಥೆ ಕಾಪಾಡಲು ವ್ಯವಸ್ಥೆ
 

02:01 PM (IST) Feb 08

ಸ್ವಯಂಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆ

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರಗಳ ಸ್ಥಾಪನೆಗೆ ಈ ಸಲ ನಿರ್ಧಾರ

ದಾವಣಗೆರೆ, ಹೊಸಕೋಟೆ ಹಾಗೂ ಮದ್ದೂರು ನಗರದಲ್ಲಿ ಕೇಂದ್ರಗಳ ಸ್ಥಾಪನೆ

2019-20ರ ಸಾಲಿನಲ್ಲಿ 4 ಸಾರಿಗೆ ಸಂಸ್ಥೆಗಳಿಗೆ 3,544 ವಿವಿಧ ಮಾದರಿ ಬಸ್ ಗಳು

ಹೊಸದಾಗಿ 44 ಬಸ್ ನಿಲ್ದಾಣಗಳು ಹಾಗೂ 10 ಬಸ್ ಘಟಕಗಳ ಸ್ಥಾಪನೆ ಕ್ರಮ

ಜಿಲ್ಲೆ, ಪ್ರಮುಖ ತಾಲೂಕು ಕೇಂದ್ರದ ಬಸ್ ನಿಲ್ದಾಣಗಳಲ್ಲಿ ಮಗು ಆರೈಕೆ ಕೊಠಡಿ
 

01:57 PM (IST) Feb 08

ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ

ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ

1 ಸಾವಿರ ಅಂಗನವಾಡಿ ಕಟ್ಟಡ ದುರಸ್ತಿಗೆ 10 ಕೋಟಿ ಅನುದಾನ

ಚಿಕ್ಕಮಗಳೂರಿನಲ್ಲಿ ಬಾಲಕಿಯರ ಬಾಲಮಂದಿರ ಆರಂಭ

10 ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಗಳ ಪರಿವರ್ತನೆಗೆ 3 ಕೋಟಿ ಅನುದಾನ