ಬಹು ನಿರೀಕ್ಷಿತ ಮೋದಿ ಸರಕಾರ 2.0ರ 2ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಕಾಶ್ಮೀರಿ ಕವನದೊಂದಿಗೆ ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ, ಕೃಷಿ ವಲಯಕ್ಕೆ ಆದ್ಯತೆ ನೀಡುವುದರೊಂದಿಗೆ, ಬೀಳುತ್ತಿರುವ ಆರ್ಥಿಕತೆಗೆ ಚೈತನ್ನ ನೀಡಲು ಒತ್ತು ನೀಡುವಂತೆ ಕಾಣುತ್ತಿದೆ. ಬಜೆಟ್ನ ವಿಶ್ಲೇಷಣಾ ಸುದ್ದಿಗಳಿಗೆ ಲೈವ್ ಬ್ಲಾಗ್ ಫಾಲೋ ಮಾಡಿ...
06:38 PM (IST) Feb 01
06:03 PM (IST) Feb 01
ನಿರ್ಮಲಾ ಮಂಡಿಸಿದ್ದು ಟಿಂಕರಿಂಗ್ ಬಜೆಟ್
05:46 PM (IST) Feb 01
ಅಂಗನವಾಡಿ ಮೇಡಂ ಕೈಗ ಮೊಬೈಲ್ ಕೊಟ್ಟರೆ ದೇಶ ಉದ್ದಾರವಾಗುತ್ತಾ?
05:14 PM (IST) Feb 01
ನಿರ್ಮಲಾ ಬಜೆಟ್ ಮಂಡಿಸಿದ ಬಳಿಕ ಕುಸಿಯಿತು ಶೇರುಪೇಟೆ
05:12 PM (IST) Feb 01
ಬೆಂಗಳೂರು ಸೌತ್ ಸಂಸದ ಬಜೆಟ್ಗೆ ಪ್ರತಿಕ್ರಿಯೆ ನೀಡಿದ್ದು ಹೇಗೆ?
04:31 PM (IST) Feb 01
ಆಧಾರ್ ಮತ್ತು ಪ್ಯಾನ್ ಕಾರ್ಡ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ಷಣಾರ್ಧದಲ್ಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಒದಗಿಸುವ ವಿನೂತನ ವ್ಯವಸ್ಥೆ ಜಾರಿಗೆ ತಂದಿದೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
04:27 PM (IST) Feb 01
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು ಕೇಂದ್ರ ಬಜೆಟ್ ಮಮಡಿಸಿದ್ದಾರೆ. ಈ ವೇಳೆ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ್ದರೂ, ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಮಂಡನೆ ವೇಳೆ ನಿರ್ಮಲಾ ಆರೋಗ್ಯ ಹದಗೆಟ್ಟ ಪರಿಣಾಮ ಬಜೆಟ್ ನ ಕೊನೆಯ ಕೆಲ ಪುಟಗಳನ್ನು ಓದಲು ಆಗಲಿಲ್ಲ.
ಮುಂದೇನಾಯ್ತು? ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
04:25 PM (IST) Feb 01
ನೆಲಕಚ್ಚಿರುವ ಕೈಗಾರಿಕಾ ವಲಯವನ್ನು ಮೇಲೆತ್ತಲು ಈ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಪ್ರಮುಖವಾಗಿ ಮೂಲ ಸೌಕರ್ಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲಾಗಿದೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
03:08 PM (IST) Feb 01
ನಿರ್ಮಲಾ ಬಜೆಟ್ ಮಂಡಿಸಿದ ಬೆನ್ನಲ್ಲೇ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಣಕಾಸು ಸಚಿವೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಈ ಬಜೆಟ್ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಅಲ್ಲದೇ ಇದೊಂದು ಅಭಿವೃದ್ಧಿ ಹಾಗೂ ರೈತ ಪರ ಬಜೆಟ್ ಎಂದಿದ್ದಾರೆ.
03:05 PM (IST) Feb 01
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್ನ ಆಕರ್ಷಣೆಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
03:01 PM (IST) Feb 01
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಯಿಸುತ್ತಾ 'ಇದು ಇತಿಹಾಸದಲ್ಲೇ ಅತಿ ಉದ್ದದ ಬಜೆಟ್ ಭಾಷಣವಾಗಿರಬಹುದು ಆದರೆ ಬಜೆಟ್ನ್ಲಲಿ ಏನೂ ಇಲ್ಲ, ಇದು ಸಂಪೂರ್ಣ ಟೊಳ್ಳು' ಎಂದಿದ್ದಾರೆ
02:55 PM (IST) Feb 01
ಮೋದಿ ಸರ್ಕಾರದ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಬಜೆಟ್ ಮಂಡಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಿದೆ. ತೆರಿಗೆದಾರರಿಗೂ ಸಿಹಿ ಸುದ್ದಿ ಕೊಟ್ಟಿರುವ ನಿರ್ಮಲಾ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಬಿಡಿ ಮುಟ್ಟಿಸಿದ್ದಾರೆ. ಹಾಗಾದ್ರೆ ಬಜೆಟ್ ಜಾರಿ ಬಳಿಕ ಯಾವುದೆಲ್ಲಾ ಅಗ್ಗವಾಗುತ್ತೆ? ಯಾವೆಲ್ಲಾ ವಸ್ತುಗಳು ದುಬಾರಿಯಾಗುತ್ತೆ? ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ
02:54 PM (IST) Feb 01
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್ನ ಆಕರ್ಷಣೆಯಾಗಿದೆ.
ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
02:02 PM (IST) Feb 01
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಮಂಡನೆ ಬಳಿಕ ಈ ಕುರಿತಾದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ
02:00 PM (IST) Feb 01
ಆಮದು ವೈದ್ಯೋಪಕರಣಗಳ ಮೇಲೆ ಸೆಸ್ , ಚಪ್ಪಲಿ, ಪೀಠೋಪಕರಣ ದುಬಾರಿ
01:49 PM (IST) Feb 01
ಸಹಕಾರಿ ಸಂಘಗಳ ಹೋರಾಟಕ್ಕೆ ಸಿಕ್ತು ದೊಡ್ಡ ಗೆಲುವು, ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೇ.30ರಿಂದ 22ಕ್ಕೆ ಇಳಿಕೆ, ತೆರಿಗೆ ಇಳಿಕೆಗೆ 16 ವರ್ಷದಿಂದ ನಡೆದ ಹೋರಾಟಕ್ಕೆ ಮನ್ನಣೆ
01:47 PM (IST) Feb 01
ಪಾನ್ ಕಾರ್ಡ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ!, ಆಧಾರ್ ಸಂಖ್ಯೆಯ ಆಧಾರದ ಮೇಲೆ ಪ್ಯಾನ್ ಕಾರ್ಡ್ ಮಂಜೂರು
01:42 PM (IST) Feb 01
ಬಾಕಿ ತೆರಿಗೆ ಕಟ್ಟಿದರೆ ದಂಡ, ಬಡ್ಡಿ ಮನ್ನಾಗೆ ಸ್ಕೀಮ್
ಯಾವುದೇ ವಿವಾದ ಇಲ್ಲ.. ಬರೀ ನಂಬಿಕೆ - ಸ್ಕೀಮ್
ಹಿಂದಿನ ಸಾಲಿನಲ್ಲಿ ಸಬ್ ಕಾ ವಿಶ್ವಾಸ್ ಹೆಸರಲ್ಲಿ ತೆರಿಗೆ\
ತೆರಿಗೆ ವಿವಾದ ಬಗೆಹರಿಸಲು ಹೊಸ ಸ್ಕೀಮ್ ಜಾರಿಗೆ
2020ರ ಮಾರ್ಚ್ ಒಳಗೆ ತೆರಿಗೆ ಬಾಕಿ ಕಟ್ಟಿದ್ರೆ ಸಾಕು
ತೆರಿಗೆ ಮೇಲೆ ಯಾವುದೇ ಬಡ್ಡಿ ವಿಧಿಸುವ ಪ್ರಶ್ನೆ ಇಲ್ಲ
ಯಾವುದೇ ದಂಡ, ಯಾವುದೇ ತೆರಿಗೆ ವಿಧಿಸುವುದಿಲ್ಲ
4.83 ಲಕ್ಷ ನೇರ ತೆರಿಗೆ ಕೇಸುಗಳ ಇತ್ಯರ್ಥಕ್ಕೆ ಸ್ಕೀಮ್
01:37 PM (IST) Feb 01
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಪರ್: ಡೆವಲಪರ್ಸ್ ಕಂಪನಿಗಳಿಗೆ ಒಂದು ವರ್ಷ ತೆರಿಗೆ ವಿನಾಯಿತಿ, ಡೆವಲಪರ್ಸ್ ಗಳಿಸುವ ಲಾಭಕ್ಕೆ ತೆರಿಗೆ ಪಾವತಿಗೆ ವಿನಾಯಿತಿ, ವಸತಿಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತೆರಿಗೆ ವಿನಾಯ್ತಿ
01:36 PM (IST) Feb 01
ಸ್ಟಾರ್ಟ್ ಅಪ್ ಕಂಪನಿಗಳಿಗೆ ಬಂಪರ್, 5 ವರ್ಷ ಸ್ಟಾರ್ಟ್ ಅಪ್ ಕಂಪನಿಗಳಿಗೆ ಯಾವುದೇ ತೆರಿಗೆ ಇಲ್ಲ, ಸ್ಟಾರ್ಟ್ ಅಪ್ ಕಂಪನಿಗಳ ಉತ್ತೇಜನಕ್ಕೆ ಕೇಂದ್ರದ ಕೊಡುಗೆ
01:35 PM (IST) Feb 01
ಅತ್ತ ಬಜೆಟ್ ಮಂಡನೆ ಇತ್ತ ಷೇರು ಮಾರುಕಟ್ಟೆ ತಲ್ಲಣ, 582.87 ಅಂಕ ಇಳಿಕೆ
01:30 PM (IST) Feb 01
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ತೆರಿಗೆದಾರರಿಗೆ ಭಾರೀ ವಿನಾಯ್ತಿ ಘೋಷಿಸಿರುವ ಮೋದಿ ಸರ್ಕಾರ, ಹೊಸ ಟ್ಯಾಕ್ಸ್ ಸ್ಲ್ಯಾಬ್ ಪರಿಚಯಿಸಿದೆ.ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
01:29 PM (IST) Feb 01
ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು, ಡಿವಿಡೆಂಟ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು ಘೋಷಣೆ
01:28 PM (IST) Feb 01
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ಮಹಿಳಾ ಸಮುದಾಯದತ್ತ ತಮ್ಮ ಚಿತ್ತ ಹರಿಸಿರುವ ನಿರ್ಮಲಾ ಸೀತಾರಾಮನ್, ಮಹಿಳಾ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.
ಸಂಪರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
01:19 PM (IST) Feb 01
ವೈಯಕ್ತಿಕ ತೆರಿಗೆ ಡೀಟೇಲ್ಸ್..
5 ಲಕ್ಷ ಆದಾಯದವರೆಗೂ ತೆರಿಗೆ ವಿನಾಯಿತಿ
5 ಲಕ್ಷದಿಂದ 7.5 ಲಕ್ಷದವರೆಗೆ - 10% ತೆರಿಗೆ
7.5ಲಕ್ಷದಿಂದ 10 ಲಕ್ಷದವರೆಗೆ - 15% ತೆರಿಗೆ
10 ಲಕ್ಷದಿಂದ 12.5 ಲಕ್ಷದವರೆಗೆ - 20% ತೆರಿಗೆ
12.5 ಲಕ್ಷದಿಂದ 15 ಲಕ್ಷದವರೆಗೆ - 25% ತೆರಿಗೆ
15 ಲಕ್ಷ ಮೇಲ್ಪಟ್ಟು ಆದಾಯ - 30% ತೆರಿಗೆ
01:17 PM (IST) Feb 01
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರ ಅದರಲ್ಲೂ ರೈಲ್ವೇ ಇಲಾಖೆಯ ಅಭಿವೃದ್ಧಿಗೆ ನಿರ್ಮಲಾ ಭರಪೂರ ಯೋಜನೆಗಳನ್ನು ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
01:11 PM (IST) Feb 01
ವೈಯಕ್ತಿಕ ತೆರಿಗೆಯಲ್ಲಿ ಭಾರಿ ಇಳಿಕೆ: 5ರಿಂದ 7.5 ಲಕ್ಷ ಆದಾಯಕ್ಕೆ ಶೇಕಡ 10ರಷ್ಟು ತೆರಿಗೆ, ಶೇಕಡ 20ರಷ್ಟು ತೆರಿಗೆ ಬದಲು ಶೇಕಡ 10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷ ಆದಾಯಕ್ಕೆ ಶೇಕಡ 15 ತೆರಿಗೆ, 10 ಲಕ್ಷದಿಂದ 12.5 ಲಕ್ಷ ಆದಾಯಕ್ಕೆ ಶೇ.20ರಷ್ಟು ತೆರಿಗೆ, 12.5 ಲಕ್ಷದಿಂದ 15 ಲಕ್ಷ ಆದಾಯಕ್ಕೆ, 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ, 2.5 ಲಕ್ಷ ಆದಾಯದವರಿಗೆ ಯಾವುದೇ ತೆರಿಗೆ ಇರಲ್ಲ, 2.5 ಲಕ್ಷದಿಂದ 5 ಲಕ್ಷದವರೆಗೆ ಶೇಕಡ 5ರಷ್ಟು ತೆರಿಗೆ
01:09 PM (IST) Feb 01
ಖರ್ಚೆಷ್ಟು? ಆದಾಯ ಎಷ್ಟು?: 2020-2021 - ಖರ್ಚು 30.42 ಲಕ್ಷ ಕೋಟಿ ರೂಪಾಯಿ, 2019-2021 - ಆದಾಯ 22.46 ಲಕ್ಷ ಕೋಟಿ ರೂಪಾಯಿ
01:07 PM (IST) Feb 01
ವಿತ್ತೀಯ ಕೊರತೆ ಟಾರ್ಗೆಟ್ 3.5%: ಇತ್ತೀಚೆಗೆ ಹೂಡಿಕೆಹೆಚ್ಚಳಕ್ಕೆ ಆರ್ಥಿಕ ಸುಧಾರಣೆ ಮಾಡಿದ್ದೇವೆ, 2019-20ರ ಸಾಲಿನಲ್ಲಿ ವಿತ್ತೀಯ ಕೊರತೆ ಶೇಕಡ 3.8 ಇತ್ತು, 2020-21ರಲ್ಲಿ ವಿತ್ತೀಯ ಕೊರತೆ 3.5ಕ್ಕೆ ಇಳಿಕೆ ಬಗ್ಗೆ ನಿರೀಕ್ಷೆ
01:06 PM (IST) Feb 01
ಸರ್ಕಾರದ ಖರ್ಚು 30.42 ಲಕ್ಷ ಕೋಟಿ ರೂ., ಅಂದಾಜು ತೆರಿಗೆ ಸಂಗ್ರಹ 22.46 ಲಕ್ಷ ಕೋಟಿ ರೂ. ಗುರಿ, ಈ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆ ಶೇ.3.8, GDP ಅಂದಾಜು ಬೆಳವಣಿಗೆ ಶೇ.10ರಷ್ಟು ನಿರೀಕ್ಷೆ
01:03 PM (IST) Feb 01
ಮೂಲಸೌಕರ್ಯ ಅಭಿವೃದ್ಧಿಗೆ 22 ಸಾವಿರ ಕೋಟಿ ರೂಪಾಯಿ, ಕೈಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೂಲಸೌಕರ್ಯಗ್ಗೆ ಆದ್ಯತೆ
01:01 PM (IST) Feb 01
ಉದ್ಯೋಗ ಹೆಚ್ಚಳದಿಂದ 5 ಲಕ್ಷ ಕಂಪನಿಗಳಿಗೆ ಸಹಾಯ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಸಾಲ ಸೌಲಭ್ಯ, IDBI ಬ್ಯಾಂಕ್ ಸಂಪೂರ್ಣ ಖಾಸಗೀಕರಣ, ಕಾರ್ಪೋರೇಟ್ ಬಾಂಡ್ಗಳಲ್ಲಿ ಹೂಡಿಕೆ ಶೇ.9 ರಿಂದ ಶೇ.15ಕ್ಕೆ ಏರಿಕೆ, ಅನಿವಾಸಿ ಭಾರತೀಯರಿಗೆ ಬಂಡವಾಳ ಹೂಡಲು ವಿಶೇಷ ಯೋಜನೆ
12:57 PM (IST) Feb 01
ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ, GST ಬಾಕಿ 2 ಕಂತುಗಳಲ್ಲಿ ರಾಜ್ಯಕ್ಕೆ ವರ್ಗಾವಣೆ, ನಗದು ಕೊರತೆ ನೀಗಿಸಲು ಕ್ರಮ
12:56 PM (IST) Feb 01
ಠೇವಣಿ ವಿಮೆ ಮೊತ್ತ 5 ಲಕ್ಷ ರೂ.ಗೆ ಏರಿಕೆ: ಠೇವಣಿದಾರರ ಹಣ ಬ್ಯಾಂಕ್ಗಳಲ್ಲಿ ಸುರಕ್ಷತೆಗೆ ಕ್ರಮ, ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 3.50 ಲಕ್ಷ ಕೋಟಿ ಬಂಡವಾಳ. ಠೇವಣಿ ವಿಮೆ ಮೊತ್ತ 1 ರಿಂದ 5 ಲಕ್ಷ ರೂ.ಗೆ ಏರಿಕೆ. ಬ್ಯಾಂಕ್ಗಳಲ್ಲಿ ಡೆಪಾಸಿಟ್ ಇಟ್ಟವರು ಭಯಪಡಬೇಕಾಗಿಲ್ಲ. ಖಾಸಗಿ ಬ್ಯಾಂಕ್ಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು
12:53 PM (IST) Feb 01
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರದ ಬಳಿಕ ಶಿಕ್ಷಣ ಕ್ಷೇತ್ರದತ್ತ ನಿರ್ಮಲಾ ಸೀತಾರಾಮನ್ ಗಮನ ಕೇಂದ್ರೀಕರಿಸಿದ್ದಾರೆ.ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
12:52 PM (IST) Feb 01
2022ರಲ್ಲಿ ಭಾರತದಲ್ಲಿ G-20 ಶೃಂಗ ಸಮ್ಮೇಳನ, G-20 ಶೃಂಗ ಸಮ್ಮೇಳನಕ್ಕೆ 100 ಕೋಟಿ ರೂ..
12:50 PM (IST) Feb 01
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ತಮ್ಮ 2ನೇ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. 2020ರ ಮೊದಲ ಬಜೆಟ್ ಇದಾಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು ಬಜೆಟ್ ತಯಾರಿಕೆಯ ವೇಳೆಯೇ ದುರಂತವೊಂದು ಸಂಭವಿಸಿದ್ದರು, ಅದನ್ನು ಲೆಕ್ಕಿಸದೇ ಬಜೆಟ್ ಕಾರ್ಯದಲ್ಲಿ ಭಾಗಿಯಾದ ಅಧಿಕಾರಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
12:48 PM (IST) Feb 01
ಲಡಾಖ್ ಪ್ರಾಂತ್ಯಕ್ಕೆ 5,958 ಕೋಟಿ ರೂ. ಅನುದಾನ: ಜಮ್ಮು-ಕಾಶ್ಮೀರಕ್ಕೆ 30,757 ಕೋಟಿ ರೂ. ವಿಶೇಷ ಅನುದಾನ ಘೋಷಣೆ, ಜಮ್ಮು-ಕಾಶ್ಮೀರಕ್ಕೆ 30,757 ಕೋಟಿ ರೂ. ವಿಶೇಷ ಅನುದಾನ ಘೋಷಣೆ