Asianet Suvarna News Asianet Suvarna News

Today Horoscope: ಇಂದು ಕೊನೆ ಕಾರ್ತಿಕ ಸೋಮವಾರ, ಈ ದಿನ ಶಿವನ ಆರಾಧನೆ ಏಕೆ ಮಾಡಬೇಕು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ,ಕೃಷ್ಣ ಪಕ್ಷ, ಸೋಮವಾರ, ಚತುರ್ದಶಿ ತಿಥಿ, ವಿಶಾಖ ನಕ್ಷತ್ರ.

ಇಂದು ಕೊನೆ ಕಾರ್ತಿಕ ಸೋಮವಾರವಾಗಿದ್ದು, ಮಾಸ ಶಿವರಾತ್ರಿಯ ಚತುರ್ದಶಿಯೂ ಇದೆ. ವೃಶ್ಚಿಕ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ವಿರೋಧಗಳು ಬರುವ ಸಾಧ್ಯತೆ. ಮಕ್ಕಳೇ ಶತ್ರುಗಳಾಗುತ್ತಾರೆ. ಕೆಲಸದಲ್ಲಿ ಅನುಕೂಲ. ಆದಿತ್ಯ ಹೃದಯ ಪಠಿಸಿ. ಧನಸ್ಸು ರಾಶಿಯವರಿಗೆ ಇಂದು ನಷ್ಟದ ದಿನ. ಸ್ತ್ರೀಯರಿಗೆ ವ್ಯಯ. ಕಾಲಿನ ಬಾಧೆ. ಉದರ ಬಾಧೆ. ಬುದ್ಧಿಬಲವೂ ಕಡಿಮೆ. ವೃತ್ತಿಯಲ್ಲಿ ಅನುಕೂಲ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  Weekly Horoscope: ಕರ್ಕಟಕ ರಾಶಿಯವರಿಗೆ ಈ ವಾರ ಮಾನಸಿಕ ಖಿನ್ನತೆ ಕಾಡಲಿದ್ದು, ಪರಿಹಾರಕ್ಕೆ ಏನು ಮಾಡಬೇಕು ?

Video Top Stories