Asianet Suvarna News Asianet Suvarna News

Today Horoscope: ವೃಶ್ಚಿಕ ರಾಶಿಯವರ ಬುದ್ಧಿಮಂದವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ.

ಇಂದು ಮಂಗಳವಾರ ಆಗಿರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ಜೊತೆಗೆ ತುಪ್ಪದ ದೀಪವನ್ನು ಹಚ್ಚಿ. ವೃಶ್ಚಿಕ ರಾಶಿಯವರಿಗೆ ಉದರ ಬಾಧೆ ಕಾಡಲಿದ್ದು, ವಾಗ್ಬಲ ಇರಲಿದೆ. ವಿದ್ಯಾರ್ಥಿಗಳಿಗೆ ಬಲ. ಬುದ್ಧಿಮಂದವಾಗುತ್ತದೆ. ಸುಬ್ರಹ್ಮಣ್ಯ ಕವಚ ಪಠಿಸಿ. ಧನಸ್ಸು ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಹೊಸ ಅವಕಾಶ ಸಾಧ್ಯತೆ. ಮನಸ್ಸು ನಿರಾಳವಾಗಲಿದೆ. ಸ್ನೇಹಿತರ ಜೊತೆ ಕಲಹ. ಜಲಕಂಟಕ. ಕಟೀಲು ದುರ್ಗಾ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  ಗಣರಾಜ್ಯೋತ್ಸವ ದಿನ ಸ್ಫೋಟಕ್ಕೆ ಸಂಚು ನಡೆಸಿದ 8 ಶಂಕಿತರ ಭಯೋತ್ಪಾದಕರ ಬಂಧನ!