ಬಿ2 ಬಾಂಬರ್ ಜೆಟ್ ಗುವಾಮ್ ದೇಶಕ್ಕೆ ಕಳಿಸಿದ ಅಮೆರಿಕ, ಇರಾನ್ ಮೇಲೆ ದಾಳಿಗೆ ಇನ್ನೊಂದೇ ಹೆಜ್ಜೆ!
ಸಾರಾಂಶ
11ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಭಾರತ ಹಾಗೂ ವಿಶ್ವಾದ್ಯಂತ ನಡೆಯುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಆಯೋಜಿಸಿರುವ ಯೋಗಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಬರೋಬ್ಬರಿ 3 ಲಕ್ಷ ಮಂದಿ ಭಾಗಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಮೋದಿ, ದೇಶದ ಜನತೆಗೆ ಯೋಗಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. 175 ದೇಶಗಳು ಯೋಗದ ಮೂಲಕ ಒಂದಾಗಿದೆ. ಯೋಗದ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
11:19 PM (IST) Jun 21
Karnataka News Live: ಬಿ2 ಬಾಂಬರ್ ಜೆಟ್ ಗುವಾಮ್ ದೇಶಕ್ಕೆ ಕಳಿಸಿದ ಅಮೆರಿಕ, ಇರಾನ್ ಮೇಲೆ ದಾಳಿಗೆ ಇನ್ನೊಂದೇ ಹೆಜ್ಜೆ!
ಬಿ-2 ಅಮೆರಿಕದ 30,000 ಪೌಂಡ್ ತೂಕದ ಜಿಬಿಯು-57 ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್ ಅನ್ನು ಹೊತ್ತೊಯ್ಯಲು ಸಾಧ್ಯವಾಗುವ ಜಗತ್ತಿನ ಏಕೈಕ ಜೆಟ್. ಇದನ್ನು ಆಳವಾದ ಭೂಗತ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ.
Karnataka News Live: ಇರಾನ್ನ ಇಸ್ಫಹಾನ್ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದ ಇಸ್ರೇಲ್!
ಒಂಬತ್ತನೇ ದಿನವೂ ಇಸ್ರೇಲ್-ಇರಾನ್ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ ಇರಾನ್ನ ಪರಮಾಣು ಕೇಂದ್ರದ ಮೇಲೆ ದಾಳಿ ನಡೆಸಿದೆ. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತಮ್ಮ ಉತ್ತರಾಧಿಕಾರಿಯನ್ನು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
Karnataka News Live: 15ರ ಬಾಲಕಿ 8 ತಿಂಗಳು ಗರ್ಭಿಣಿ - ದಲಿತ ಹುಡುಗಿಯ ಮೇಲೆ 2 ವರ್ಷ 14 ಜನರಿಂದ ಬಲಾತ್ಕಾರ!
ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದ 15 ವರ್ಷದ ಬಾಲಕಿ 8 ತಿಂಗಳು ಗರ್ಭಿಣಿ ಎಂದು ತಿಳಿದುಬಂದಿದೆ. 2 ವರ್ಷಗಳ ಕಾಲ 14 ಜನರಿಂದ ನಿರಂತರ ದೌರ್ಜನ್ಯಕ್ಕೊಳಗಾಗಿದ್ದಳು ಎಂದು ತನಿಖೆಯಿಂದ ಬಹಿರಂಗವಾಗಿದೆ.
Karnataka News Live: ಸ್ಮಾರ್ಟ್ ಸ್ಪರ್ಧೆಗೆ ಇಳಿದ ಜಿಯೋ, ಏರ್ಟೆಲ್ - ತಿಂಗಳು, ದಿನಗಳ ಬದಲು ಗಂಟೆಗಳ ರಿಚಾರ್ಜ್ ಪ್ಲ್ಯಾನ್!
ಜಿಯೋ ಮತ್ತು ಏರ್ಟೆಲ್ 11 ರೂಪಾಯಿಗೆ ಒಂದು ಗಂಟೆಗೆ 10 ಜಿಬಿ ಡೇಟಾ ನೀಡುವ ಯೋಜನೆಗಳು ಸಮಯ ಆಧಾರಿತ ಟೆಲಿಕಾಂ ಬೆಲೆಯತ್ತ ಬದಲಾವಣೆಯನ್ನು ಸೂಚಿಸುತ್ತವೆ, ಇದು ಭಾರತದಲ್ಲಿ ಡೇಟಾ ಹಣಗಳಿಕೆಯ ಭವಿಷ್ಯವನ್ನು ಸೂಚಿಸುತ್ತದೆ.
Karnataka News Live: ಇರಾನ್-ಇಸ್ರೇಲ್ ಯುದ್ಧ - ಭಾರತೀಯರನ್ನು ಬಲವಂತವಾಗಿ ಕರೆಸಿಕೊಳ್ಳಲಾಗುತ್ತಿದೆಯಾ? ಏನಿದು ವಿವಾದ
ಇಸ್ರೇಲ್ನಲ್ಲಿ ಭಾರತೀಯರ ಬಲವಂತದ ಹಿಂದಿರುಗುವಿಕೆ ಕುರಿತ ಸಾಮಾಜಿಕ ಮಾಧ್ಯಮದ ಸುದ್ದಿಗಳು ನಕಲಿ ಎಂದು ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೋರಿದೆ.
Karnataka News Live: ಶೋಭಾ ಹಿಲ್ ವ್ಯೂ ಅಪಾರ್ಟ್ಮೆಂಟ್ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 21 ರಂದು ಶೋಭಾ ಹಿಲ್ ವ್ಯೂ ಅಪಾರ್ಟ್ಮೆಂಟ್ನ ನಿವಾಸಿಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಿದರು. ಸಮುದಾಯದ ಬಾಸ್ಕೆಟ್ಬಾಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನವರು ಸಕ್ರಿಯವಾಗಿ ಭಾಗವಹಿಸಿ, ದೈನಂದಿನ ಜೀವನದಲ್ಲಿ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು.
Karnataka News Live: ಯುದ್ಧದ ನಡುವೆಯೇ ಇರಾನ್ ನಲ್ಲಿ ಭೀಕರ ಭೂಕಂಪ, ಪರಮಾಣು ಪರೀಕ್ಷೆ ನಡೆಯಿತಾ?
ಇರಾನ್ನಲ್ಲಿ ಸಂಭವಿಸಿದ ಭೂಕಂಪ ನೈಸರ್ಗಿಕವೇ ಅಥವಾ ಪರಮಾಣು ಪರೀಕ್ಷೆಯ ಪರಿಣಾಮವೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಘಟನೆ ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
Karnataka News Live: ಗಂಡ ಮಕ್ಳು ಬಿಟ್ಟು ಹೋದಾಕೆ ಬೀದಿ ಹೆಣವಾದ್ಳು, ಚಾಮರಾಜನಗರ ಒಂಟಿ ಮಹಿಳೆ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್!
ಸುವರ್ಣಾವತಿ ಹೊಳೆ ದಡದಲ್ಲಿ ಪತ್ತೆಯಾದ ಸೋನಾಕ್ಷಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ಪ್ರಿಯಕರ ಮಾದೇಶನೇ ಹಂತಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮತ್ತೊಬ್ಬನ ಜೊತೆ ಸಂಪರ್ಕ ಬೆಳೆಸಿದ್ದಕ್ಕೆ ಸಿಟ್ಟಿನಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
Karnataka News Live: ಸಣ್ಣ ಟೈಲರಿಂಗ್ ಶಾಪ್ ಹೊಂದಿದ್ದ ವ್ಯಕ್ತಿ ಇಂದು ಬೆಂಗಳೂರಿನ ಶ್ರೀಮಂತ ವ್ಯಕ್ತಿ, 12 ಸಾವಿರ ಕೋಟಿಗೆ ಮಾಲೀಕ!
ಬೆಂಗಳೂರಿನ ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್ನ ಚೇರ್ಮನ್ ಇರ್ಫಾನ್ ರಜಾಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ. ಸಣ್ಣ ಬಟ್ಟೆ ಅಂಗಡಿಯಿಂದ ಬಿಲಿಯನ್ ಡಾಲರ್ ಸಾಮ್ರಾಜ್ಯದವರೆಗಿನ ಅವರ ಪ್ರಯಾಣದ ಅದ್ಭುತ ಒಳನೋಟ.
ಎಚ್ಡಿಎಫ್ಸಿಯ ಮಾಜಿ ಅಧ್ಯಕ್ಷ ದೀಪಕ್ ಪರೇಖ್ ಅವರು ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರು ಎರಡು ಸಂಸ್ಥೆಗಳ ವಿಲೀನದ ಬಗ್ಗೆ ಮೊದಲು ಪ್ರಸ್ತಾಪಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ನಿಯಂತ್ರಕ ಒತ್ತಡದಿಂದಾಗಿ ವಿಲೀನ ನಡೆಯಿತು ಎಂದು ಅವರು ಹೇಳಿದ್ದಾರೆ.
Karnataka News Live: ಹೆಲ್ಪ್ಲೈನ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಎಫ್ಐಆರ್
ಸೌಜನ್ಯಾ ಹೆಲ್ಪ್ಲೈನ್ ಹೆಸರಿನಲ್ಲಿ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಬೆಳ್ತಂಗಡಿಯ ರಾಜೇಶ್ ಎಂಬುವವರಿಂದ 3.2 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka News Live: ಎಐ ಸ್ಟಾರ್ಟ್ಅಪ್ Perplexity ಖರೀದಿಗೆ ಮುಂದಾದ ಆಪಲ್, 1.21 ಲಕ್ಷ ಕೋಟಿಯ ಡೀಲ್ ಆಗುವ ಸಾಧ್ಯತೆ!
ಆಪಲ್, AI ಸ್ಟಾರ್ಟ್ಅಪ್ ಪರ್ಪ್ಲೆಕ್ಸಿಟಿಯನ್ನು ಖರೀದಿಸಲು ಯೋಜಿಸುತ್ತಿದೆ. ಈ ಒಪ್ಪಂದ ಸುಮಾರು ₹1.21 ಲಕ್ಷ ಕೋಟಿಗಳಷ್ಟು ಮೌಲ್ಯದ್ದಾಗಿದ್ದು, ಆಪಲ್ನ ಇತಿಹಾಸದಲ್ಲೇ ಅತಿ ದೊಡ್ಡ ಖರೀದಿಯಾಗಲಿದೆ. ಈ ಖರೀದಿ AI ಕ್ಷೇತ್ರದಲ್ಲಿ ಆಪಲ್ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ.
ಕುಳಿತಲ್ಲೆ ಎಲ್ಲಾ ಸಿಗುವಾಗ ಅಡುಗೆ ಯಾರು ಮಾಡಿಕೊಳ್ತಾರೆ, ಹೋಟೆಲ್ತನಕ ಯಾರು ಹೋಗ್ತಾರೆ ಎಂದೆಲ್ಲಾ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಅದರಲ್ಲಿಯೂ ಕ್ಲೌಡ್ ಕಿಚನ್ನಲ್ಲಿ ಆರ್ಡರ್ ಮಾಡ್ತೀರಾ? ಹೋಟೆಲ್ಗಳಲ್ಲಿ ಶೆಫ್ ಆಗಿರೋ, ಕೆಲಸ ಮಾಡ್ತಿರೋ ಈ ಯುವಕರ ಮಾತೊಮ್ಮೆ ಕೇಳಿಬಿಡಿ...
Karnataka News Live: ಹಿಂದುತ್ವದ ಶಿಕ್ಷಣ ಪಡೆದವರು ಜಗತ್ತಿಗೇ ಮಾದರಿ - ಕಲ್ಲಡ್ಕ ಪ್ರಭಾಕರ್ ಭಟ್
ಸುಲ್ಕೇರಿಯ ಶ್ರೀರಾಮ ಶಾಲೆಯ ಪ್ರವೇಶೋತ್ಸವದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಹಿಂದೂ ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಶಿಕ್ಷಣ ಕ್ಷೇತ್ರದಿಂದ ಸಾಧ್ಯ ಎಂದರು. ಮಕ್ಕಳ ಸಂಸ್ಕಾರಯುತ ಬೆಳವಣಿಗೆಗೆ ತಾಯಂದಿರ ಪಾತ್ರ ಮುಖ್ಯ ಎಂದು ಅವರು ಹೇಳಿದರು.
Karnataka News Live: K L Rahul ನನ್ನ ಅಳಿಯನಾಗಬೇಕು ಎಂದು ಮ್ಯಾನಿಫೆಸ್ಟ್ ಮಾಡಿದ್ದೆ - ಸುನಿಲ್ ಶೆಟ್ಟಿ
ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ, ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮುದ್ದಿನ ಅಳಿಯ ರಾಹುಲ್ ಬಗ್ಗೆ ಸುನಿಲ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Karnataka News Live: UPSC Pratibha Setu - ಸಂದರ್ಶನದಲ್ಲಿ ಫೇಲ್ ಆದ್ರೂ ಸಿಗಲಿದೆ ಕೆಲಸ, ಹೊಸ ಯೋಜನೆ ಆರಂಭಿಸಿದ UPSC
UPSC Pratibha Setu Portal: ಯುಪಿಎಸ್ಸಿ ಪರೀಕ್ಷೆಯ ಸಂದರ್ಶನದಲ್ಲಿ ಉತ್ತೀರ್ಣರಾಗದವರಿಗೆ 'ಪ್ರತಿಭಾ ಸೇತು' ಪೋರ್ಟಲ್ ಮೂಲಕ ಉದ್ಯೋಗಾವಕಾಶ. ಖಾಸಗಿ ಕಂಪನಿಗಳು ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ನೇಮಕ ಮಾಡಿಕೊಳ್ಳಬಹುದು.