ಮೈಸೂರು(ಮಾ.08): ಮೈಸೂರಿನ ವಿದ್ಯಾರಣ್ಯಪುರಂ ಸೇರಿದಂತೆ ಹಲವು ಕಡೆ ಕಳೆದೊಂದು ವಾರದಿಂದ 12ಕ್ಕೂ ಹೆಚ್ಚು ಕೊಕ್ಕರೆಗಳು ಸತ್ತಿರುವ ಸಂಗತಿಗಳು ತಡವಾಗಿ ಬೆಳಕಿಗೆ ಬಂದಿವೆ.

ಪಾಲಿಕೆಯ 55ನೇ ವಾರ್ಡ್‌ನ ವಿದ್ಯಾರಣ್ಯಪುರಂ 5ನೇ ಮುಖ್ಯ ರಸ್ತೆಯಲ್ಲಿ ಇದುವರಿಗೆ ಕಳೆದ 1 ವಾರದಿಂದ 12 ಕೊಕ್ಕರೆಗಳು ಸತ್ತಿದ್ದು, ಕಾರಣ ತಿಳಿದಿಲ್ಲ. ಈ ವಿಚಾರ ತಿಳಿದು ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ ಸ್ಥಳಕ್ಕೆ ಆಗಮಿಸಿ ಪಶುವೈದ್ಯ ಡಾ. ನಾಗರಾಜ್‌ ಅವರಿಗೆ ತಿಳಿಸಿದರು. ಅವರೂ ಸ್ಥಳಕ್ಕೆ ಭೇಟಿ ನೀಡಿ ಮೃತ ಕೊಕ್ಕರೆ ಶವಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ತಪಾಸಣೆಗಾಗಿ ಕಳುಹಿಸಿದ್ದಾರೆ.

ಕೊರೋನಾ ಆತಂಕ: ಕಾಗೆಗಳ ಸಾಮೂಹಿಕ ಸಾವು

ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೃಗಾಲಯ ಇರುವುದರಿಂದ ಹಾಗೂ ಇತರ ಪ್ರಾಣಿ ಪಕ್ಷಿಗಳಿಗೆ ಈ ಕೊಕ್ಕರೆಗಳಿಗೆ ತಗುಲಿರುವ ಸೋಂಕು ಮೃಗಾಲಯದ ಪಕ್ಷಿಗಳಿಗೂ ತಗುಲದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ರಾಮಪ್ರಸಾದ್‌ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.