MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Ranveer Allahabadiya: ಪಾಪ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ರ ಬೀರ್ ಬೈಸೆಪ್ಸ್ ಖ್ಯಾತಿಯ ರಣವೀರ್ ಅಲಹಾಬಾದಿಯ?

Ranveer Allahabadiya: ಪಾಪ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ರ ಬೀರ್ ಬೈಸೆಪ್ಸ್ ಖ್ಯಾತಿಯ ರಣವೀರ್ ಅಲಹಾಬಾದಿಯ?

ವಿವಾದಗಳಿಗೆ ಗುರಿಯಾದ ಬೀರ್ ಬೈಸೆಪ್ಸ್ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 

2 Min read
Pavna Das
Published : Jun 21 2025, 10:46 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Instagram

ಒಂದಲ್ಲ ಎರಡು ಬಾರಿ ಬೇರೆ ಬೇರೆ ಕಾರಣಕ್ಕಾಗಿ ದೇಶಾದ್ಯಂತ ಜನರ ವಿರೋದಕ್ಕೆ ಕಾರಣವಾಗಿ ಸುದ್ದಿಗಳಿಗೆ ಆಹಾರವಾಗಿದ್ದ ಬೀರ್ ಬೈಸೆಪ್ಸ್ ಖ್ಯಾತಿಯ ಯೂಟ್ಯೂಬರ್ ರಣವೀರ್ ಅಲಹಾಬಾದಿಯ (Ranveer Allabadia) ಇದೀಗ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.

25
Image Credit : Instagram

ಪಂಚೆ ಮತ್ತು ಶಲ್ಯ ಧರಿಸಿ ಕುಕ್ಕೆ ಸುಬ್ರಹ್ಮಣ (Kukke Subramanya Temple) ದೇಗುಲದ ಮುಂದೆ ನಿಂತು ಫೋಟೊ ತೆಗೆಸಿಕೊಂಡಿರುವ ರಣವೀರ್ ಕಿಂಗ್ ಎನರ್ಜಿ ಎಂದು ಒಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದರೆ, ಮತ್ತೊಂದು ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಇಂತಹ ಅನುಭವಗಳನ್ನು ಪಡೆಯೋದಕ್ಕೆ, ಭಾರತದಲ್ಲಿ ಇರಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲಾ ಕಡೆಯಿಂದ ಆಶೀರ್ವಾದ ಸಿಗುತ್ತಿದೆ ಎಂದು ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲ ಈಟ್ಸ್ ಟೈಮ್ ಟು ಸೆಟಲ್ ಡೌನ್ ಇನ್ ಕರ್ನಾಟಕ ಎಂದು ಸಹ ಬರೆದಿದ್ದಾರೆ.

Related Articles

Related image1
Now Playing
ರಣವೀರ್‌ ಬಗ್ಗೆ ಬೋನಿ ಕಪೂರ್‌ ಮಾತು | Boney Kapoor on YouTuber Ranveer Allahbadia | Suvarna News
Related image2
Ranveer Allahbadia Case: ಅಶ್ಲೀಲ ಕೃತ್ಯ ಎಸಗಿದರೆ ಭಾರತದಲ್ಲಿ ಇರುವ ಶಿಕ್ಷೆಯ ಪ್ರಮಾಣ ಎಷ್ಟು?
35
Image Credit : Instagram

ವಿವಾದಗಳ ಮೇಲೆ ವಿವಾದಗಳನ್ನು ಮೈಗೆಳೆದುಕೊಂಡ ಬಳಿಕ ಸುಬ್ರಹ್ಮಣ್ಯದಲ್ಲಿ ರಣವೀರ್ ಅವರನ್ನು ನೋಡಿದ ಜನರು ಇವರು ತಾವು ಮಾಡಿದ ಪಾಪ ಕರ್ಮಗಳನ್ನು ಕಳೆಯಲು ಇಲ್ಲಿಗೆ ಬಂದಿದ್ದಾರೆ ಎಂದಿದ್ದಾರೆ. ಒಬ್ಬರು ಮಾಡಿದ ಪಾಪ ಕರ್ಮಗಳನ್ನು ಕೆಲವೊಮ್ಮೆ ಗಂಗೆಯಲ್ಲಿ ಮಿಂದರು ಪರಿಹಾರ ಆಗುವುದಿಲ್ಲ , ಅಂತಹ ಸಮಯದಲ್ಲಿ ದೈವ ದೇವರ ಭೂಮಿ ತುಳುನಾಡಿಗೆ ಬಂದು ಪರಿಹಾರ ಮಾಡಿಕೊಳ್ಳುತ್ತಾರೆ. ತಪ್ಪುಗಳು ಮಾಡುವುದು ಮನುಜನ ಸಹಜ ಗುಣ, ಅದನ್ನು ಅರಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡುವವನೆ ನಿಜವಾದ ಮನುಜ, When he accepted and trying to come out of it through spiritual rout lets appreciate it ಎಂದು ಕಾಮೆಂಟ್ ಮಾಡಿದ್ದಾರೆ.

45
Image Credit : Instagram

ಅಂದ ಹಾಗೆ ರಣವೀರ್ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಂದ ನ್ಯಾಷನ್‌ ಕ್ರಿಯೇಟರ್‌ ಅವಾರ್ಡ್‌ ಕೂಡ ಪಡೆದುಕೊಂಡಿದ್ದರು ಹಾಗಾಗಿ ಅವರಿಗೆ ಫಾಲೋವರ್ಸ್ ಗಳ ಸಂಖ್ಯೆಯೂ ಜಾಸ್ತಿ ಇತ್ತು. ಆದರೆ ಅದಾಗ ಬಳಿಕ ಇಂಡಿಯಾಸ್‌ ಗಾಟ್‌ ಲಾಟೆಂಟ್‌ ಶೋನಲ್ಲಿ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವ ರಣವೀರ್‌, 'ನೀವು ಜೀವನಪೂರ್ತಿ ನಿಮ್ಮ ಅಪ್ಪ-ಅಮ್ಮ ಸೆಕ್ಸ್‌ ಮಾಡೋದನ್ನ ನೋಡೋಕೆ ಇಷ್ಟಪಡ್ತೀರಾ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್‌ ಮಾಡಲು ಇಷ್ಟಪಡುತ್ತೀರಾ? ಎಂದು ಹೇಳುವ ಮೂಲಕ ದೇಶಾದ್ಯಂತ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದರು. ಅದರ ನಂತರ ರಣವೀರ್ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

55
Image Credit : Social Media

ಈ ವಿಚಾರ ತಣ್ಣದಾದ ನಂತರ ಮತ್ತೊಂದು ಬಾರಿ ವಿವಾದಕ್ಕೆ ಒಳಗಾಗಿದ್ದರು ರಣವೀರ್. ತಮ್ಮ ಪೋಸ್ಟ್‌ನಲ್ಲಿ ರಣವೀರ್ ಅಲ್ಲಾಹಾಬಾದಿಯಾ ಪಾಕಿಸ್ತಾನಿಯರ ಪರ 'ಸಹೋದರ ಸಹೋದರಿಯರೆ' ಎಂಬ ಪದ ಬಳಸಿ ಪೋಸ್ಟ್ ಮಾಡಿ, ಮತ್ತೆ ಟೀಕೆಗೆ ಗುರಿಯಾಗಿದ್ದರು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಯೂಟ್ಯೂಬರ್
ರಣವೀರ್ ಅಲ್ಲಾಹಾಬಾದಿಯಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved